ಆ್ಯಪ್ನಗರ

ಕೋಟ್ಯಾಧಿಪತಿಗಳನ್ನೇ ಮಕಾಡೆ ಮಲಗಿಸುತ್ತಿದೆ ಆರ್ಥಿಕ ಹಿಂಜರಿತ!: ಜುಂಜನ್ ವಾಲಾ ಕಳೆದುಕೊಂಡಿದ್ದೆಷ್ಟು?

ದೇಶದ ಆರ್ಥಿಕ ಹಿಂಜರಿಕೆಯಿಂದಾಗಿ ಜನಪ್ರಿಯ ಸಂಸ್ಥೆಗಳೇ ತನ್ನ ಗ್ರಾಹಕರನ್ನು ಕಳೆದುಕೊಳ್ತಿವೆ, ಲಾಭಾಂಶ, ಉತ್ಪಾದನೆಯಲ್ಲಿ ಕುಸಿತ ಕಾಣ್ತಿವೆ. ಇದರ ಪರಿಣಾಮ ‍‍ಷೇರು ಮಾರುಕಟ್ಟೆ ಹಾಗೂ ಷೇರುಪೇಟೆ ದಲ್ಲಾಳಿಗಳಿಗೂ ತಟ್ಟುತ್ತಿದೆ. ಕೋಟ್ಯಾಧೀಶರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ.

THE ECONOMIC TIMES 3 Sep 2019, 3:34 pm
ಹೊಸ ದಿಲ್ಲಿ: ಮಂಗಳವಾರದ ಷೇರುಪೇಟೆ ವಹಿವಾಟಿನ ಆರಂಭದಲ್ಲೇ ಅಮಂಗಳಕಾರಿ ಸುದ್ದಿ ಕಾದಿತ್ತು. ಆ ಸುದ್ದಿ ಬರಸಿಡಿಲಿನಂತೆ ಬಡಿದದ್ದು, ಷೇರು ಮಾರುಕಟ್ಟೆ ಪ್ರವೀಣ, ಪ್ರಖ್ಯಾತ ಷೇರ್ ಬ್ರೋಕರ್ ರಾಕೇಶ್ ಜುಂಜನ್ ವಾಲಾ ಅವರಿಗೆ! ಬೆಳಿಗ್ಗೆಯಿಂದ ಮಧ್ಯಾಹ್ನದೊಳಗೆ ಅವರು ಬರೋಬ್ಬರಿ 200 ಕೋಟಿ ರೂ. ಕಳೆದುಕೊಂಡಿದ್ದಾರೆ!
Vijaya Karnataka Web rakesh junjanwala


ಸರಿಸುಮಾರು 12,000 ಕೋಟಿ ರೂ. ಮೌಲ್ಯದ ಷೇರುಗಳನ್ನು ಹೊಂದಿರುವ ಜುಂಜನ್ ವಾಲಾ ಬಳಿ, ಟೈಟಾನ್ ನ ಬಿಗ್ ಬುಲ್ ಕ್ರೌನ್ ಜ್ಯುವೆಲ್ಸ್ ಷೇರುಗಳು ಭಾರೀ ಪ್ರಮಾಣದಲ್ಲಿವೆ. ಆದ್ರೆ, ಟಾಟಾ ಗ್ರೂಪ್ ನ ಆದಾಯದಲ್ಲಿ ಏರಿಕೆ ದಾಖಲಾದ ಹಿನ್ನೆಲೆಯಲ್ಲಿ, ಟೈಟಾನ್ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡಿತು. ಟೈಟಾನ್ ಅಷ್ಟೇ ಅಲ್ಲ, ಇನ್ನೂ ಹಲವು ಕಂಪನಿಗಳ ಷೇರುಗಳು ರಾಕೇಶ್ ಜುಂಜನ್ ವಾಲಾ ಬಳಿಯಲ್ಲಿದ್ದರೂ ಕೂಡಾ, ಟೈಟಾನ್ ಷೇರುಗಳಿಂದಲೇ ಅವರು ಹೆಸರುವಾಸಿ. ಜುಂಜನ್ ವಾಲಾ ಹಾಗೂ ಅವರ ಪತ್ನಿ ಜಂಟಿಯಾಗಿ ಟೈಟಾನ್ ನ ಶೇ.7.05ರಷ್ಟ ಷೇರುಗಳನ್ನು ಹೊಂದಿದ್ದಾರೆ. ಇವರ ಬಳಿ ಇರುವ ಟೈಟಾನ್ ಷೇರುಗಳ ಒಟ್ಟು ಮೌಲ್ಯ ಬರೋಬ್ಬರಿ 6,700 ಕೋಟಿ. ರೂ.

ಆಭರಣಗಳು ಟೈಟಾನ್ ನ ಪ್ರಮುಖ ಉತ್ಪನ್ನವಾದ್ರೂ ಕೂಡಾ, ವಾಚ್ ಗಳಿಂದಲೇ ಟೈಟಾನ್ ಮಾರುಕಟ್ಟೆಯಲ್ಲಿ ಜನಪ್ರಿಯ. ಭಾರತದ ಅರ್ಧದಷ್ಟು ಗಡಿಯಾರ ಮಾರುಕಟ್ಟೆಯನ್ನು ಟೈಟಾನ್ ಆಕ್ರಮಿಸಿಕೊಂಡಿದೆ. ಇನ್ನು, ಈ ವರ್ಷಾರಂಭದಲ್ಲಿ ಟೈಟಾನ್ ಆಭರಣಗಳ ಮಾರಾಟದಲ್ಲಿ ಶೇ. 20ರಷ್ಟು ಕುಸಿತ ಕಂಡಿದೆ. ಆದ್ರೆ ಹಬ್ಬದ ವೇಳೆ ಮಾರಾಟ ವೃದ್ಧಿ ಆಗಿರಬಹುದು ಅನ್ನೋ ನಂಬಿಕೆ ಇದ್ದು, ವರದಿಗಾಗಿ ಮಾರುಕಟ್ಟೆ ಪರಿಣಿತರು ಕಾಯುತ್ತಿದ್ದಾರೆ.

ಷೇರು ಮಾರುಕಟ್ಟೆ ಬ್ರೋಕರ್ ಜುಂಜನ್ ವಾಲಾ, ನಿರ್ಮಾಣ ರಂಗದ ಡಿಹೆಚ್ ಎಫ್ ಎಲ್ ಷೇರುಗಳನ್ನೂ ಹೊಂದಿದ್ದಾರೆ. ಆದ್ರೆ, ಡಿಹೆಚ್ ಎಫ್ ಎಲ್ ಷೇರು ಮೌಲ್ಯ ಈವರೆಗೂ ಶೇ. 81ರಷ್ಟು ಭಾರೀ ಪ್ರಮಾಣದ ಕುಸಿತ ಕಂಡಿದೆ. ಹೀಗಾಗಿ ಡಿಹೆಚ್ ಎಫ್ ಎಲ್ ಮಾಲೀಕತ್ವವೇ ಬದಲಾಗುವ ಸಾಧ್ಯತೆ ಇದೆ. 2019ರ ಆರಂಭದಿಂದ ಈವರೆಗೆ ರಾಕೇಶ್ ಜುಂಜನ್ ವಾಲಾ ಅವರ ಷೇರುಗಳು ಶೇ. 37ರಷ್ಟು ಕುಸಿತ ಕಂಡಿವೆ.

ಟ್ರ್ಯಾಕ್ಟರ್ ಸಾಲ ನೀಡುವ ಎಸ್ಕಾರ್ಟ್ಸ್ ಷೇರು ಕೂಡಾ ಜುಂಜನ್ ವಾಲಾ ಬಳಿಯಿದೆ, ಆದ್ರೆ, ಮಾನ್ಸೂನ್ ಕೊರತೆ ಹಾಗೂ ವಿಳಂಬದಿಂದಾಗಿ ಆ ಕ್ಷೇತ್ರದಲ್ಲೂ ಕುಸಿತ ಕಂಡಿದೆ. ಕೈಗಾರಿಕಾ ವಲಯದ ಕುಸಿತದಿಂದಾಗಿ ನಿರ್ಮಾಣ ಉಪಕರಣಗಳ ವಹಿವಾಟು ಕೂಡಾ ಕುಸಿದಿದೆ. ಇಲ್ಲೂ ಜುಂಜನ್ ವಾಲಾ ಅವರ ಷೇರುಗಳಿದ್ದು, ಯಥಾಪ್ರಕಾರ ಹೊಡೆತ ತಿಂದಿವೆ.

ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ರಾಕೇಶ್ ಜುಂಜನ್ ವಾಲಾ, ಈ ರೀತಿಯ ಹಿಂಜರಿಕೆಯನ್ನು ತಾವು ಮಾರುಕಟ್ಟೆಯಲ್ಲಿ ಎಂದೂ ಕಂಡಿರಲಿಲ್ಲ ಎಂದಿದ್ದಾರೆ. ಪರಿಸ್ಥಿತಿ ಸುಧಾರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ