ಆ್ಯಪ್ನಗರ

ಮತ್ತೆ ಬ್ಯಾಂಕ್‌ಗಳ ವಿಲೀನ, ಪಿಎನ್‌ಬಿ, ಓರಿಯಂಟಲ್‌, ಯುನೈಟೆಡ್‌ ಬ್ಯಾಂಕ್‌ ವಿಲೀನ: ನಿರ್ಮಲಾ ಸೀತಾರಾಮನ್‌

ಕಳೆದ ಕೆಲವು ವರ್ಷಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದು ವಂಚನೆ ಮಾಡುತ್ತಿರುವ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

Vijaya Karnataka Web 30 Aug 2019, 7:53 pm
ಹೊಸದಿಲ್ಲಿ: ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್‌ ಗುರಿ ತಲುಪಲು ಕೇಂದ್ರ ಸರಕಾರ ಎಲ್ಲ ರೀತಿಯ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳ ವಿಲೀನ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.
Vijaya Karnataka Web ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್


ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಿರ್ಮಲಾ ಸೀತಾರಾಮನ್ ಹಲವಾರು ಸುಧಾರಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಬ್ಯಾಂಕ್‌ಗಳ ವಿಲೀನ: ದೇಶದಲ್ಲೀಗ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಂಖ್ಯೆ 27ರಿಂದ 12ಕ್ಕೆ ಇಳಿಕೆ
ಮೆಗಾ ಬ್ಯಾಂಕ್‌ ವಿಲೀನದಿಂದ ನಿಮ್ಮ ಮೇಲಾಗುವ ಪರಿಣಾಮಗಳಿವು

ಲಾಭದತ್ತ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು: ಸಿಹಿ ಸುದ್ದಿ ಕೊಟ್ರು ಸೀತಾರಾಮನ್


ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಓರಿಯಂಟಲ್‌ ಬ್ಯಾಂಕ್ ಆಫ್‌ ಕಾಮರ್ಸ್‌ ಹಾಗೂ ಯುನೈಟೆಡ್‌ ಬ್ಯಾಂಕ್‌ ವಿಲೀನವಾಗಲಿದೆ. ಮೂರು ಬ್ಯಾಂಕ್‌ ವಿಲೀನದ ನಂತರ ಇದು ದೇಶದ ಎರಡನೇ ಅತಿ ದೊಡ್ಡ ಬ್ಯಾಂಕ್‌ ಆಗಲಿದೆ. ಒಟ್ಟು 18 ಲಕ್ಷ ಕೋಟಿ ರೂ. ವಹಿವಾಟು ಮೂಲಕ ಎರಡನೇ ಅತಿ ದೊಡ್ಡ ಬ್ಯಾಂಕ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದರು.


ನಂತರ ಯೂನಿಯನ್ ಬ್ಯಾಂಕ್‌, ಆಂಧ್ರ ಬ್ಯಾಂಕ್‌, ಕಾರ್ಫೊರೇಷನ್‌ ಬ್ಯಾಂಕ್‌ಗಳ ವಿಲೀನ ಮಾಡಲಾಗುವುದು. ಇದು ದೇಶದ ಐದನೇ ಅತಿ ದೊಡ್ಡ ಬ್ಯಾಂಕ್‌ ಆಗಿ ಹೊರಹೊಮ್ಮಲಿದೆ. ಇದರ ಒಟ್ಟು 14.6 ಲಕ್ಷ ಕೋಟಿ ರೂ. ಎಂದು ಸಚಿವರು ಮಾಹಿತಿ ನೀಡಿದರು.


ಇಂಡಿಯನ್‌ ಬ್ಯಾಂಕ್‌ ಮತ್ತು ಅಲಹಾಬಾದ್‌ ಬ್ಯಾಂಕ್‌ ವಿಲೀನ ಕೂಡ ಮಾಡಲಾಗುವುದು. ಈ ಬ್ಯಾಂಕ್‌ಗಳ ವಿಲೀನದೊಂದಿಗೆ ಒಟ್ಟು ವಹಿವಾಟು 8.08 ಲಕ್ಷ ಕೋಟಿ ಆಗಲಿದ್ದು ಇದು ದೇಶದ ಏಳನೇ ಅತಿ ದೊಡ್ಡ ಬ್ಯಾಂಕ್‌ ಆಗಲಿದೆ. ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದರು.


ಕೆನರಾ ಬ್ಯಾಂಕ್‌ ಜತೆ ಸಿಂಡಿಕೇಟ್‌ ಬ್ಯಾಂಕ್‌ ವಿಲೀನ ಮಾಡುವ ಮೂಲಕ ನಾಲ್ಕನೇ ಅತಿ ದೊಡ್ಡ ಬ್ಯಾಂಕ್‌ ಆಗಲಿದೆ. ಇದರ ಒಟ್ಟು ವಹಿವಾಟು 15.20 ಲಕ್ಷ ಕೋಟಿ ರೂ. ಆಗಲಿದೆ ಎಂದು ವಿತ್ತ ಸಚಿವರು ತಿಳಿಸಿದರು.


250 ಕೋಟಿ ರೂ.ಗಳಿಗಿಂತಲೂ ಹೆಚ್ಚು ಮೊತ್ತದ ಸಾಲ ಪಡೆಯಬೇಕಾದರೆ ವಿಶೇಷ ಏಜೆನ್ಸಿಗಳು ಇದರ ಬಗ್ಗೆ ನಿಗಾ ವಹಿಸುತ್ತವೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ನೀರವ್‌ ಮೋದಿಯಂಥ ಪ್ರಕರಣಗಳನ್ನು ತಡೆಯಲು ಕೋರ್‌ ಬ್ಯಾಂಕ್‌ಗಳ ನಡುವೆ ತ್ವರಿತ ಸಂದೇಶಗಳ ಜಾಲ ಆರಂಭಿಸಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ