ಆ್ಯಪ್ನಗರ

ದೇಶದಲ್ಲಿಯೇ ಮೊದಲು, ಕೇರಳದಲ್ಲಿ ಸರಕಾರದಿಂದಲೇ ತರಕಾರಿಗಳ ಮೂಲ ಬೆಲೆ ನಿಗದಿ

ಮೊದಲ ಹಂತದಲ್ಲಿ ರಾಜ್ಯದಲ್ಲಿ ಉತ್ಪಾದನೆಯಾಗುವ 16 ಬಗೆಯ ತರಕಾರಿಗಳ ಮೂಲ ದರವನ್ನು ನಿಗದಿಪಡಿಸಲು ಕೇರಳ ಸರಕಾರ ನಿರ್ಧರಿಸಿದ್ದು, ನಿಯಮಿತವಾಗಿ ಮೂಲ ದರದ ಪರಿಷ್ಕರಣೆ ಆಗುತ್ತಿರುತ್ತವೆ.

Agencies 27 Oct 2020, 7:13 pm
ತಿರುವನಂತಪುರ: ತರಕಾರಿಗಳಿಗೆ ಮೂಲ ಬೆಲೆಯನ್ನು ಕೇರಳ ಸರಕಾರ ನಿಗದಿ ಮಾಡಿದೆ. ಮೂಲ ಬೆಲೆ ನಿಗದಿ ಮಾಡಿದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.
Vijaya Karnataka Web vegetable


ತರಕಾರಿ ಉತ್ಪಾದನೆಗಿಂತಲೂ 20% ಅಧಿಕ ಮೊತ್ತವನ್ನು ಸರಕಾರ ನಿಗದಿ ಮಾಡುತ್ತದೆ. ರೈತಾಪಿ ವರ್ಗಕ್ಕೆ ಇದರಿಂದ ಅನುಕೂಲವಾಗಲಿದೆ. ಯೋಜನೆಯು ನವೆಂಬರ್‌ 1ರಿಂದ ಜಾರಿಗೆ ಬರಲಿದೆ. ಕೇರಳದಲ್ಲಿ ತರಕಾರಿಗಳ ಉತ್ಪಾದನೆಯು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಎರಡು ಪಟ್ಟು ಏರಿಕೆಯಾಗಿದೆ ಎಂದು ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಕೇರಳದಲ್ಲಿ ಉತ್ಪಾದನೆಯಾಗುವ 16 ಬಗೆಯ ತರಕಾರಿಗಳಿಗೆ ಈ ಮೂಲ ದರ ಅನ್ವಯವಾಗಲಿದೆ. ನಿಯಮಿತವಾಗಿ ಮೂಲ ದರದ ಪರಿಷ್ಕರಣೆ ಆಗುತ್ತಿರುತ್ತದೆ.

ಮಾರುಕಟ್ಟೆಯಲ್ಲಿ ತರಕಾರಿಗೆ ಮೂಲ ದರಕ್ಕಿಂತಲೂ ಕಡಿಮೆ ಬೆಲೆ ಇದ್ದ ಪಕ್ಷದಲ್ಲಿ, ಮೂಲ ದರಕ್ಕೆ ರೈತರಿಂದ ಸರಕಾರವೇ ಖರೀದಿ ಮಾಡಲಿದೆ. ತರಕಾರಿಯ ಗುಣಮಟ್ಟದ ಆಧಾರದ ಮೇಲೆ ದರ ನಿಗದಿ ಮಾಡಲಾಗುತ್ತದೆ.

ಸರಕಾರದ ಸ್ಥಳೀಯ ಆಡಳಿತ ಸಂಸ್ಥೆಗಳು, ಈ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ. ತರಕಾರಿಯ ದಾಸ್ತಾನು ಮತ್ತು ವಿತರಣೆ ಕಾರ್ಯಗಳಲ್ಲಿ ಸಮನ್ವಯ ವಹಿಸಲಿವೆ. ಯೋಜನೆಯ ಲಾಭ ಪಡೆಯಲು ಇಚ್ಛಿಸುವ ರೈತರು, ನ.1ರಿಂದ ಸರಕಾರದ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ