ಆ್ಯಪ್ನಗರ

ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಇಳಿಕೆಯಾಗುವ ನಿರೀಕ್ಷೆ

ಸರಕಾರ ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಶೀಘ್ರ ಪ್ರಕಟಿಸುವ ನಿರೀಕ್ಷೆ ಇದೆ. ಅಂಚೆ ಇಲಾಖೆಯ ನಾನಾ ಉಳಿತಾಯ ಯೋಜನೆಗಳ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಇದೆ.

Vijaya Karnataka Web 30 Dec 2019, 6:23 pm
ಹೊಸದಿಲ್ಲಿ: ಸರಕಾರ ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಶೀಘ್ರ ಪ್ರಕಟಿಸುವ ನಿರೀಕ್ಷೆ ಇದೆ. ಅಂಚೆ ಇಲಾಖೆಯ ನಾನಾ ಉಳಿತಾಯ ಯೋಜನೆಗಳ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಪ್ರತಿ ತ್ರೈಮಾಸಿಕ ಶುರುವಾಗುವುದಕ್ಕೆ ಮುನ್ನ ಸರಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪ್ರಕಟಿಸುತ್ತದೆ.
Vijaya Karnataka Web small savings


ರಾಷ್ಟ್ರೀಯ ಉಳಿತಾಯ ಪತ್ರ(ಎನ್‌ಎಸ್‌ಸಿ), ಕೆವಿಪಿ, ಪಿಪಿಎಫ್‌ ಇತ್ಯಾದಿಗಳ ಬಡ್ಡಿ ದರ ಪ್ರಕಟವಾಗಲಿದೆ. ಬಹುತೇಕ ವಾಣಿಜ್ಯ ಬ್ಯಾಂಕ್‌ ಗಳ ನಿಶ್ಚಿತ ಬಡ್ಡಿ ದರ ವಾರ್ಷಿಕ ಶೇ.6.25ರಿಂದ ಶೇ.6.50ರ ವ್ಯಾಪ್ತಿಯಲ್ಲಿದೆ. ಅಂಚೆ ಇಲಾಖೆಯ ಬಡ್ಡಿ ದರ ವಾರ್ಷಿಕ ಶೇ.7.5ರ ವ್ಯಾಪ್ತಿಯಲ್ಲಿದೆ. ಇವೆರಡರ ನಡುವೆ ವ್ಯತ್ಯಾಸ ಇರುವುದರಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಇಳಿಕೆ ನಿರೀಕ್ಷಿಸಲಾಗಿದೆ.

ರಾಷ್ಟ್ರೀಯ ಉಳಿತಾಯ ಯೋಜನೆಗಳಾದ ಕಿಸಾನ್‌ ವಿಕಾಸ್‌ ಪತ್ರ, ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ ಯೋಜನೆಗಳ ಮೇಲಿನ ಬಡ್ಡಿದರಲ್ಲಿ 10 ಮೂಲಾಂಶಗಳಷ್ಟು (ಶೇ.0.10ರಷ್ಟು) ಕಡಿತಗೊಳ್ಳಲಿದೆ ಎಂದು ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

ಜಿಎಸ್‌ಟಿ ಪಾವತಿಸಿಲ್ಲವೇ? ಅಧಿಕಾರಿಗಳು ಬ್ಯಾಂಕ್‌ ಖಾತೆ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದು

ರಾಷ್ಟ್ರೀಯ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಶೇ.8ರಿಂದ ಶೇ.7.9ಕ್ಕೆ ಇಳಿಸಲಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವನ್ನು ಶೇ.8.5ರಿಂದ ಶೇ.8.4ಕ್ಕೆ ಇಳಿಸಲಾಗುತ್ತಿದೆ.

ಹೊಸ ವರ್ಷಕ್ಕೆ ಎಸ್‌ಬಿಐ ಉಡುಗೊರೆ: ಜ.1ರಿಂದ ಗೃಹ ಸಾಲ ಇನ್ನಷ್ಟು ಅಗ್ಗ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ