ಆ್ಯಪ್ನಗರ

ಭಾರತೀಯರಲ್ಲಿ ಕೋವಿಡ್‌ ನಂತರ ಆರ್ಥಿಕ ಭದ್ರತೆಯ ನಿರೀಕ್ಷೆ ಹೆಚ್ಚಳ

ಪ್ರತಿ ಐವರು ಭಾರತೀಯರಲ್ಲಿ ನಾಲ್ವರು ಒಟ್ಟಾರೆ ಹಣಕಾಸು ಯೋಜನೆಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಎಸ್‌ಬಿಐ ಲೈಫ್ಸ್‌ನ ಹಣಕಾಸು ಭದ್ರತೆ ಸಮೀಕ್ಷೆ ತಿಳಿಸಿದೆ. ವಯದ್ಯಕೀಯ ವೆಚ್ಚ, ಉದ್ಯೋಗ ಅಸ್ಥಿರತೆ, ಹಣದುಬ್ಬರದ ಕುರಿತು ಹೆಚ್ಚು ಚಿಂತೆಗೀಡಾಗಿದ್ದಾರೆ.

Vijaya Karnataka Web 25 Jan 2022, 10:59 pm
ಹೊಸದಿಲ್ಲಿ: ಪ್ರತಿ ಐವರು ಭಾರತೀಯರಲ್ಲಿ ನಾಲ್ವರು ಒಟ್ಟಾರೆ ಹಣಕಾಸು ಯೋಜನೆಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಎಸ್‌ಬಿಐ ಲೈಫ್ಸ್‌ನ ಹಣಕಾಸು ಭದ್ರತೆ ಸಮೀಕ್ಷೆ ತಿಳಿಸಿದೆ.
Vijaya Karnataka Web money 1


ಭಾರತೀಯರು ಅತಿ ಹೆಚ್ಚು ಚಿಂತೆಗೀಡಾಗಿರುವ ವಿಷಯವೇನು?
  • ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚ
  • ಉದ್ಯೋಗ ಅಸ್ಥಿರತೆ
  • ಕುಟುಂಬದ ಆರೋಗ್ಯ ವೆಚ್ಚ
  • ಆರ್ಥಿಕ ಜವಾಬ್ದಾರಿಯ ಒತ್ತಡ
  • ಕೋವಿಡ್‌ ಸಂದರ್ಭದ ಜೀವಹಾನಿ
  • ಸೂಕ್ತ ವಿಮೆ ಸೌಕರ್ಯದ ಕೊರತೆ
  • ಹಣದುಬ್ಬರ

ಕೋವಿಡ್‌ ಬಿಕ್ಕಟ್ಟಿನಿಂದ ಆದಾಯದ ಮೇಲೆ ಪರಿಣಾಮವೇನು?
  • 60% ಮಂದಿ ಅನಗತ್ಯ ವಸ್ತುಗಳಿಗೆ ವೆಚ್ಚ ಕಡಿತಗೊಳಿಸಿದ್ದಾರೆ.
  • 50% ಮಂದಿ ತುರ್ತು ನಿಧಿ ಬಳಸಿದ್ದಾರೆ.
  • 44% ಮಂದಿ ಬಂಧು ಬಳಗದಿಂದ ಸಾಲ ಪಡೆದಿದ್ದಾರೆ.
  • 44% ಮಂದಿ ಹಲವು ಮೂಲಗಳಿಂದ ಆದಾಯ ಗಳಿಸಿದ್ದಾರೆ.
  • 43% ಮಂದಿ ಹೂಡಿಕೆಯನ್ನು ಮಾರಾಟ ಮಾಡಿದ್ದಾರೆ.
  • 42% ಮಂದಿ ಸಾಲ ತೀರಿಸಲು ಕ್ರೆಡಿಟ್‌ ಕಾರ್ಡ್‌ ಬಳಸಿದ್ದಾರೆ.
  • 29% ಮಂದಿ ಗೃಹ ಸಾಲ ಇಎಂಐ ಕಟ್ಟುತ್ತಿಲ್ಲ
  • 23% ಮಂದಿ ಜೀವ ವಿಮೆ ಪ್ರೀಮಿಯಂ ಕಟ್ಟಿಲ್ಲ
  • 23% ಮಂದಿ ಆರೋಗ್ಯ ವಿಮೆ ಪ್ರೀಮಿಯಂ ಕಟ್ಟಿಲ್ಲ

ಭಾರತೀಯರಿಗೆ ಆರ್ಥಿಕ ಭದ್ರತೆ ಎಂದರೇನು?
  • 57% ಮಂದಿಯ ಪ್ರಕಾರ ಹಣಕಾಸು ಸ್ಥಿತಿಗತಿ ಚೆನ್ನಾಗಿರುವುದು ಮತ್ತು ಸ್ಥಿರವಾಗಿರುವುದು.
  • 48% ಮಂದಿಗೆ ಹಲವು ಮೂಲಗಳಿಂದ ಆದಾಯ ಗಳಿಕೆಯೇ ಭದ್ರತೆ.
  • 43% ಮಂದಿಗೆ ಒಳ್ಳೆಯ ಉದ್ಯೋಗ ಅಥವಾ ಬಿಸಿನೆಸ್‌
  • 36% ಮಂದಿಗೆ ಕೋವಿಡ್‌ ಬಿಕ್ಕಟ್ಟಿನ ನಡುವೆ ವರಮಾನ ಗಳಿಸುವುದು
  • 36% ಮಂದಿಗೆ ಸಾಲ ಮುಕ್ತ ಬದುಕು
  • 35% ಮಂದಿಗೆ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಬದುಕುವುದು.

ಕೋವಿಡ್‌ ಬಿಕ್ಕಟ್ಟಿನ ನಂತರ ಎಫೆಕ್ಟ್
  • 44% ಮಂದಿಗೆ ತಮ್ಮ ಆದಾಯ ಕುಸಿತಕ್ಕೀಡಾದ ಮತ್ತು ನಂತರ ಚೇತರಿಸಿದ ಅನುಭವವಾಗಿದೆ.
  • 35% ಮಂದಿಗೆ ಈಗಲೂ ಆದಾಯ ಕುಸಿದ ಅನುಭವ ಮುಂದುವರಿದಿದೆ.
  • 14% ಮಂದಿಗೆ ಯಾವುದೇ ಪರಿಣಾಮ ಆಗಿಲ್ಲ.
  • 7% ಮಂದಿಗೆ ಆದಾಯದಲ್ಲಿಏರಿಕೆ ಆಗಿದೆ.

ಭಾರತೀಯರು ಹೇಗೆ ಆರ್ಥಿಕ ಭದ್ರತೆ ಹೊಂದುತ್ತಿದ್ದಾರೆ?
  • 68% ಮಂದಿಗೆ ಲಸಿಕೆ ಹಾಕಲಾಗಿದೆ.
  • 56% ಮಂದಿ ತುರ್ತು ನಿಧಿ ಸಂಗ್ರಹಿಸಿದ್ದಾರೆ.
  • 53% ಮಂದಿ ಆರೋಗ್ಯ ವಿಮೆ ಪಡೆದಿದ್ದಾರೆ.
  • 53% ಮಂದಿ ವಿಮೆ ಪಾಲಿಸಿ ಖರೀದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ