ಮೈಸೂರು: ಜಾಗತೀಕರಣದ ಪ್ರಭಾವದಿಂದಾಗಿ ದೇಶದಲ್ಲಿ ಬಡತನದ ಪ್ರಮಾಣ ಕಡಿಮೆಯಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ(ಐಎಂಎಫ್) ಸಂಶೋಧÜನಾ ವಿಭಾಗದ ಆರ್ಥಿಕ ಸಲಹೆಗಾರರು ಹಾಗೂ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ.ಗೀತಾ ಗೋಪಿನಾಥ್ ಅಭಿಪ್ರಾಯಪಟ್ಟರು.
ಜೆಎಸ್ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಸೋಮವಾರ ನಡೆದ ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸ- 9 ಮತ್ತು ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. 'ಜಾಗತೀಕರಣ- ಸವಾಲುಗಳು ಮತ್ತು ಸಹಕಾರದ ಅಗತ್ಯ' ಕುರಿತು ಮಾತನಾಡಿದ ಅವರು, ''ಜಾಗತೀಕರಣದಿಂದ ಹೆಚ್ಚಿನ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗಿದ್ದು, ಜನ ಸಾಮಾನ್ಯರ ಜೀವನ ಮಟ್ಟ ಸುಧಾರಣೆಯಾಗಿದೆ. ಬಡತನ ರೇಖೆಗಿಂತ ಕೆಳಗೆ ಇರುವವವರ ಸಂಖ್ಯೆ ಕಡಿಮೆಯಾಗಿದೆ,'' ಎಂದು ಹೇಳಿದರು.
''ಇತ್ತೀಚೆಗೆ ಜಾಗತೀಕರಣಕ್ಕೂ ವಿರೋಧ ವ್ಯಕ್ತವಾಗುತ್ತಿದ್ದು, ಶೇ.1ರಷ್ಟು ಜನರ ಬಳಿ ದೇಶದ ಶೇ.20ರಷ್ಟು ಹಣ ಕ್ರೋಡೀಕರಣವಾಗುತ್ತಿದೆ. ಶ್ರೀಮಂತರು ಮತ್ತು ಬಡವರ ನಡುವೆ ಅಂತರ ಹೆಚ್ಚಾಗಿ ಆರ್ಥಿಕ ಆಸಮಾನತೆಗೆ ಕೂಡ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ,'' ಎಂದು ಹೇಳಿದರು.
''90ರ ದಶಕಕ್ಕೆ ಹೋಲಿಸಿದರೆ ಭಾರತ ಆರ್ಥಿಕವಾಗಿ ಸದೃಢವಾಗಿದ್ದು, ಶೇ.20ರಷ್ಟಿದ್ದ ಜಿಡಿಪಿ ದರ 29ಕ್ಕೆ ಏರಿದೆ. ಶೇ.0.2ರಷ್ಟಿದ್ದ ರಫ್ತು ಪ್ರಮಾಣ ಶೇ.2ಕ್ಕೆ ಏರಿದೆ, ಚೀನಾಕ್ಕೆ ಹೋಲಿಸಿದರೆ ಭಾರತದ ರಫ್ತು ಪ್ರಮಾಣದ ಏರಿಕೆ ಕಡಿಮೆ ಇದೆ,'' ಎಂದು ಹೇಳಿದರು.
''ದೇಶದಲ್ಲಿ ಉತ್ಪಾದನಾ ಪ್ರಮಾಣ ಕಡಿಮೆಯಾಗಿದ್ದು ಉದ್ಯೋಗಾವಕಾಶ ಕ್ಷೀಣಿಸುತ್ತಿದೆ. ಶೇ. 15ರಷ್ಟು ಉದ್ಯೋಗಾವಕಾಶವನ್ನು ಯಂತ್ರಗಳು ಆಕ್ರಮಿಸಿಕೊಂಡರೆ, ಜಾಗತಿಕ ಮಟ್ಟದಲ್ಲಿ ಈ ಪ್ರಮಾಣ ಶೇ.9ರಷ್ಟಿದೆ,'' ಎಂದು ಹೇಳಿದರು.
ಸಾಲ ಮನ್ನಾಬದಲು, ರೈತರ ಖಾತೆಗೆ ಹಣ ಹಾಕಬೇಕು...
''ರೈತರ ಸಂಕಷ್ಟ ಪರಿಹಾರಕ್ಕೆ ಸಾಲ ಮನ್ನಾವೇ ಸೂಕ್ತ ಪರಿಹಾರವಲ್ಲ. ರೈತರ ಸಾಲಮನ್ನಾ ಮಾಡುವುದರಿಂದ ಕೇವಲ ಸಾಲ ಪಡೆದ ರೈತರಿಗಷ್ಟೇ ಅನುಕೂಲವಾಗುತ್ತದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅದರ ಬದಲು ಎಲ್ಲ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಇಂತಿಷ್ಟು ಹಣ ನೀಡುವ ಮೂಲಕ ಧನ ಸಹಾಯ ಮಾಡಬಹುದು,'' ಎಂದು ಸಲಹೆ ನೀಡಿದರು.
ಸಹಕಾರ ತತ್ತ್ವ ಅಗತ್ಯ
''ಪ್ರಸ್ತುತ ದಿನಗಳಲ್ಲಿ ಸಹಕಾರ ತತ್ತ್ವ ಅಗತ್ಯವಾಗಿದೆ. ನಮ್ಮಲ್ಲಿ ಭ್ರಷ್ಟಾಚಾರ, ವಾತಾವರಣದಲ್ಲಿನ ಬದಲಾವಣೆ ಮುಂತಾದವು ಸವಾಲಾಗಿ ಪರಿಣಮಿಸಿವೆ. ಜಾಗತಿಕ ಆರ್ಥಿಕತೆಯ ಅಭಿವೃದ್ಧಿಯು ಮುಂದಿನ ಐದು ವರ್ಷಗಳಲ್ಲಿ ಚೀನಾ ಮತ್ತು ಭಾರತವನ್ನು ಅವಲಂಬಿಸಿದೆ ಎಂದು ಅಂದಾಜಿಸಲಾಗಿದೆ. 2008ರಲ್ಲಿ ಬ್ಯಾಂಕ್ಗಳು ಸಂಕಷ್ಟಕ್ಕೆ ಸಿಲುಕಿದಂತೆ ಮುಂದಿನ ದಿನಗಳಲ್ಲಿ ಸಿಲುಕುವುದಿಲ್ಲ ಎಂಬ ನಂಬಿಕೆ ಇದೆ,'' ಎಂದು ಹೇಳಿದರು.
ಎಸ್.ಗುರುಮೂರ್ತಿ ಅವರ 'ಭಾರತ್- ಗ್ಲೋಬಲ್ ಆ್ಯಂಬಿಷನ್ಸ್ ಆ್ಯಂಡ್ ಲೋಕಲ್ ಚಾಲೆಂಜಸ್' ಕೃತಿಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಬಿಡುಗಡೆಗೊಳಿಸಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಇದ್ದರು.
ಜೆಎಸ್ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಸೋಮವಾರ ನಡೆದ ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸ- 9 ಮತ್ತು ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. 'ಜಾಗತೀಕರಣ- ಸವಾಲುಗಳು ಮತ್ತು ಸಹಕಾರದ ಅಗತ್ಯ' ಕುರಿತು ಮಾತನಾಡಿದ ಅವರು, ''ಜಾಗತೀಕರಣದಿಂದ ಹೆಚ್ಚಿನ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗಿದ್ದು, ಜನ ಸಾಮಾನ್ಯರ ಜೀವನ ಮಟ್ಟ ಸುಧಾರಣೆಯಾಗಿದೆ. ಬಡತನ ರೇಖೆಗಿಂತ ಕೆಳಗೆ ಇರುವವವರ ಸಂಖ್ಯೆ ಕಡಿಮೆಯಾಗಿದೆ,'' ಎಂದು ಹೇಳಿದರು.
''ಇತ್ತೀಚೆಗೆ ಜಾಗತೀಕರಣಕ್ಕೂ ವಿರೋಧ ವ್ಯಕ್ತವಾಗುತ್ತಿದ್ದು, ಶೇ.1ರಷ್ಟು ಜನರ ಬಳಿ ದೇಶದ ಶೇ.20ರಷ್ಟು ಹಣ ಕ್ರೋಡೀಕರಣವಾಗುತ್ತಿದೆ. ಶ್ರೀಮಂತರು ಮತ್ತು ಬಡವರ ನಡುವೆ ಅಂತರ ಹೆಚ್ಚಾಗಿ ಆರ್ಥಿಕ ಆಸಮಾನತೆಗೆ ಕೂಡ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ,'' ಎಂದು ಹೇಳಿದರು.
''90ರ ದಶಕಕ್ಕೆ ಹೋಲಿಸಿದರೆ ಭಾರತ ಆರ್ಥಿಕವಾಗಿ ಸದೃಢವಾಗಿದ್ದು, ಶೇ.20ರಷ್ಟಿದ್ದ ಜಿಡಿಪಿ ದರ 29ಕ್ಕೆ ಏರಿದೆ. ಶೇ.0.2ರಷ್ಟಿದ್ದ ರಫ್ತು ಪ್ರಮಾಣ ಶೇ.2ಕ್ಕೆ ಏರಿದೆ, ಚೀನಾಕ್ಕೆ ಹೋಲಿಸಿದರೆ ಭಾರತದ ರಫ್ತು ಪ್ರಮಾಣದ ಏರಿಕೆ ಕಡಿಮೆ ಇದೆ,'' ಎಂದು ಹೇಳಿದರು.
''ದೇಶದಲ್ಲಿ ಉತ್ಪಾದನಾ ಪ್ರಮಾಣ ಕಡಿಮೆಯಾಗಿದ್ದು ಉದ್ಯೋಗಾವಕಾಶ ಕ್ಷೀಣಿಸುತ್ತಿದೆ. ಶೇ. 15ರಷ್ಟು ಉದ್ಯೋಗಾವಕಾಶವನ್ನು ಯಂತ್ರಗಳು ಆಕ್ರಮಿಸಿಕೊಂಡರೆ, ಜಾಗತಿಕ ಮಟ್ಟದಲ್ಲಿ ಈ ಪ್ರಮಾಣ ಶೇ.9ರಷ್ಟಿದೆ,'' ಎಂದು ಹೇಳಿದರು.
ಸಾಲ ಮನ್ನಾಬದಲು, ರೈತರ ಖಾತೆಗೆ ಹಣ ಹಾಕಬೇಕು...
''ರೈತರ ಸಂಕಷ್ಟ ಪರಿಹಾರಕ್ಕೆ ಸಾಲ ಮನ್ನಾವೇ ಸೂಕ್ತ ಪರಿಹಾರವಲ್ಲ. ರೈತರ ಸಾಲಮನ್ನಾ ಮಾಡುವುದರಿಂದ ಕೇವಲ ಸಾಲ ಪಡೆದ ರೈತರಿಗಷ್ಟೇ ಅನುಕೂಲವಾಗುತ್ತದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅದರ ಬದಲು ಎಲ್ಲ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಇಂತಿಷ್ಟು ಹಣ ನೀಡುವ ಮೂಲಕ ಧನ ಸಹಾಯ ಮಾಡಬಹುದು,'' ಎಂದು ಸಲಹೆ ನೀಡಿದರು.
ಸಹಕಾರ ತತ್ತ್ವ ಅಗತ್ಯ
''ಪ್ರಸ್ತುತ ದಿನಗಳಲ್ಲಿ ಸಹಕಾರ ತತ್ತ್ವ ಅಗತ್ಯವಾಗಿದೆ. ನಮ್ಮಲ್ಲಿ ಭ್ರಷ್ಟಾಚಾರ, ವಾತಾವರಣದಲ್ಲಿನ ಬದಲಾವಣೆ ಮುಂತಾದವು ಸವಾಲಾಗಿ ಪರಿಣಮಿಸಿವೆ. ಜಾಗತಿಕ ಆರ್ಥಿಕತೆಯ ಅಭಿವೃದ್ಧಿಯು ಮುಂದಿನ ಐದು ವರ್ಷಗಳಲ್ಲಿ ಚೀನಾ ಮತ್ತು ಭಾರತವನ್ನು ಅವಲಂಬಿಸಿದೆ ಎಂದು ಅಂದಾಜಿಸಲಾಗಿದೆ. 2008ರಲ್ಲಿ ಬ್ಯಾಂಕ್ಗಳು ಸಂಕಷ್ಟಕ್ಕೆ ಸಿಲುಕಿದಂತೆ ಮುಂದಿನ ದಿನಗಳಲ್ಲಿ ಸಿಲುಕುವುದಿಲ್ಲ ಎಂಬ ನಂಬಿಕೆ ಇದೆ,'' ಎಂದು ಹೇಳಿದರು.
ಎಸ್.ಗುರುಮೂರ್ತಿ ಅವರ 'ಭಾರತ್- ಗ್ಲೋಬಲ್ ಆ್ಯಂಬಿಷನ್ಸ್ ಆ್ಯಂಡ್ ಲೋಕಲ್ ಚಾಲೆಂಜಸ್' ಕೃತಿಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಬಿಡುಗಡೆಗೊಳಿಸಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಇದ್ದರು.