ಆ್ಯಪ್ನಗರ

ಬೆಳ್ಳಿ ಖರೀದಿಸಲು ಈಗ ಸುವರ್ಣ ಕಾಲ!

ಬಡವರ ಚಿನ್ನವೆಂದೇ ಕರೆಯಲಾಗುವ ಬೆಳ್ಳಿಗೆ ಗ್ರಾಮೀಣ ಭಾಗದಲ್ಲಿ ಬೇಡಿಕೆ ಹೆಚ್ಚುತ್ತಿದೆ...

TNN 2 May 2018, 5:00 am
ಮುಂಬಯಿ: ಬಡವರ ಚಿನ್ನವೆಂದೇ ಕರೆಯಲಾಗುವ ಬೆಳ್ಳಿಗೆ ಗ್ರಾಮೀಣ ಭಾಗದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಬೆಳ್ಳಿಯ ಆಮದು ಪ್ರಮಾಣ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.10ರಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಹೀಗಾಗಿ, ಹೂಡಿಕೆದಾರರ ಪಾಲಿಗೆ ಬೆಳ್ಳಿ ಉತ್ತಮ ಆಯ್ಕೆಯೇ ಆಗಿದೆ ಅನ್ನುವುದು ತಜ್ಞರ ಅಭಿಪ್ರಾಯ.
Vijaya Karnataka Web golden time to buy silver imports to rise
ಬೆಳ್ಳಿ ಖರೀದಿಸಲು ಈಗ ಸುವರ್ಣ ಕಾಲ!


ಕಳೆದ ವರ್ಷದಿಂದ ಈಚೆಗೆ ಬೆಳ್ಳಿ ದರದಲ್ಲಿ ಶೇ.3.29 ಕಡಿಮೆಯಾಗಿದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಲಿದೆ. ಪ್ರಸ್ತುತ ಬೆಳ್ಳಿ ದರವು ಕೆಜಿಗೆ 39,500 ರೂ.ನ ಆಜೂಬಾಜಿನಲ್ಲಿದೆ.

''ಪ್ರಸಕ್ತ ಬೆಳೆಗಳು ಚೆನ್ನಾಗಿವೆ. ಇನ್ನು ಈ ವರ್ಷ ಮುಂಗಾರು ಮಳೆ ಆಶಾದಾಯಕವಾಗಲಿದೆ ಎನ್ನುವ ಹವಾಮಾನ ಇಲಾಖೆಯ ಅಂದಾಜುಗಳು ಗ್ರಾಮೀಣ ಜನರಲ್ಲಿ ಉತ್ಸಾಹ ತಂದಿದೆ. ಚಿನ್ನದ ದರ ದುಬಾರಿಯಾಗಿರುವುದರಿಂದ ಬೆಳ್ಳಿಯತ್ತ ಜನರು ಮನಸ್ಸು ಮಾಡುತ್ತಿದ್ದಾರೆ. ಹೀಗಾಗಿ ಬೆಳ್ಳಿ ಖರೀದಿ ಹೆಚ್ಚುತ್ತಿದೆ. ಬೇಡಿಕೆ ಪೂರೈಸಲು ಬೆಳ್ಳಿ ಆಮದು ಶೇ.10ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಬುಲಿಯನ್‌ ಫೆಡರೇಷನ್‌ ಕಾರ್ಯದರ್ಶಿ ಹರೇಶ್‌ ಆಚಾರ್ಯ ತಿಳಿಸಿದ್ದಾರೆ.

ಕಳೆದ 35 ವರ್ಷಗಳ ಇತಿಹಾಸ ತೆಗೆದು ನೋಡಿದರೆ, ಬೆಳ್ಳಿ ದರ ಮತ್ತು ಅದಕ್ಕೆ ಸಿಗುತ್ತಿರುವ ರಿಟರ್ನ್ಸ್‌, ಚಿನ್ನಕ್ಕಿಂತಲೂ ಉತ್ತಮವಾಗಿದೆ,'' ಎನ್ನುವುದು ಇಂಡಿಯನ್‌ ಬುಲಿಯನ್‌ ಆ್ಯಂಡ್‌ ಜ್ಯುವೆಲರ್ಸ್‌ ಅಸೋಸಿಯೇಷನ್‌(ಐಬಿಜೆಎ) ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಅಭಿಪ್ರಾಯ.

ಸದ್ಯದ ಟ್ರೆಂಡ್‌ಗಳನ್ನು ಗಮನಿಸಿದರೆ ಬೆಳ್ಳಿ ದರವು ಕೆ.ಜಿಗೆ 47 ಸಾವಿರ ರೂ. ದಾಟುವ ಅವಕಾಶಗಳೂ ಇವೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ