ಆ್ಯಪ್ನಗರ

ತಿರುಪತಿ ದೇವಾಲಯ ಸಿಬ್ಬಂದಿಗೆ ಪೂರ್ಣ ವೇತನ, ಸಂಬಳ ಕಡಿತ ಇಲ್ಲ

​ಈ ಹಿಂದೆ ಟಿಟಿಡಿ ತನ್ನ ಸಿಬ್ಬಂದಿ ವೇತನ ಪಾವತಿಸಲು ಮತ್ತು ದೈನಂದಿನ ವೆಚ್ಚ ಸರಿದೂಗಿಸಲು ಹಣದ ಕೊರತೆ ಎದುರಿಸುತ್ತಿರುವುದಾಗಿ ಹೇಳಿತ್ತು. ಆದರೆ ​​ಟಿಟಿಡಿ ಮಂಡಳಿ ನಿಶ್ಚಿತ ಠೇವಣಿಗಳಿಂದ ಬಡ್ಡಿ ಆದಾಯವಾಗಿ ವಾರ್ಷಿಕ 700 ಕೋಟಿ ರೂ. ಗಳಿಸುತ್ತಿದೆ.

THE ECONOMIC TIMES 11 May 2020, 7:59 pm
ತಿರುಪತಿ: ಜಗತ್ತಿನ ಅತ್ಯಂತ ಶ್ರೀಮಂತ ದೇವಸ್ಥಾನ ತಿರುಪತಿಯ ವೆಂಕಟೇಶ್ವರ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್‌ (ಟಿಟಿಡಿ), ದೇಗುಲದ ಸಿಬ್ಬಂದಿಗೆ ವೇತನ ಕಡಿತ ಮಾಡುತ್ತಿಲ್ಲ ಎಂದಿದೆ. ಹಾಗೆಯೇ ಎಲ್ಲ23,000 ಸಿಬ್ಬಂದಿಗೆ ಮುಂದಿನ 2-3 ತಿಂಗಳವರೆಗೆ ಪೂರ್ಣ ವೇತನ ನೀಡುವ ವಿಶ್ವಾಸ ವ್ಯಕ್ತಪಡಿಸಿದೆ.
Vijaya Karnataka Web Tirupati Temple


ತಿರುಪತಿ ದೇವಾಲಯದಲ್ಲಿ 8,000 ಕಾಯಂ ಉದ್ಯೋಗಿಗಳೂ, 15,000 ಹೊರಗುತ್ತಿಗೆಯ ಉದ್ಯೋಗಿಗಳೂ ಇದ್ದಾರೆ. ಲಾಕ್‌ಡೌನ್‌ ಪರಿಣಾಮ ತಿಂಗಳಿಗೆ 200 ಕೋಟಿ ರೂ. ನಷ್ಟವಾಗುತ್ತಿದ್ದು, ಇದುವರೆಗೆ 400 ಕೋಟಿ ರೂ. ಆದಾಯ ನಷ್ಟವಾಗಿದೆ ಎಂದು ಟಿಟಿಡಿ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.

ಈ ಹಿಂದೆ ಟಿಟಿಡಿ ತನ್ನ ಸಿಬ್ಬಂದಿ ವೇತನ ಪಾವತಿಸಲು ಮತ್ತು ದೈನಂದಿನ ವೆಚ್ಚ ಸರಿದೂಗಿಸಲು ಹಣದ ಕೊರತೆ ಎದುರಿಸುತ್ತಿರುವುದಾಗಿ ಹೇಳಿತ್ತು. ಆದರೆ ಟಿಟಿಡಿ ಮಂಡಳಿ ನಿಶ್ಚಿತ ಠೇವಣಿಗಳಿಂದ ಬಡ್ಡಿ ಆದಾಯವಾಗಿ ವಾರ್ಷಿಕ 700 ಕೋಟಿ ರೂ. ಗಳಿಸುತ್ತಿದೆ. ನಾನಾ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ 12,000 ಕೋಟಿ ರೂ. ಫಿಕ್ಸೆಡ್‌ ಡಿಪಾಸಿಟ್‌ಗಳನ್ನು ಟಿಟಿಡಿ ಹೊಂದಿದೆ. ಜೊತೆಗೆ 8 ಟನ್‌ ಚಿನ್ನವೂ ದೇವಸ್ಥಾನದ ಬಳಿ ಇದೆ.

"ಆರ್ಥಿಕ ಅಡಚಣೆಗಳಿದ್ದರೂ ಟಿಟಿಡಿ ತನ್ನ ಸಿಬ್ಬಂದಿಗೆ ಮುಂದಿನ 2-3 ತಿಂಗಳು ಪೂರ್ಣ ವೇತನ ನೀಡುವ ಸಾಮರ್ಥ್ಯ‌ ಹೊಂದಿದೆ" ಎಂದು ಸುಬ್ಬಾ ರೆಡ್ಡಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ