ಆ್ಯಪ್ನಗರ

ಕ್ಲೈಮ್‌ ಸೆಟ್ಲಮೆಂಟ್‌ಗಾಗಿ ಇಪಿಎಫ್‌ಒ ಹೊಸ ವ್ಯವಸ್ಥೆ

ಇಪಿಎಫ್‌ಒ ಸದಸ್ಯರ ಕ್ಲೈಮ್‌ ಸೆಟ್ಲಮೆಂಟ್‌ಗಾಗಿ ಹೊಸ ಯೋಜನೆಯನ್ನು ಹಾಕಿಕೊಂಡಿದೆ. ಸಾಲದ ಕಂತು ಮುಂದೂಡಿಕೆ ಅವಧಿಯಲ್ಲಿನ ಬಡ್ಡಿ ಮನ್ನಾ ಮಾಡಬೇಕು ಎನ್ನುವ ಗ್ರಾಹಕರ ಬೇಡಿಕೆಯನ್ನು ಬ್ಯಾಂಕ್‌ಗಳು ವಿರೋಧಿಸಿವೆ.

Vijaya Karnataka Web 17 Jun 2020, 9:25 am
ಹೊಸದಿಲ್ಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು(ಇಪಿಎಫ್‌ಒ) ಸದಸ್ಯರ ಕ್ಲೈಮ್‌ ಸೆಟ್ಲಮೆಂಟ್‌ಗಾಗಿ ಹೊಸ ವ್ಯವಸ್ಥೆಯನ್ನು ಕಲ್ಪಿಸಿದೆ.
Vijaya Karnataka Web epfo


ದೇಶದ ಯಾವುದೇ ಭಾಗದ ಸದಸ್ಯರೂ ಇನ್ನು ಮುಂದೆ, ಇಪಿಎಫ್‌ಒದ ಯಾವುದೇ ಪ್ರಾದೇಶಿಕ ಕಚೇರಿಯಲ್ಲಿ ಬೇಕಾದರೂ ತಮ್ಮ ಕ್ಲೈಮ್‌ ಸೆಟ್ಲಮೆಂಟ್‌ ಅನ್ನು ಮಾಡಿಕೊಳ್ಳಬಹುದು. ಪಿಎಫ್‌ ವಾಪಸ್‌, ಪಿಂಚಣಿ, ಹಣ ವರ್ಗಾವಣೆ ಸೇರಿದಂತೆ ಯಾವುದೇ ಆನ್‌ಲೈನ್‌ ಕ್ಲೈಮ್‌ಗಳಿಗೆ ಪ್ರಾದೇಶಿಕ ಕಚೇರಿಗಳಲ್ಲಿ ಅವಕಾಶ ನೀಡಲಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಕೆಲವು ಭಾಗಗಳಲ್ಲಿ ಪ್ರಾದೇಶಿಕ ಕಚೇರಿಗಳು ಕಾರ್ಯ ನಿರ್ವಹಿಸದ ಕಾರಣದಿಂದಾಗಿ ಸದಸ್ಯರಿಗೆ ತೊಂದರೆಯಾಗಿತ್ತು.

ಪ್ರಾದೇಶಿಕ ವ್ಯಾಪ್ತಿಯನ್ನು ತೆರವುಗೊಳಿಸಿರುವುದರಿಂದ ಇಪಿಎಫ್‌ ಸದಸ್ಯರು, ತಮಗೆ ಅನುಕೂಲವಾದ ಪ್ರಾದೇಶಿಕ ಕಚೇರಿಗಳಲ್ಲಿ ಸೇವೆ ಪಡೆಯಲು ಸಾಧ್ಯವಾಗುತ್ತದೆ. ಈ ತನಕ ಸದಸ್ಯರು ತಮ್ಮ ವಲಯದ ಪ್ರಾದೇಶಿಕ ಕೇಂದ್ರದಲ್ಲಿ ಮಾತ್ರ ಸೇವೆ ಪಡೆಯಲು ಅವಕಾಶವಿತ್ತು.

ಬಡ್ಡಿ ಮನ್ನಾ ಪ್ರಕರಣದ ವಿಚಾರಣೆ ಸುಪ್ರೀಂನಲ್ಲಿ ಇಂದು
ಹೊಸದಿಲ್ಲಿ: ಇಎಂಐ ಮೊರಾಟೋರಿಯಂ(ಸಾಲದ ಕಂತು ಮುಂದೂಡಿಕೆ) ಅವಧಿಯಲ್ಲಿನ ಬಡ್ಡಿ ಮನ್ನಾ ಮಾಡಬೇಕು ಎನ್ನುವ ಗ್ರಾಹಕರ ಬೇಡಿಕೆಯನ್ನು ಬ್ಯಾಂಕ್‌ಗಳು ವಿರೋಧಿಸಿವೆ. ಈ ಸಂಬಂಧಿ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಜೂ.17ರಂದು ನಡೆಯಲಿದೆ. ಕೋವಿಡ್‌ ಬಿಕ್ಕಟ್ಟಿನಿಂದಾಗಿ ಗೃಹ, ವಾಹನ ಸೇರಿದಂತೆ ಅವಧಿ ಸಾಲಗಳ ಇಎಂಐ ಮುಂದೂಡಲು ಆರ್‌ಬಿಐ ಅವಕಾಶ ನೀಡಿತ್ತು. ಆದರೆ, ಆ ಅವಧಿಯಲ್ಲಿನ ಬಡ್ಡಿ ಮನ್ನಾ ಮಾಡಬೇಕು ಎನ್ನುವ ಒತ್ತಾಯಗಳಿದ್ದು ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಈ ಬಗ್ಗೆ ವಿವರಣೆ ನೀಡುವಂತೆ ಆರ್‌ಬಿಐ ಮತ್ತು ಹಣಕಾಸು ಸಚಿವಾಲಯಕ್ಕೆ ಸುಪ್ರೀಂ ಇತ್ತೀಚೆಗೆ ಸೂಚಿಸಿತ್ತು. ಏತನ್ಮಧ್ಯೆ, ''ಬಡ್ಡಿ ಮನ್ನಾ ಸಾಧ್ಯವಿಲ್ಲ. ಬಡ್ಡಿ ಮನ್ನಾ ಮಾಡಿದರೆ ಬ್ಯಾಂಕ್‌ಗಳಿಗೆ 2 ಲಕ್ಷ ಕೋಟಿ ರೂ. ಹೊರೆ ಬೀಳಲಿದೆ,'' ಎಂದು ಆರ್‌ಬಿಐಗೆ ಬ್ಯಾಂಕ್‌ಗಳು ಹೇಳಿವೆ.

ಸ್ಪರ್ಧಾತ್ಮಕತೆ ಸೂಚ್ಯಂಕ: ಭಾರತಕ್ಕೆ 43ನೇ ರ‍್ಯಾಂಕ್
ಹೊಸದಿಲ್ಲಿ: ವಿಶ್ವ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತವು 2019ರಲ್ಲಿ43ನೇ ರ‍್ಯಾಂಕ್‌ನಲ್ಲಿದೆ. 2018ರಲ್ಲಿ44ನೇ ಸ್ಥಾನದಲ್ಲಿತ್ತು. ಇನ್ನು ಸಿಂಗಾಪುರವು ಮೊದಲ ರ‍್ಯಾಂಕ್‌ ಅನ್ನು ಕಾಯ್ದುಗೊಂಡಿದೆ. ಕಳೆದ 2018ರಲ್ಲಿ8ನೇ ರ‍್ಯಾಂಕ್‌ನಲ್ಲಿದ್ದ ಡೆನ್ಮಾರ್ಕ್ 2ನೇ ರ‍್ಯಾಂಕ್‌ಗೆ ಜಿಗಿದಿದೆ.

ನೆದರ್‌ಲ್ಯಾಂಡ್‌ 4 ಮತ್ತು ಹಾಂಕಾಂಗ್‌ 5ನೇ ಸ್ಥಾನದಲ್ಲಿವೆ. ಕಳೆದ ವರ್ಷ ಹಾಂಕಾಂಗ್‌ 2ನೇ ಸ್ಥಾನದಲ್ಲಿತ್ತು. ಕಳೆದ ವರ್ಷ 3ನೇ ಸ್ಥಾನದಲ್ಲಿದ್ದ ಅಮೆರಿಕ, ಈಗ 10ನೇ ಸ್ಥಾನಕ್ಕೆ ಕುಸಿದಿದೆ.

ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಡೆವಲಪ್‌ಮೆಂಟ್‌(ಐಎಂಡಿ) ರೂಪಿಸಿರುವ ಸೂಚ್ಯಂಕದಲ್ಲಿಭಾರತದ ರಾರ‍ಯಂಕಿಂಗ್‌ ಕಡಿಮೆ ಇದೆ. ಮೂಲ ಸೌಕರ್ಯ, ಶಿಕ್ಷಣ ಮತ್ತು ಕೌಶಲದ ಕೊರತೆಯಿಂದಾಗಿ ರಾರ‍ಯಂಕಿಂಗ್‌ ಕಡಿಮೆ ಇದೆ ಎಂದು ಅಂತಾರಾಷ್ಟ್ರೀಯ ಬಿಸಿನೆಸ್‌ ಸ್ಕೂಲ್‌ ಆದ ಐಎಂಡಿ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ