ಆ್ಯಪ್ನಗರ

ಪ್ರತಿ ಉದ್ಯೋಗಿಗೂ 35 ಲಕ್ಷ ರೂ. ಬೋನಸ್‌! ಉದ್ಯೋಗಿಗಳ ಪಾಲಿಗೆ ಅಸಲಿ ಸಾಂತಾ ಕ್ಲಾಸ್‌ ಇವರೇ!

ಕ್ರಿಸ್‌ಮಸ್‌ ಪಾರ್ಟಿಗೆ ಬಂದಿದ್ದ ಉದ್ಯೋಗಿಗಳಿಗೆ ಶಾಕ್‌ ಕಾದಿತ್ತು. ಪ್ರತಿ ಉದ್ಯೋಗಿಗೂ ಬಾಸ್‌ 35 ಲಕ್ಷ ರೂ. ಬೋನಸ್‌ ನೀಡಿದ್ದಾರೆ. ಈ ಸರ್‌ಪ್ರೈಸ್‌ಗೆ ಉದ್ಯೋಗಿಗಳ ಪ್ರತಿಕ್ರಿಯೆ ಹೀಗಿದೆ ನೋಡಿ.

Vijaya Karnataka 13 Dec 2019, 12:55 pm
ವಾಷಿಂಗ್ಟನ್‌: ಬಾಸ್‌ ಕರೆದಿದ್ದ ಪಾರ್ಟಿಗೆ ಬಂದಿದ್ದ ಉದ್ಯೋಗಿ­ಗಳು, ತಮ್ಮ ಮುಂದಿದ್ದ ಕೆಂಪು ಲಕೋಟೆ ತೆರೆದು ನೋಡಿ ಬೆಕ್ಕಸ ಬೆರಗಾದರು! ಕೆಲವರು ಇದನ್ನು ನಂಬೋದು ಹೇಗೆ ಎನ್ನುವಂತೆ ಮುಖಮುಖ ನೋಡಿಕೊಂಡರು. ಒಬ್ಬರನ್ನೊ­ಬ್ಬರು ತಬ್ಬಿಕೊಂಡು ಸಂತೋಷ ಹಂಚಿ­ಕೊಂ­ಡರು! ಇದು ಉದ್ಯೋಗಿಗಳ ಪಾಲಿಗೆ ಅಸಲಿ ಸಂತೋಷದ ಆಘಾತ!!
Vijaya Karnataka Web bonus


ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ ಮೂಲದ ಕಂಪನಿಯಲ್ಲಿ 200 ಉದ್ಯೋಗಿಗಳಿದ್ದು, ಕ್ರಿಸ್‌ಮಸ್‌ ಬೋನಸ್‌ ಆಗಿ ಪ್ರತಿಯೊಬ್ಬ ಉದ್ಯೋಗಿಗೂ 35 ಲಕ್ಷ ರೂ. ಸಿಕ್ಕಿದೆ. ತಮ್ಮ ಬಾಸ್‌ ಬಗ್ಗೆ ಖುಷಿಗೊಂಡ ಉದ್ಯೋಗಿಗಳು ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.

ಎಡ್ವರ್ಡ್‌ ಸೇಂಟ್‌ ಜಾನ್‌ ಸ್ಥಾಪಿಸಿದ 'ಸೇಂಟ್‌ ಜಾನ್‌ ಪ್ರಾಬರ್ಟೀಸ್‌' ಎನ್ನುವ ರಿಯಲ್‌ ಎಸ್ಟೇಟ್‌ ಕಂಪನಿಯ ಉದ್ಯೋಗಿಗಳು ನಿರೀಕ್ಷೆಗೂ ಮೀರಿದ ಬೋನಸ್‌ ಅನ್ನು ವರ್ಷದ ಕೊನೆಯಲ್ಲಿ ಪಡೆದಿ­ದ್ದಾರೆ. 81 ವರ್ಷದ ಎಡ್ವರ್ಡ್‌ ಇತ್ತೀಚೆಗೆ ತಮ್ಮ ಕಂಪನಿಯ 198 ಉದ್ಯೋಗಿಗಳನ್ನು ಪಾರ್ಟಿಗೆ ಆಹ್ವಾನಿಸಿದ್ದರು. ಪಾರ್ಟಿಗೆ ಬಂದ ಉದ್ಯೋಗಿಗಳಿಗೆ ಕೆಂಪು ಲಕೋಟೆ ನೀಡಲಾಯಿತು. ಅದನ್ನು ತೆರೆದ ಉದ್ಯೋಗಿಗಳಿಗೆ ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು.

ಈ ಸುದ್ದಿ ಓದಿ: ಕೇಂದ್ರ ಸರಕಾರಿ ನೌಕರರಿಗೆ ಗೋಲ್ಡನ್‌ ಸ್ವಯಂಪ್ರೇರಿತ ನಿವೃತ್ತಿ ಯೋಜನೆ? ಕೇಂದ್ರ ಸಚಿವರು ಹೇಳಿದ್ದೇನು?

ಬೋನಸ್‌ ವಿಷಯ ಪ್ರಕಟಿಸಿದ ಎಡ್ವರ್ಡ್ ಸೇಂಟ್‌ ಜಾನ್‌

ಇದನ್ನೂ ಓದಿ: ಡಿಸೆಂಬರ್‌ ತ್ರೈಮಾಸಿಕದಲ್ಲೂ ಭಾರತದ ಜಿಡಿಪಿ ಶೇ.­4.3ಕ್ಕೆ ಇಳಿಕೆ: ಜಪಾನ್‌ ಹಣಕಾಸು ಸಂಸ್ಥೆ


ಯಕ್ಷಿಣಿ ಇರಬಹುದೇ? ಈ ರಾತ್ರಿ ಏನಾಯಿತೋ ಅದೆಲ್ಲವೂ ಯಕ್ಷಿಣಿಯಂತಿದೆ. ನನ್ನ ಬದುಕು ಬದಲಿಸುವಂಥ ಬೆಳವಣಿಗೆ ಇದು.
- ಉದ್ಯೋಗಿಯೊಬ್ಬರ ಪ್ರತಿಕ್ರಿಯೆ

ಈರುಳ್ಳಿ ಬೆಳೆದು 90 ಲಕ್ಷ ರೂ. ಆದಾಯ ಗಳಿಸಿದ ದುರ್ಗದ ರೈತ

ಅನಿರೀಕ್ಷಿತವಾಗಿ ಜಾಸ್ತಿ ಹಣ ಕೈಸೇರಿದೆ. ಹಳೆಯ ಸಾಲಗಳನ್ನು ಮೊದಲು ತೀರಿಸುವೆ. ಆಮೇಲೆ ಉಳಿದದ್ದು...
-ಇನ್ನೊಬ್ಬ ಉದ್ಯೋಗಿ

ಟೀಮ್‌ ಇಲ್ಲದೇ, ನಾನಿಲ್ಲ.... ಕಂಪನಿಯ ಪ್ರತಿಯೊಬ್ಬ ಉದ್ಯೋಗಿಗೂ ಧನ್ಯವಾದ ಹೇಳುತ್ತೇನೆ. ಎಲ್ಲರೂ ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ದುಡಿದಿದ್ದಾರೆ. ಹೀಗಾಗಿ ಕಂಪನಿ ಉತ್ತಮ ಸ್ಥಿತಿಯಲ್ಲಿ ಮುಂದುವರಿಯುತ್ತಿದೆ. ಇದಕ್ಕೆ ಕಾರಣರಾದ ಉದ್ಯೋಗಿಗಳಿಗೆ ರಿವಾರ್ಡ್‌ ಅನ್ನು ದೊಡ್ಡ ಪ್ರಮಾಣದಲ್ಲಿ ನೀಡಲು ಮುಂದಾಗಿದ್ದೇನೆ. ಇದಕ್ಕಿಂತ ಬೇರೆ ದಾರಿ ಕಾಣಿಸುತ್ತಿಲ್ಲ. ನಾನು ದೋಣಿಯನ್ನು ನಡೆಸುತ್ತಿರಬಹುದು. ಆದರೆ, ಅದು ಸಾಗಲು ಎಲ್ಲರೂ ಸಹಕರಿಸುತ್ತಿದ್ದಾರೆ. ತಂಡ ಇಲ್ಲದೇ ಹೋದರೆ, ನಾನು ಏನೇನೂ ಅಲ್ಲ.
(ಪಾರ್ಟಿಯಲ್ಲಿಎಡ್ವರ್ಡ್‌ ಹೇಳಿದ್ದು)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ