ಆ್ಯಪ್ನಗರ

ತಿಂಗಳ ಪಿಂಚಣಿ ಮೊತ್ತ ದ್ವಿಗುಣಗೊಳಿಸಲು ಸರಕಾರ ಚಿಂತನೆ

ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ತಿಂಗಳ ಪಿಂಚಣಿ ಮೊತ್ತವನ್ನು ದ್ವಿಗುಣಗೊಳಿಸಲು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ.

THE ECONOMIC TIMES 13 Jun 2018, 3:05 pm
ಹೊಸದಿಲ್ಲಿ: ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ತಿಂಗಳ ಪಿಂಚಣಿ ಮೊತ್ತವನ್ನು ದ್ವಿಗುಣಗೊಳಿಸಲು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ.
Vijaya Karnataka Web pension-funds


ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಪಿಂಚಿಣಿ ಮೊತ್ತವನ್ನು ಈಗಿರುವ 5000 ರೂ.ಗಳಿಂದ 10,000 ರೂ.ಗಳಿಗೆ ಹೆಚ್ಚಿಸಲು ಸರಕಾರಕ್ಕೆ ಶಿಫಾರಸು ಮಾಡಿದೆ. ಇದನ್ನು ಕೇಂದ್ರ ಸರಕಾರ ಪರಿಶೀಲನೆ ನಡೆಸುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಸೇವಾ ಇಲಾಖೆಯ ಜಂಟಿ ಕಾರ್ಯದರ್ಶಿ ಮದ್ನೇಶ್ ಕುಮಾರ್ ಮಿಶ್ರಾ, "ಪಿಂಚಣಿ ಮೊತ್ತ ಹೆಚ್ಚಿಸುವ ಪ್ರಸ್ತಾಪ ನಮ್ಮ ಮುಂದಿದ್ದು, ಸಕ್ರಿಯ ಪರಿಶೀಲನೆಯಲ್ಲಿದೆ" ಎಂದು ಹೇಳಿದ್ದಾರೆ.

ಯೋಜನೆಯ ಚಂದಾದಾರರನ್ನು ಹೆಚ್ಚಿಸುವ ಉದ್ದೇಶದಿಂದ ಪಿಂಚಣಿ ಮೊತ್ತದಲ್ಲಿ ಏರಿಕೆ ಮಾಡುವಂತೆ ಕೋರಲಾಗಿದೆ. ಸದ್ಯ ತಿಂಗಳಿಗೆ 1000 ರೂ.ಗಳಿಂದ 5000 ರೂ.ಗಳ ವರೆಗಿನ ಐದು ಹಂತಗಳ ಪಿಂಚಣಿ ಮಿತಿ ಇದೆ. ಆದರೆ 60 ವರ್ಷ ವಯಸ್ಸಿನಲ್ಲಿ ತಿಂಗಳಿಗೆ 5000 ಪಿಂಚಣಿ ಸಾಕಾಗುವುದಿಲ್ಲ. ಈ ಹಿನ್ನಲೆಯಲ್ಲಿ ಪಿಂಚಣಿ ಹೆಚ್ಚಿಸುವ ಪ್ರಸ್ತಾಪ ಸರಕಾರದ ಮುಂದಿಡಲಾಗಿದೆ.

ಪಿಂಚಣಿ ಯೋಜನೆಗೆ ಸೇರಿಸುವ ವಯಸ್ಸಿನ ಮಿತಿ 18ರಿಂದ 40 ವರ್ಷಗಳಾಗಿದೆ. ಇದನ್ನು 18ರಿಂದ 50ಕ್ಕೆ ಏರಿಸುವ ಬಗ್ಗೆಯೂ ಪ್ರಸ್ತಾಪ ಇರಿಸಲಾಗಿದೆ.

2017-18ನೇ ಸಾಲಿನಲ್ಲಿ 50 ಲಕ್ಷ ಹೊಸ ಚಂದಾದಾರರು ಸೇರ್ಪಡೆಯಾಗಿದ್ದು, ಪ್ರಸಕ್ತ ಆರ್ಥಿಕ ಸಾಲಿನಲ್ಲಿ 60ರಿಂದ 70 ಲಕ್ಷ ಮಂದಿ ಹೊಸತಾಗಿ ಸೇರುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಒಟ್ಟಿನಲ್ಲಿ ಕೇಂದ್ರ ಸರಕಾರದ ಮಹತ್ವದ ನಿರ್ಧಾರ ಹೆಚ್ಚು ಕುತೂಹಲವೆನಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ