ಆ್ಯಪ್ನಗರ

ವಿದೇಶಿ ಹೂಡಿಕೆ ನಿಯಮ ಬಿಗಿ, ಚೀನಾ ಬಂಡವಾಳಕ್ಕೆ ಭಾರತದ ಮೂಗುದಾರ

ಇನ್ನು ಮುಂದೆ ಭಾರತದ ಜತೆಗೆ ಗಡಿಯನ್ನು ಹಂಚಿ­ಕೊಂಡಿರುವ ಎಲ್ಲ ರಾಷ್ಟ್ರಗಳು ದೇಶದಲ್ಲಿ ನೇರ ಅಥವಾ ಪರೋಕ್ಷ ಹೂಡಿಕೆಗೆ ಸರಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ. ಕೊರೊನಾ ಬಿಕ್ಕಟ್ಟಿನ ಅವಕಾಶವನ್ನು ಉಳಿದ ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ನೀಡದೇ ಇರಲು ಭಾರತ ನಿರ್ಧರಿಸಿದೆ.

THE ECONOMIC TIMES 18 Apr 2020, 10:27 pm
ಹೊಸದಿಲ್ಲಿ: ಕೊರೊನಾ ಬಿಕ್ಕಟ್ಟಿನ ಅವಕಾಶವನ್ನು ಬಳಸಿಕೊಂಡು ಚೀನಾ ಭಾರತೀಯ ಮೂಲದ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯಲು ಕೇಂದ್ರ ಸರಕಾರ ವಿದೇಶಿ ನೇರ ಬಂಡವಾಳ ಹೂಡಿಕೆಯ ನಿಯಮಗಳನ್ನು ಶನಿವಾರ ಬಿಗಿಗೊಳಿಸಿದೆ.
Vijaya Karnataka Web China Xi Jinping


ಚೀನಾ ಮತ್ತು ನೆರೆಹೊರೆಯ ರಾಷ್ಟ್ರ­ಗಳಿಗೆ ಭಾರತದಲ್ಲಿ ಯಾವುದೇ ಬಗೆಯ ಹೂಡಿಕೆಗೆ ಸರಕಾರದ ಪೂರ್ವಾನುಮತಿ ಇನ್ನು ಮುಂದೆ ಕಡ್ಡಾಯವಾಗಲಿದೆ. ಭಾರತದ ಜತೆಗೆ ಗಡಿಯನ್ನು ಹಂಚಿ­ಕೊಂಡಿರುವ ಎಲ್ಲ ರಾಷ್ಟ್ರಗಳು ಭಾರತದಲ್ಲಿ ನೇರ ಅಥವಾ ಪರೋಕ್ಷ ಹೂಡಿಕೆಗೆ ಸರಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಶನಿವಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಭಾರತ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ನೀತಿಯನ್ನು ಸಡಿಲಗೊಳಿಸಿತ್ತು. 2017ರಲ್ಲಿ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯನ್ನು ರದ್ದುಪಡಿಸಲಾಗಿತ್ತು. ಸ್ವಯಂಚಾಲಿತ ವ್ಯವಸ್ಥೆ ಅಡಿಯಲ್ಲಿ ವಿದೇಶಿ ಹೂಡಿಕೆಗೆ ಕೇಂದ್ರ ಸರಕಾರ, ಆರ್‌ಬಿಐನ ಪೂರ್ವಾನುಮತಿಯ ಅಗತ್ಯ ಇರ­ಲಿಲ್ಲ. ಈ ಹಿಂದೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಮೂಲದ ಹೂಡಿಕೆಗೆ ಮಾತ್ರ ಹೆಚ್ಚಿನ ನಿರ್ಬಂಧಗಳು ಇರುತ್ತಿತ್ತು.

ಇತ್ತೀಚೆಗೆ ಪೀಪಲ್ಸ್‌ ಬ್ಯಾಂಕ್‌ ಆಫ್‌ ಚೈನಾ, ಭಾರತದ ಎಚ್‌ಡಿಎಫ್‌ಸಿಯಲ್ಲಿ ತನ್ನ ಷೇರು ಪಾಲನ್ನು ಶೇ. 0.8ರಿಂದ ಶೇ. 1.01ಕ್ಕೆ ಹೆಚ್ಚಿಸಿತ್ತು. ಇದರ ಬೆನ್ನಿಗೆ ಸರಕಾರ ಎಚ್ಚೆತ್ತುಕೊಂಡಿದ್ದು, ಎಫ್‌ಡಿಐ ನಿಯಮಗಳನ್ನು ಪರಿಷ್ಕರಿಸಿದೆ. ಚೀನಿ ಕಂಪನಿಗಳು ಭಾರತದಲ್ಲಿ ಅನೇಕ ಸ್ಟಾರ್ಟಪ್‌ಗಳಲ್ಲಿ 400 ಕೋಟಿ ಡಾಲರ್‌ಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಿವೆ. ಮುಂಬರುವ ತಿಂಗಳುಗಳಲ್ಲಿ ಚೀನಾ ಹೂಡಿಕೆ ಮೇಲೆ ಪರಿಷ್ಕೃತ ನಿಯಮಗಳು ಪ್ರಭಾವ ಬೀರಲಿವೆ.

ಚೀನಾದ ಮೇಲೆ ನಿಗಾ ತೀವ್ರ

ಈಗ ಜಾಗತಿಕ ಮಟ್ಟದಲ್ಲಿ ನಾನಾ ರಾಷ್ಟ್ರಗಳು ವಿದೇಶಿ ಹೂಡಿಕೆಯ ನೀತಿಗಳನ್ನು ಬಿಗಿಗೊಳಿಸುತ್ತಿವೆ. ಚೀನಿ ಹೂಡಿಕೆಯ ಮೇಲೆ ನಿಗಾ ವಹಿಸತೊಡಗಿವೆ. ಸ್ಪೇನ್‌, ಜರ್ಮನಿ, ಆಸ್ಪ್ರೇಲಿಯಾ, ಇಟಲಿ ಕೂಡ ಎಫ್‌ಡಿಐ ನಿಯಮಗಳನ್ನು ಬಿಗಿಗೊಳಿಸಿವೆ.

ರಾಹುಲ್‌ ಸ್ವಾಗತವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮಗಳನ್ನು ಬಿಗಿಗೊಳಿಸಿರುವ ಸರಕಾರದ ಕ್ರಮವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ವಾಗತಿಸಿದ್ದಾರೆ. ಈ ಹಿಂದೆ ತಾವು ನೀಡಿದ್ದ ಎಚ್ಚರಿಕೆಯನ್ನು ಸರಕಾರ ಪರಿಗಣಿಸಿದ್ದಕ್ಕೆ ಧನ್ಯವಾದಗಳು ಎಂದು ಟ್ವೀಟ್‌ ಮಾಡಿ­ದ್ದಾರೆ. ಕೋವಿಡ್‌-19 ರೋಗ ಹರಡಿದ ನಂತರ ದೇಶದ ಆರ್ಥಿಕತೆ ದುರ್ಬಲವಾಗಿರುವು­ದರಿಂದ ಭಾರತೀಯ ಕಂಪನಿ­ಗಳನ್ನು ಖರೀದಿ­ಸಲು ವಿದೇಶಿ ಕಾರ್ಪೊ­ರೇಟ್‌ ಕಂಪನಿಗಳು ಯತ್ನಿಸಬಹುದು. ಇದನ್ನು ತಡೆಯಬೇಕು ಎಂದು ರಾಹುಲ್‌ ಗಾಂಧಿ ಇತ್ತೀಚೆಗೆ ಟ್ವೀಟ್‌ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ