ಆ್ಯಪ್ನಗರ

ಅದಾನಿಗೆ ಪ್ರತಿಭಟನೆ ಬಿಸಿ, ತಿರುವನಂತಪುರಂ ಏರ್‌ಪೋರ್ಟ್‌ ವಶಕ್ಕೆ ಪಡೆದ ಮೊದಲ ದಿನವೇ ಭಾರಿ ವಿರೋಧ

ಅದಾನಿ ಗ್ರೂಪ್‌ಗೆ ವಿಮಾನ ನಿಲ್ದಾಣವನ್ನು ಹಸ್ತಾಂತರಿಸುವುದನ್ನು ವಿರೋಧಿಸುವ ನಮ್ಮ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಿರುವಾಗಲೇ ಸರಕಾರವು ಒಪ್ಪಂದ ಮಾಡಿಕೊಂಡಿದೆ. ಅಂಥ ತುರ್ತು ಏನಿತ್ತು? ಎಂದು ಪ್ರತಿಭಟನಾ ನಿರತ ಸಿಬ್ಬಂದಿ ಕಿಡಿಕಾರಿದ್ದಾರೆ.

Agencies 20 Jan 2021, 7:38 pm
ತಿರುವನಂತಪುರ: ತಿರುವನಂತಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಿಗಳು ಅದಾನಿ ಗ್ರೂಪ್‌ ವಿರುದ್ಧ ಪ್ರತಿಭಟನೆ ನಡೆಸಿದರು.
Vijaya Karnataka Web Adani group


ವಿಮಾನ ನಿಲ್ದಾಣದ ನಿರ್ವಹಣೆಯು ಅದಾನಿ ಗ್ರೂಪ್‌ ಪಾಲಾಗಿದ್ದು, ಈ ಹಿನ್ನೆಲೆಯಲ್ಲಿ ಸಿಬ್ಬಂದಿಯು ನಿರ್ದೇಶನಾಲಯದ ಎದುರು ಪ್ರತಿಭಟನೆ ನಡೆಸಿ, ಅದಾನಿ ಗ್ರೂಪ್‌ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಂಗಳವಾರವಷ್ಟೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಜೊತೆ ಅದಾನಿ ಗ್ರೂಪ್‌ ಒಪ್ಪಂದಕ್ಕೆ ಸಹಿ ಹಾಕಿದೆ. ಅದರನ್ವಯ ತಿರುವನಂತಪುರ, ಗುವಾಹಟಿ, ಜೈಪುರ ವಿಮಾನ ನಿಲ್ದಾಣಗಳ ನಿರ್ವಹಣೆ, ಅಭಿವೃದ್ಧಿಯ ಹೊಣೆ ಅದಾನಿ ಗ್ರೂಪ್‌ಗೆ ಸೇರಲಿದೆ.

‘‘ಅದಾನಿಗೆ ವಿಮಾನ ನಿಲ್ದಾಣ ಹಸ್ತಾಂತರಿಸುವುದನ್ನು ವಿರೋಧಿಸುವ ನಮ್ಮ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿದೆ. ಏತನ್ಮಧ್ಯೆ, ಸರಕಾರವು ಒಪ್ಪಂದ ಮಾಡಿಕೊಂಡಿದೆ. ಅಂಥ ತುರ್ತು ಏನಿತ್ತು?" ಎಂದು ಸಿಬ್ಬಂದಿ ಪ್ರಶ್ನಿಸಿದ್ದಾರೆ.

ಅದಾನಿಗೆ ತಿರುವನಂತಪುರಂ ಏರ್‌ಪೋರ್ಟ್‌ ಹಸ್ತಾಂತರಕ್ಕೆ ಭಾರಿ ವಿರೋಧ, ಪ್ರಧಾನಿಗೆ ಸಿಎಂ ಪತ್ರ
2019ರ ಫೆಬ್ರವರಿಯಲ್ಲಷ್ಟೇ ಕೇಂದ್ರ ಸರಕಾರವು ಲಖನೌ, ಅಹಮದಾಬಾದ್‌, ಮಂಗಳೂರು ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಮಾಡಿ, ಅದಾನಿ ಗ್ರೂಪ್‌ಗೆ ಹಸ್ತಾಂತರಿಸಿತ್ತು. ಈಗ ಇನ್ನಷ್ಟು ಏರ್‌ಪೋರ್ಟ್‌ಗಳು ಅದಾನಿ ವಶಕ್ಕೆ ಹೋಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ