ಆ್ಯಪ್ನಗರ

ವೀಳ್ಯದೆಲೆಗೆ ಬಂಗಾರದ ಬೆಲೆ, ಮೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ, ಗ್ರಾಹಕರಿಗೆ ಹೊರೆ

ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಅಗತ್ಯವೆನಿಸಿರುವ ವೀಳ್ಯದೆಲೆಗೆ ಇದೀಗ ಚಿನ್ನದ ಬೆಲೆ ಬಂದಿದ್ದು, ರಾಯಚೂರು ಜಿಲ್ಲೆಯಲ್ಲಿ ಪ್ರತಿ ಒಂದು ಕಟ್ಟು (ನೂರು ಎಲೆಗಳ ನೂರು ಕಟ್ಟು) 10 ರಿಂದ 16 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಇದು ವೀಳ್ಯದೆಲೆ ಮಾರುಕಟ್ಟೆಯಲ್ಲಿ ಇದು ಸಾರ್ವಕಾಲಿಕ ದಾಖಲೆ ಎನಿಸಿದೆ.

Vijaya Karnataka Web 27 Feb 2023, 10:15 am

ಹೈಲೈಟ್ಸ್‌:

  • ಧಾರ್ಮಿಕ ಕಾರ್ಯಗಳಿಗೆ ಅತ್ಯವಶ್ಯಕವೆನಿಸಿರುವ ವೀಳ್ಯದೆಲೆಗೆ ಇದೀಗ ಚಿನ್ನದ ಬೆಲೆ
  • ಮೂರು ಪಟ್ಟು ಹೆಚ್ಚಿನ ಬೆಲೆಗೆ ವೀಳ್ಯದೆಲೆ ಮಾರಾಟ
  • ಗಗನಕ್ಕೇರಿದ ಬೆಲೆಯಿಂದ ಗ್ರಾಹಕರ ಬಾಯಿ ಸುಡುತ್ತಿದೆ ವೀಳ್ಯದೆಲೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web betel leaf
  • ರಾಚಯ್ಯ ಸ್ವಾಮಿ ಮಾಚನೂರು ರಾಯಚೂರು
ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಅತ್ಯವಶ್ಯಕವೆನಿಸಿರುವ ವೀಳ್ಯದೆಲೆಗೆ ಇದೀಗ ಚಿನ್ನದ ಬೆಲೆ ಬಂದಿದೆ. ಜಿಲ್ಲಾದ್ಯಂತ ವೀಳ್ಯದೆಲೆ ಪ್ರತಿ ಒಂದು ಕಟ್ಟಿಗೆ (ನೂರು ಎಲೆಗಳ ನೂರು ಕಟ್ಟು) 10 ರಿಂದ 16 ಸಾವಿರ ರೂ.ವರೆಗೆ ಮಾರಾಟವಾಗುತ್ತಿದ್ದು, ಇದು ಸಾರ್ವಕಾಲಿಕ ದಾಖಲೆ ಎನಿಸಿದೆ.
ಈ ಹಿಂದೆ ವೀಳ್ಯದೆಲೆ ಒಂದು ಕಟ್ಟಿಗೆ 3 ಸಾವಿರ ರೂ. ದೊರೆತರೆ ಹೆಚ್ಚು ಎಂಬಂತಿತ್ತು. ಆದರೆ ಇದೀಗ ಈ ಬೆಲೆ 6 ರಿಂದ 8 ಪಟ್ಟು ಹೆಚ್ಚಿದೆ. ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಿನ ಬೆಲೆಗೆ ವೀಳ್ಯದೆಲೆ ಮಾರಾಟವಾಗುತ್ತಿದೆ.

ವೀಳ್ಯದೆಲೆ ಕ್ಷೇತ್ರ ಎಷ್ಟು?

ಜಿಲ್ಲೆಯ ತುಂಗೆಯ ತಟದ ಎಲೆಬಿಚ್ಚಾಲಿ, ಗಟ್ಟುಬಿಚ್ಚಾಲಿ ಸೇರಿ ಇನ್ನಿತರೆ ಗ್ರಾಮಗಳಲ್ಲಿ ಸುಮಾರು 5.6 ಹೆಕ್ಟೇರ್‌ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತಿದೆ. ಇದೀಗ ಬೇಸಿಗೆ ಕಾರಣಕ್ಕೆ ದರ ದುಬಾರಿಯಾಗಿದೆ.

Davanagere Betel leaves - ದಾವಣಗೆರೆಯ ಪಾರಂಪರಿಕ ವೀಳ್ಯದೆಲೆ ಆ ಜಿಲ್ಲೆಯ ಜನರಿಗೇ ಸಿಗ್ತಾ ಇಲ್ಲ! ಏನು ಕಾರಣ?
ಇಳುವರಿ ಕಡಿಮೆ, ದರ ಏರಿಕೆ

ಜಿಲ್ಲೆಯ ಬಹುತೇಕ ವ್ಯಾಪಾರಿಗಳಿಗೆ ಬಳ್ಳಾರಿ, ಕೋಲಾರ,ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆ ಸೇರಿ ಇನ್ನಿತರ ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ವೀಳ್ಯದೆಲೆಗೆ ಬೇಡಿಕೆ ಬರುತ್ತದೆ. ಆದರೆ, ಇಳುವರಿ ಕಡಿಮೆಯಾಗಿರುವುದು ವೀಳ್ಯದೆಲೆ ಬೆಲೆ ಏರಿಕೆಯಾಗಿದೆ.

ಕಳೆದ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಸುರಿದ ಹೆಚ್ಚು ಮಳೆ ಹಾಗೂ ಕಳೆದೆರಡು ತಿಂಗಳಿಂದ ಇರುವಂತಹ ಮೈ ಕೊರೆಯುವ ಚಳಿಯಿಂದಾಗಿ ವೀಳ್ಯದೆಲೆ ಬಳ್ಳಿಗಳು ಸರಿಯಾಗಿ ಚಿಗುರುತ್ತಿಲ್ಲ. ಎಲೆಗಳು ಉದುರುತ್ತಿದ್ದು, ನಿಗದಿತ ಪ್ರಮಾಣದಲ್ಲಿ ಇಳುವರಿ ಬರುತ್ತಿಲ್ಲ. ಇನ್ನು ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿಅಧಿಕ ಮಳೆ ಸುರಿದ ಪರಿಣಾಮ ಎಲೆತೋಟಗಳಿಗೆ ಹಾನಿಯಾಗಿದೆ ಎನ್ನುತ್ತಾರೆ ರೈತರು. ಇದರ ಜತೆ ಕೆಲ ರೋಗಗಳಿಂದಲೂ ವೀಳ್ಯದೆಲೆ ಬೆಲೆ ಏರಿಕೆಯಾಗಿದೆ.

ವೀಳ್ಯದೆಲೆ ಬೆಲೆ ಗಣನೀಯ ಹೆಚ್ಚಳ; ಹಾವೇರಿ ರೈತರ ಮೊಗದಲ್ಲಿ ಮಂದಹಾಸ
ಗ್ರಾಹಕರಿಗೆ ಹೊರೆ

ಒಂದು ವಾರದಲ್ಲಿ 100 ಎಲೆಯ ಒಂದು ಸಣ್ಣ ಕಟ್ಟಿನ ಬೆಲೆ 50 ರಿಂದ 60 ರೂ. ಹೆಚ್ಚಳ ಆಗುವ ಮೂಲಕ ಗ್ರಾಹಕರ ಪಾಲಿಗೆ ವೀಳ್ಯದೆಲೆ ಹೊರೆಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ವೀಳ್ಯದೆಲೆ ಸರಾಸರಿ 2 ರೂ.ಗೆ ಒಂದರಂತೆ ಮಾರಾಟ ಆಗುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರಿಂದಲೂ ವೀಳ್ಯದೆಲೆಗೆ ಸಾಕಷ್ಟು ಬೇಡಿಕೆ ಇದೆ.

ಶುಭ, ಸಮಾರಂಭಕ್ಕೆ ಬಹುಬೇಡಿಕೆ

ಯಾವುದೇ ಧಾರ್ಮಿಕ ಪೂಜಾ ಕಾರ್ಯಗಳು, ಶುಭ, ಸಮಾರಂಭಗಳು, ಮದುವೆ, ನಡೆಯಬೇಕಾದರೂ ವೀಳ್ಯದೆಲೆ ಬೇಕೇ ಬೇಕು. ಎಲೆ, ಅಡಕೆ ಜಗಿಯುವವರ ಪಾಲಿಗೂ ವೀಳ್ಯದೆಲೆ ಬೇಕು. ಕಳೆದ ಒಂದು ತಿಂಗಳಿನಿಂದ ವೀಳ್ಯದೆಲೆ ಬೆಲೆ ಬರೋಬ್ಬರಿ ಮೂರು ಪಟ್ಟು ಹೆಚ್ಚಳ ಆಗಿದ್ದು, ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ. ಜಿಲ್ಲೆಯಲ್ಲಿ ಕೆಲವು ಮನೆಗಳ ಹತ್ತಿರ ಪೂಜೆಗೆ ಮತ್ತು ಬಳಸಲು ವೀಳ್ಯದೆಲೆಯನ್ನು ಪಾಟ್‌ ಮತ್ತು ಖಾಲಿ ಜಾಗದಲ್ಲಿ ಬೆಳೆಸಿರುವುದು ಕಂಡುಬರುತ್ತಿದ್ದು, ಜಿಲ್ಲೆಯಲ್ಲಿ ವೀಳ್ಯದೆಲೆ ತೋಟಗಳೂ ಕಡಿಮೆಯಾಗುತ್ತಿವೆ.

ಈ ವರ್ಷ ಇಳುವರಿ ಕಡಿಮೆ ಇರುವುದರಿಂದ ಜಿಲ್ಲೆಯಾದ್ಯಂತ ವೀಳ್ಯದೆಲೆ ಬೆಲೆ ಹೆಚ್ಚಾಗಿದೆ. ಒಂದು ಬುಟ್ಟಿ ವೀಳ್ಯದೆಲೆಗೆ ಸಾವಿರ ರೂ. ಹೆಚ್ಚಾಗಿದೆ. ಇದರಿಂದ ನಾವು 50 ರೂ. ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಇದು ಗ್ರಾಹಕರ ಪಾಲಿಗೆ ಹೊರೆಯಾಗಿದೆ ಎನ್ನುತ್ತಾರೆ ರಾಯಚೂರು ವ್ಯಾಪಾರಿ ಖಾಜಾ ಮಹಿಮುದ್ದೀನ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ