5ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಟೆಲಿಕಾಂ ಕಂಪನಿಗಳಿಗೆ ಸರಕಾರದ ಮನವಿ
ತಂತ್ರಜ್ಞಾನ ವಲಯದ ಸಂಸ್ಥೆಗಳು ಭಾರತೀಯ 5ಜಿ ಮಾದರಿಯನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು. ನಮಗೆ 2ಜಿ ಮತ್ತು 3ಜಿಯ ಪ್ರಯೋಜನವನ್ನು ಆರಂಭದಲ್ಲಿಯೇ ಪಡೆಯಲು ಸಾಧ್ಯವಾಗಿರಲಿಲ್ಲ. 5ಜಿ ಕೂಡ ಕೈತಪ್ಪಬಾರದು ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
Agencies 19 Jan 2021, 7:06 pm
ಹೊಸದಿಲ್ಲಿ: ಟೆಲಿಕಾಂ ಕಂಪನಿಗಳು ಸ್ವದೇಶಿ 5ಜಿ ತಂತ್ರಜ್ಞಾನ ಮಾದರಿಯನ್ನು ಅಭಿವೃದ್ಧಿಪಡಿಸಲು ಶೀಘ್ರ ಮುಂದಾಗಬೇಕೆಂದು ಕೇಂದ್ರ ಸಂಪರ್ಕ ಮತ್ತು ಸಂವಹನ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಒತ್ತಾಯಿಸಿದ್ದಾರೆ. 15ನೇ ಇಂಡಿಯಾ ಡಿಜಿಟಲ್ ಶೃಂಗವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, 5ಜಿ ತಂತ್ರಜ್ಞಾನ ಈಗತಾನೆ ವಿಕಾಸವಾಗುತ್ತಿದೆ. ಭಾರತ ಇದರ ಪ್ರಯೋಜನವನ್ನು ಆದಷ್ಟು ಶೀಘ್ರ ಪಡೆದುಕೊಳ್ಳಬೇಕಾಗಿದೆ. ನಮಗೆ 2ಜಿ ಮತ್ತು 3ಜಿಯ ಪ್ರಯೋಜನವನ್ನು ಆರಂಭದಲ್ಲಿಯೇ ಪಡೆಯಲು ಸಾಧ್ಯವಾಗಿರಲಿಲ್ಲ. 5ಜಿ ಕೂಡ ಕೈತಪ್ಪಬಾರದು ಎಂದರು.
ತಂತ್ರಜ್ಞಾನ ವಲಯದ ಸಂಸ್ಥೆಗಳು ಭಾರತೀಯ 5ಜಿ ಮಾದರಿಯನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು. ಆರೋಗ್ಯ, ಶಿಕ್ಷಣ, ಕೃಷಿ, ರಿಟೇಲ್ ಇತ್ಯಾದಿ ವಲಯಗಳಲ್ಲಿ ಇದರ ಉಪಯೋಗವನ್ನು ಹೆಚ್ಚಿಸಲು ಸಾಧ್ಯವಿದೆ ಎಂದರು.
ಭಾರತದಲ್ಲಿ 2014ರಲ್ಲಿ ಕೇವಲ 2 ಮೊಬೈಲ್ ಉತ್ಪಾದನಾ ಕಾರ್ಖಾನೆಗಳಿದ್ದವು. ಈಗ 268ಕ್ಕೆ ಏರಿಕೆಯಾಗಿದೆ. ಜಗತ್ತಿನಲ್ಲಿ ಎರಡನೇ ಅತಿ ದೊಡ್ಡ ಮೊಬೈಲ್ ಉತ್ಪಾದಕರೆನಿಸಿದ್ದೇವೆ. ಇದೇ ರೀತಿ ಲ್ಯಾಪ್ ಟಾಪ್ ಸೇರಿದಂತೆ ನಾನಾ ಉತ್ಪನ್ನಗಳಲ್ಲೂ ದೇಶ ಮುಂಚೂಣಿಗೆ ಬರಬೇಕು ಎಂದರು.
2021ರ ದ್ವಿತೀಯಾರ್ಧದಲ್ಲಿ ಜಿಯೋದಿಂದ 5ಜಿ ಸೇವೆ - ಮುಕೇಶ್ ಅಂಬಾನಿ
ಆತ್ಮನಿರ್ಭರ ಭಾರತ್ ಎಂದರೆ ಭಾರತವನ್ನು ಏಕಾಂಗಿಯಾಗಿಸುವುದಲ್ಲ, ಜಾಗತಿಕ ಆರ್ಥಿಕತೆಯಲ್ಲಿ ಭಾರತ ಸಕ್ರಿಯ ಪಾತ್ರ ವಹಿಸುವುದಾಗಿದೆ. ಈ ನಿಟ್ಟಿನಲ್ಲಿ ಪಿಎಲ್ಐ (ಉತ್ಪಾದನೆ ಆಧರಿತ ಇನ್ಸೆಂಟಿವ್) ಯೋಜನೆ ಪರಿಣಾಮಕಾರಿಯಾಗಿದೆ ಎಂದರು.
ಪಿಎಲ್ಐ ಯೋಜನೆಗೆ ಎಲ್ಲ ಪ್ರಮುಖ ಕಂಪನಿಗಳು ಅರ್ಜಿ ಸಲ್ಲಿಸಿವೆ. ಮುಂಬರುವ 5 ವರ್ಷಗಳಲ್ಲಿ 10 ಲಕ್ಷ ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ಗಳನ್ನು ಉತ್ಪಾದಿಸಲು ಅವುಗಳು ಬದ್ಧವಾಗಿವೆ. ಅದರಲ್ಲಿ 7 ಲಕ್ಷ ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ಗಳು ರಫ್ತಾಗಲಿವೆ ಎಂದು ವಿವರಿಸಿದರು.
ತಂತ್ರಜ್ಞಾನ ವಲಯದ ಸಂಸ್ಥೆಗಳು ಭಾರತೀಯ 5ಜಿ ಮಾದರಿಯನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು. ಆರೋಗ್ಯ, ಶಿಕ್ಷಣ, ಕೃಷಿ, ರಿಟೇಲ್ ಇತ್ಯಾದಿ ವಲಯಗಳಲ್ಲಿ ಇದರ ಉಪಯೋಗವನ್ನು ಹೆಚ್ಚಿಸಲು ಸಾಧ್ಯವಿದೆ ಎಂದರು.
ಭಾರತದಲ್ಲಿ 2014ರಲ್ಲಿ ಕೇವಲ 2 ಮೊಬೈಲ್ ಉತ್ಪಾದನಾ ಕಾರ್ಖಾನೆಗಳಿದ್ದವು. ಈಗ 268ಕ್ಕೆ ಏರಿಕೆಯಾಗಿದೆ. ಜಗತ್ತಿನಲ್ಲಿ ಎರಡನೇ ಅತಿ ದೊಡ್ಡ ಮೊಬೈಲ್ ಉತ್ಪಾದಕರೆನಿಸಿದ್ದೇವೆ. ಇದೇ ರೀತಿ ಲ್ಯಾಪ್ ಟಾಪ್ ಸೇರಿದಂತೆ ನಾನಾ ಉತ್ಪನ್ನಗಳಲ್ಲೂ ದೇಶ ಮುಂಚೂಣಿಗೆ ಬರಬೇಕು ಎಂದರು.
2021ರ ದ್ವಿತೀಯಾರ್ಧದಲ್ಲಿ ಜಿಯೋದಿಂದ 5ಜಿ ಸೇವೆ - ಮುಕೇಶ್ ಅಂಬಾನಿ
ಆತ್ಮನಿರ್ಭರ ಭಾರತ್ ಎಂದರೆ ಭಾರತವನ್ನು ಏಕಾಂಗಿಯಾಗಿಸುವುದಲ್ಲ, ಜಾಗತಿಕ ಆರ್ಥಿಕತೆಯಲ್ಲಿ ಭಾರತ ಸಕ್ರಿಯ ಪಾತ್ರ ವಹಿಸುವುದಾಗಿದೆ. ಈ ನಿಟ್ಟಿನಲ್ಲಿ ಪಿಎಲ್ಐ (ಉತ್ಪಾದನೆ ಆಧರಿತ ಇನ್ಸೆಂಟಿವ್) ಯೋಜನೆ ಪರಿಣಾಮಕಾರಿಯಾಗಿದೆ ಎಂದರು.
ಪಿಎಲ್ಐ ಯೋಜನೆಗೆ ಎಲ್ಲ ಪ್ರಮುಖ ಕಂಪನಿಗಳು ಅರ್ಜಿ ಸಲ್ಲಿಸಿವೆ. ಮುಂಬರುವ 5 ವರ್ಷಗಳಲ್ಲಿ 10 ಲಕ್ಷ ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ಗಳನ್ನು ಉತ್ಪಾದಿಸಲು ಅವುಗಳು ಬದ್ಧವಾಗಿವೆ. ಅದರಲ್ಲಿ 7 ಲಕ್ಷ ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ಗಳು ರಫ್ತಾಗಲಿವೆ ಎಂದು ವಿವರಿಸಿದರು.