ಆ್ಯಪ್ನಗರ

ಸರಕಾರದ ಬಳಿ 25,000 ಟನ್‌ ಈರುಳ್ಳಿ ದಾಸ್ತಾನು, ಶೀಘ್ರದಲ್ಲಿ ರಾಜ್ಯಗಳಿಗೆ ಬಿಡುಗಡೆ

ಬೆಲೆ ಏರಿಕೆಯ ಸಂದರ್ಭದಲ್ಲಿ ಬಳಕೆಗೆಂದೇ ಸರಕಾರದ ಪರವಾಗಿ 'ನಫೆದ್'‌ ಈರುಳ್ಳಿಯನ್ನು ಸಂಗ್ರಹಿಸುತ್ತದೆ. ಪ್ರಸಕ್ತ ವರ್ಷದಲ್ಲಿ 1 ಲಕ್ಷ ಟನ್‌ ಈರುಳ್ಳಿಯನ್ನು ನಫೆದ್‌ ಖರೀದಿಸಿತ್ತು. ಅದನ್ನೀಗ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

Agencies 24 Oct 2020, 1:28 pm
ಹೊಸದಿಲ್ಲಿ: ಸರಕಾರದ ಬಳಿ 25,000 ಟನ್‌ ಈರುಳ್ಳಿ ದಾಸ್ತಾನು (ಬಫರ್‌ ಸ್ಟಾಕ್‌) ಇದೆ. ನವೆಂಬರ್‌ ಮೊದಲ ವಾರದಲ್ಲಿ ಇದರ ಅವಧಿ ಮುಗಿಯಲಿದೆ ಎಂದು ನಫೆದ್‌ ಎಂಡಿ ಸಂಜೀವ್‌ ಕುಮಾರ್‌ ಛಡ್ಡಾ ಹೇಳಿದ್ದಾರೆ.
Vijaya Karnataka Web Onions


ಕಳೆದ ಕೆಲವು ದಿನಗಳಲ್ಲಿ ದೇಶದಲ್ಲಿ ಈರುಳ್ಳಿ ಬೆಲೆ 75 ರೂಪಾಯಿ ದಾಟಿದೆ. ಈ ಹಿನ್ನೆಲೆಯಲ್ಲಿ ನಫೆದ್‌ ತನ್ನ ಬಳಿ ಇರುವ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಈರುಳ್ಳಿ ಲಭ್ಯ ಇರುವಂತೆ ನೋಡಿಕೊಳ್ಳುತ್ತಿದೆ.

ಬಿಕ್ಕಟ್ಟಿನ ಸಂದರ್ಭದಲ್ಲಿ ಬಳಕೆಗೆಂದೇ ಸರಕಾರದ ಪರವಾಗಿ ನಫೆದ್‌ ಈರುಳ್ಳಿಯನ್ನು ಸಂಗ್ರಹಿಸುತ್ತದೆ. ಹಾಲಿ ವರ್ಷದಲ್ಲಿ 1 ಲಕ್ಷ ಟನ್‌ ಈರುಳ್ಳಿಯನ್ನು ನಫೆದ್‌ ಖರೀದಿಸಿತ್ತು. ಅದನ್ನೀಗ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.

ಈರುಳ್ಳಿ ದರ ಏರಿಕೆ ತಡೆಗೆ ದಾಸ್ತಾನಿಗೆ ಮಿತಿ ಹೇರಿದ ಕೇಂದ್ರ
“ಇಲ್ಲಿಯವರೆಗೆ 43,000 ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್‌ನಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಒಂದಿಷ್ಟು ಹಾಳಾಗಿದ್ದು, ಸದ್ಯ ಇನ್ನೂ 25,000 ಟನ್‌ ಉಳಿದುಕೊಂಡಿದ್ದು ನವೆಂಬರ್‌ವರೆಗೆ ಇದು ಲಭ್ಯವಿದೆ,” ಎಂದು ಛಡ್ಡಾ ವಿವರಿಸಿದ್ದಾರೆ.

ನಫೆದ್‌ ಹೋಲ್‌ಸೇಲ್‌ ಮತ್ತು ಚಿಲ್ಲರೆ ಮಾರುಕಟ್ಟೆಗೆ ಈರುಳ್ಳಿಯನ್ನು ಬಿಡುಗಡೆ ಮಾಡುತ್ತಿದೆ. ರಾಜ್ಯಗಳಿಗೂ ಕೆಜಿಗೆ 26 ರೂಪಾಯಿ ದರದಲ್ಲಿ ಈರುಳ್ಳಿ ನೀಡುತ್ತಿದೆ. ಇದಕ್ಕೆ ಸಾಗಾಟ ವೆಚ್ಚವನ್ನು ರಾಜ್ಯಗಳು ಪ್ರತ್ಯೇಕವಾಗಿ ಭರಸಿಬೇಕಾಗಿದೆ.

ಸಂಸ್ಥೆ ಮಹಾರಾಷ್ಟ್ರ, ಮಧ್ಯ ಪ್ರದೇಶ ಮತ್ತು ಗುಜರಾತ್‌ನಲ್ಲಿ ಬಫರ್‌ ಸ್ಟಾಕ್‌ನ್ನು ಹೊಂದಿದೆ ಎಂದು ಛಡ್ಡಾ ವಿವರ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ