ಹೊಸದಿಲ್ಲಿ: ದಿಲ್ಲಿ ಸರಕಾರದ 2023 - 24ನೇ ಸಾಲಿನ ಆಯವ್ಯಯಕ್ಕೆ ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಅನುಮತಿ ನೀಡಿದೆ. ಆಯವ್ಯಯ ಪತ್ರದಲ್ಲಿ ಕೆಲವೊಂದು ಮಾರ್ಪಾಡು ಮಾಡಿ ಅರವಿಂದ ಕೇಜ್ರಿವಾಲ್ ಸರಕಾರ ರವಾನಿಸಿದ ಪರಿಷ್ಕೃತ ಬಜೆಟ್ಗೆ ಗೃಹ ಇಲಾಖೆ ಅಂಗೀಕಾರದ ಮುದ್ರೆ ಒತ್ತಿದೆ. ಮಂಗಳವಾರ ಪ್ರಸಕ್ತ ಸಾಲಿನ ಆಯವ್ಯಯ ಮಂಡನೆಗೆ ಸಜ್ಜಾಗಿದ್ದ ಅರವಿಂದ ಕೇಜ್ರಿವಾಲ್ ಸರಕಾರ 78 ಸಾವಿರ ಕೋಟಿ ರೂ. ಗಾತ್ರದ ಬಜೆಟ್ ಮಂಡನೆಗೆ ಅನುಮತಿ ಕೋರಿ ಕೇಂದ್ರ ಸರಕಾರಕ್ಕೆ ಕಳುಹಿಸಿತ್ತು. ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗಿಂತ ಜಾಹೀರಾತಿಗೆ ಹೆಚ್ಚು ಅನುದಾನ ಮೀಸಲಿಟ್ಟಿರುವ ಬಗ್ಗೆ ಆಕ್ಷೇಪ ಎತ್ತಿದ್ದ ಗೃಹ ಸಚಿವಾಲಯ, ಸ್ಪಷ್ಟೀಕರಣ ಕೇಳಿ ಆಯವ್ಯಯ ಪತ್ರವನ್ನು ಲೆಫ್ಟಿನೆಂಟ್ ಗವರ್ನರ್ಗೆ ವಾಪಸ್ ಕಳಿಸಿತ್ತು.
ಗೃಹ ಇಲಾಖೆ ಕ್ರಮದಿಂದ ಮಂಗಳವಾರ ಮಂಡನೆಯಾಗಬೇಕಿದ್ದ ಬಜೆಟ್ ಮುಂದೂಡಿಕೆಯಾಗಿತ್ತು. ''ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ದಿಲ್ಲಿ ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಮಾಡುತ್ತಿದೆ. 75 ವರ್ಷಗಳ ದೇಶದ ರಾಜಕೀಯ ಚರಿತ್ರೆಯಲ್ಲಿ ಈ ರೀತಿ ಬಜೆಟ್ ಮಂಡನೆಗೆ ತಡೆ ಹಿಡಿದ ಉದಾಹರಣೆಗಳು ಇಲ್ಲ. ಬಿಜೆಪಿ ಸರಕಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ,'' ಎಂದು ಪ್ರಧಾನಿ ಮೋದಿಗೆ ಪತ್ರ ಬರೆದು ಕೇಜ್ರಿವಾಲ್ ಆರೋಪ ಮಾಡಿದ್ದರು.
ಕೇಂದ್ರ ಸರಕಾರ ಕೋರಿದ್ದ ಸ್ಪಷ್ಟೀಕರಣಕ್ಕೆ ಉತ್ತರ ನೀಡಿದ ದಿಲ್ಲಿ ಹಣಕಾಸು ಸಚಿವ ಕೈಲಾಶ್ ಗೆಹ್ಲೋಟ್, ಮೊದಲಿಗೆ ಕಳುಹಿಸಿದ್ದ ಆಯವ್ಯಯಕ್ಕೆ ಕೆಲವೊಂದು ಮಾರ್ಪಾಟು ಮಾಡಿ ಮಂಗಳವಾರ ಗೃಹ ಇಲಾಖೆಗೆ ಪುನಃ ಕಳಿಸಿಕೊಟ್ಟರು. ಬಳಿಕ ಪರಿಷ್ಕೃತ ಬಜೆಟ್ಗೆ ಗೃಹ ಇಲಾಖೆ ಅನುಮೋದನೆ ನೀಡಿದೆ.
ಕೇಂದ್ರ ಗೃಹ ಇಲಾಖೆ ಸ್ಪಷ್ಟೀಕರಣ
ದಿಲ್ಲಿ ಸರಕಾದ ಬಜೆಟ್ಗೆ ಕೇಂದ್ರ ಸರಕಾರ ತಡೆ ಹಿಡಿದಿರಲಿಲ್ಲ. ರಾಜಧಾನಿ ಪ್ರದೇಶದ ಜನರ ಹಿತ, ಆರ್ಥಿಕ ಹಿತದೃಷ್ಟಿಯಿಂದ ಕೆಲವೊಂದು ಸ್ಪಷ್ಟನೆ ಕೇಳಿತ್ತು. ಸ್ಪಷ್ಟೀಕರಣ ನೀಡಲು ವಿಳಂಬ ಮಾಡಿದ ದಿಲ್ಲಿ ಸರಕಾರದ ನಡವಳಿಕೆಯಿಂದ ಅನುಮತಿ ನೀಡಿರಲಿಲ್ಲ. ಆದರೂ ಕೇಂದ್ರ ಸರಕಾರ ಬಜೆಟ್ ತಡೆ ಹಿಡಿದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.
ದಿಲ್ಲಿ ವಿಧಾನಸಭೆಯಲ್ಲಿ ಭಾರೀ ಗದ್ದಲ
ಬಜೆಟ್ ಮಂಡನೆ ವಿಚಾರವಾಗಿ ದಿಲ್ಲಿ ವಿಧಾನಸಭೆಯಲ್ಲಿ ಬಿಜೆಪಿ - ಆಮ್ ಆದ್ಮಿ ಪಕ್ಷದ ನಡುವೆ ರಾದ್ದಾಂತವೇ ನಡೆಯಿತು. ಬಜೆಟ್ ಮಂಡಿಸಲಾಗದ ಹಣಕಾಸು ಸಚಿವರು ರಾಜೀನಾಮೆ ನೀಡಲಿ ಎಂದು ಬಿಜೆಪಿ ಆಗ್ರಹಿಸಿತು. ಕೇಂದ್ರ ಸರಕಾರ ರಾಜಕೀಯ ದುರುದ್ದೇಶದಿಂದ ಬಜೆಟ್ ತಡೆ ಹಿಡಿದಿದೆ ಎಂದು ಆಪ್ ಆರೋಪಿಸಿತು. ಉಭಯ ಪಕ್ಷಗಳ ಗದ್ದಲದಿಂದ ಕಲಾಪವನ್ನು ಮುಂದೂಡಿಕೆ ಮಾಡಲಾಯಿತು.
ಗೃಹ ಇಲಾಖೆ ಕ್ರಮದಿಂದ ಮಂಗಳವಾರ ಮಂಡನೆಯಾಗಬೇಕಿದ್ದ ಬಜೆಟ್ ಮುಂದೂಡಿಕೆಯಾಗಿತ್ತು. ''ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ದಿಲ್ಲಿ ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಮಾಡುತ್ತಿದೆ. 75 ವರ್ಷಗಳ ದೇಶದ ರಾಜಕೀಯ ಚರಿತ್ರೆಯಲ್ಲಿ ಈ ರೀತಿ ಬಜೆಟ್ ಮಂಡನೆಗೆ ತಡೆ ಹಿಡಿದ ಉದಾಹರಣೆಗಳು ಇಲ್ಲ. ಬಿಜೆಪಿ ಸರಕಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ,'' ಎಂದು ಪ್ರಧಾನಿ ಮೋದಿಗೆ ಪತ್ರ ಬರೆದು ಕೇಜ್ರಿವಾಲ್ ಆರೋಪ ಮಾಡಿದ್ದರು.
ಕೇಂದ್ರ ಸರಕಾರ ಕೋರಿದ್ದ ಸ್ಪಷ್ಟೀಕರಣಕ್ಕೆ ಉತ್ತರ ನೀಡಿದ ದಿಲ್ಲಿ ಹಣಕಾಸು ಸಚಿವ ಕೈಲಾಶ್ ಗೆಹ್ಲೋಟ್, ಮೊದಲಿಗೆ ಕಳುಹಿಸಿದ್ದ ಆಯವ್ಯಯಕ್ಕೆ ಕೆಲವೊಂದು ಮಾರ್ಪಾಟು ಮಾಡಿ ಮಂಗಳವಾರ ಗೃಹ ಇಲಾಖೆಗೆ ಪುನಃ ಕಳಿಸಿಕೊಟ್ಟರು. ಬಳಿಕ ಪರಿಷ್ಕೃತ ಬಜೆಟ್ಗೆ ಗೃಹ ಇಲಾಖೆ ಅನುಮೋದನೆ ನೀಡಿದೆ.
ಕೇಂದ್ರ ಗೃಹ ಇಲಾಖೆ ಸ್ಪಷ್ಟೀಕರಣ
ದಿಲ್ಲಿ ಸರಕಾದ ಬಜೆಟ್ಗೆ ಕೇಂದ್ರ ಸರಕಾರ ತಡೆ ಹಿಡಿದಿರಲಿಲ್ಲ. ರಾಜಧಾನಿ ಪ್ರದೇಶದ ಜನರ ಹಿತ, ಆರ್ಥಿಕ ಹಿತದೃಷ್ಟಿಯಿಂದ ಕೆಲವೊಂದು ಸ್ಪಷ್ಟನೆ ಕೇಳಿತ್ತು. ಸ್ಪಷ್ಟೀಕರಣ ನೀಡಲು ವಿಳಂಬ ಮಾಡಿದ ದಿಲ್ಲಿ ಸರಕಾರದ ನಡವಳಿಕೆಯಿಂದ ಅನುಮತಿ ನೀಡಿರಲಿಲ್ಲ. ಆದರೂ ಕೇಂದ್ರ ಸರಕಾರ ಬಜೆಟ್ ತಡೆ ಹಿಡಿದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.
ದಿಲ್ಲಿ ವಿಧಾನಸಭೆಯಲ್ಲಿ ಭಾರೀ ಗದ್ದಲ
ಬಜೆಟ್ ಮಂಡನೆ ವಿಚಾರವಾಗಿ ದಿಲ್ಲಿ ವಿಧಾನಸಭೆಯಲ್ಲಿ ಬಿಜೆಪಿ - ಆಮ್ ಆದ್ಮಿ ಪಕ್ಷದ ನಡುವೆ ರಾದ್ದಾಂತವೇ ನಡೆಯಿತು. ಬಜೆಟ್ ಮಂಡಿಸಲಾಗದ ಹಣಕಾಸು ಸಚಿವರು ರಾಜೀನಾಮೆ ನೀಡಲಿ ಎಂದು ಬಿಜೆಪಿ ಆಗ್ರಹಿಸಿತು. ಕೇಂದ್ರ ಸರಕಾರ ರಾಜಕೀಯ ದುರುದ್ದೇಶದಿಂದ ಬಜೆಟ್ ತಡೆ ಹಿಡಿದಿದೆ ಎಂದು ಆಪ್ ಆರೋಪಿಸಿತು. ಉಭಯ ಪಕ್ಷಗಳ ಗದ್ದಲದಿಂದ ಕಲಾಪವನ್ನು ಮುಂದೂಡಿಕೆ ಮಾಡಲಾಯಿತು.