ಆ್ಯಪ್ನಗರ

ಏರ್‌ ಇಂಡಿಯಾ ಬಂಡವಾಳ ಹಿಂತೆಗೆತಕ್ಕೆ ನಿರ್ಧಾರ

ಏರ್‌ ಇಂಡಿಯಾದ ಬಹು ನಿರೀಕ್ಷಿತ ಬಂಡವಾಳ ಹಿಂತೆಗೆತ ಪ್ರಕ್ರಿಯೆಗೆ ಚಾಲನೆ ನೀಡಲು ಕೇಂದ್ರ ಸರಕಾರ ಇದೀಗ ನಿರ್ಧರಿಸಿದೆ.

THE ECONOMIC TIMES 28 Jun 2019, 5:00 am
ಹೊಸದಿಲ್ಲಿ : ಏರ್‌ ಇಂಡಿಯಾದ ಬಹು ನಿರೀಕ್ಷಿತ ಬಂಡವಾಳ ಹಿಂತೆಗೆತ ಪ್ರಕ್ರಿಯೆಗೆ ಚಾಲನೆ ನೀಡಲು ಕೇಂದ್ರ ಸರಕಾರ ಇದೀಗ ನಿರ್ಧರಿಸಿದೆ.
Vijaya Karnataka Web government decides to disinvestment of air india
ಏರ್‌ ಇಂಡಿಯಾ ಬಂಡವಾಳ ಹಿಂತೆಗೆತಕ್ಕೆ ನಿರ್ಧಾರ


ಸರಕಾರದ ಬೆಂಬಲದ ನೆರವಿನಿಂದ ಏರ್‌ ಇಂಡಿಯಾದ ಹಾರಾಟ ಮತ್ತು ಹಣಕಾಸು ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದ್ದು, ಬಂಡವಾಳ ಹಿಂತೆಗೆತಕ್ಕೆ ಕಾಲ ಪಕ್ವವಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.

ಏರ್‌ ಇಂಡಿಯಾಗೆ ಕಾಯಕಲ್ಪ ನೀಡುವುದಕ್ಕೆ ಸಂಬಂಧಿಸಿದಂತೆ ರಚಿಸಿದ್ದ ಸಚಿವರುಗಳ ಉನ್ನತ ಮಟ್ಟದ ಸಮಿತಿ (ಎಐಎಸ್‌ಎಎಂ) 2018ರ ಮಾರ್ಚ್‌ನಲ್ಲಿ ನಡೆಸಿದ್ದ ಸಭೆಯಲ್ಲಿ, ಏರ್‌ ಇಂಡಿಯಾದ ಬಂಡವಾಳ ಹಿಂತೆಗೆತಕ್ಕೆ ಕಾಲ ಪಕ್ವವಾಗಿಲ್ಲ ಎಂದು ಸೂಚಿಸಿತ್ತು. ಆಗ ಕಚ್ಚಾ ತೈಲ ದರದ ಏರಿಳಿತ, ವಿದೇಶಿ ವಿನಿಮಯದ ಪ್ರತಿಕೂಲ ಪರಿಸ್ಥಿತಿ ತಲೆದೋರಿತ್ತು. ಆದರೆ ಅದು ಕಳೆದ ವರ್ಷದ ಪರಿಸ್ಥಿತಿಯಾಗಿತ್ತು. ಈಗ ಸನ್ನಿವೇಶ ಸುಧಾರಿಸಿದೆ ಎಂದು ಸಚಿವಾಲಯ ತಿಳಿಸಿದೆ.

ಎಐಎಸ್‌ಎಎಂನಲ್ಲಿ ಈ ಹಿಂದೆ ಸಚಿವರಾಗಿದ್ದ ಅರುಣ್‌ ಜೇಟ್ಲಿ, ಸುರೇಶ್‌ ಪ್ರಭು ಇದ್ದರು. ಹೊಸ ಸರಕಾರದ ಅಡಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಇರಲಿದ್ದಾರೆ. ಸಾರಿಗೆ ಸಚಿವ ನಿತಿನ್‌ ಗಡ್ಕರಿ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಆರ್ಥಿಕ ವ್ಯವಹಾರಗಳ ಕೇಂದ್ರ ಸಚಿವ ಸಂಪುಟ ಉಪಸಮಿತಿಯು 2017ರ ಜೂನ್‌ 28ರಂದು ಏರ್‌ ಇಂಡಿಯಾ ಹಾಗೂ ಅದರ 5 ಅಧೀನ ಕಂಪನಿಗಳಿಂದ ಬಂಡವಾಳ ಹಿಂತೆಗೆತಕ್ಕೆ ತಾತ್ವಿಕ ಅನುಮೋದನೆ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ