ಆ್ಯಪ್ನಗರ

ಜಿಡಿಪಿ ಅಂದಾಜು ವಿವಾದ: ಅಂಗೀಕೃತ ವಿಧಾನಗಳನ್ನು ಅನುಸರಿಸಲಾಗಿದೆ ಎಂದ ಸರಕಾರ

ಅಂಕಿ ಅಂಶಗಳು ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಹೇಳಿಕೆ ನೀಡಿದ್ದು, ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಅಂದಾಜಿನ ಆಸುಪಾಸಿನಲ್ಲೇ ಜಿಡಿಪಿ ಬೆಳವಣಿಗೆ ದರವನ್ನು ಸರಕಾರ ಅಂದಾಜಿಸಿದೆ ಎಂದು ಸ್ಪಷ್ಟಪಡಿಸಿದೆ. 2011-12 ಮತ್ತು 2016-17ರ ನಡುವೆ ಆರ್ಥಿಕ ಬೆಳವಣಿಗೆ ದರವನ್ನು ಶೇ 2.5ರಷ್ಟು ಕಡಿತಗೊಳಿಸಿರುವುದು ಬದಲಾದ ಜಿಡಿಪಿ ಮಾನದಂಡಗಳ ಪರಿಣಾಮವಾಗಿದೆ ಎಂದು ಸುಬ್ರಹ್ಮಣ್ಯನ್ ಹೇಳಿದ್ದರು.

PTI 11 Jun 2019, 11:01 pm
ಹೊಸದಿಲ್ಲಿ: ಜಿಡಿಪಿ ಮರು ಅಂದಾಜಿನ ಕುರಿತು ಮಾಜಿ ಸಿಇಎ ಅರವಿಂದ್ ಸುಬ್ರಹ್ಮಣ್ಯನ್ ಮಾಡಿದ ಟೀಕೆಗಳನ್ನು ಸರಕಾರ ತಳ್ಳಿಹಾಕಿದೆ. ಚಾಲ್ತಿಯಲ್ಲಿರುವ ಹಾಗೂ ಅಂಗೀಕೃತ ರಾಷ್ಟ್ರೀಯ ಆದಾಯದ ಮಾನದಂಡಗಳ ಆಧಾರದಲ್ಲೇ ಜಿಡಿಪಿ ಲೆಕ್ಕಹಾಕಲಾಗಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ.
Vijaya Karnataka Web GDP Estimation


ಅಂಕಿ ಅಂಶಗಳು ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಹೇಳಿಕೆ ನೀಡಿದ್ದು, ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಅಂದಾಜಿನ ಆಸುಪಾಸಿನಲ್ಲೇ ಜಿಡಿಪಿ ಬೆಳವಣಿಗೆ ದರವನ್ನು ಸರಕಾರ ಅಂದಾಜಿಸಿದೆ ಎಂದು ಸ್ಪಷ್ಟಪಡಿಸಿದೆ.

2011-12 ಮತ್ತು 2016-17ರ ನಡುವೆ ಆರ್ಥಿಕ ಬೆಳವಣಿಗೆ ದರವನ್ನು ಶೇ 2.5ರಷ್ಟು ಕಡಿತಗೊಳಿಸಿರುವುದು ಬದಲಾದ ಜಿಡಿಪಿ ಮಾನದಂಡಗಳ ಪರಿಣಾಮವಾಗಿದೆ ಎಂದು ಸುಬ್ರಹ್ಮಣ್ಯನ್ ಹೇಳಿದ್ದರು.

ಈ ಅವಧಿಯಲ್ಲಿ ಭಾರತದ ಜಿಡಿಪಿ ದರ 4.5ರಷ್ಟಿರಬೇಕಿತ್ತು. ಆದರೆ ಸರಕಾರ ಜಿಡಿಪಿ ದರ ಶೇ 7ರಷ್ಟಿದೆ ಎಂದು ಅಂದಾಜಿಸಿದೆ ಎಂದು ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರಬಂಧವೊಂದರ ಬಿಡುಗಡೆ ವೇಳೆ ಸುಬ್ರಹ್ಮಣ್ಯನ್ ಪ್ರತಿಪಾದಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ