ಆ್ಯಪ್ನಗರ

ಜನರ ಖಾತೆಗೆ ಮಾಸಿಕ 1,000 ರೂ. ಹಾಕಿ - ಸರಕಾರಕ್ಕೆ ಅಭಿಜಿತ್‌ ಬ್ಯಾನರ್ಜಿ, ಡುಫ್ಲೋ ಆಗ್ರಹ

‘ಒಂದು ರಾಷ್ಟ್ರ, ಒಂದು ರೇಷನ್‌ ಕಾರ್ಡ್‌’ ಅನ್ನುವ ಕೇಂದ್ರದ ಯೋಜನೆಯನ್ನು ಶ್ಲಾಘಿಸಿರುವ ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞರಾದ ಅಭಿಜಿತ್‌ ಬ್ಯಾನರ್ಜಿ, ಈ ಯೋಜನೆಯ "ಅನುಷ್ಠಾನವು ಈಗ ಅತ್ಯಂತ ತ್ವರಿತವಾಗಿ ಆಗಬೇಕಿದೆ," ಎಂದಿದ್ದಾರೆ.

THE ECONOMIC TIMES 25 May 2020, 9:27 pm
ಹೊಸದಿಲ್ಲಿ: ಕೋವಿಡ್‌ ಬಿಕ್ಕಟ್ಟು ನಿಭಾಯಿಸುವ ನಿಟ್ಟಿನಲ್ಲಿ ಬಡವರ ಖಾತೆಗೆ ಮಾಸಿಕ 1,000 ರೂಪಾಯಿಯನ್ನು ಸರಕಾರ ಹಾಕಲೇಬೇಕು. ತಕ್ಷಣದಿಂದಲೇ ಈ ಯೋಜನೆಯನ್ನು ಸರಕಾರ ಅನುಷ್ಠಾನಗೊಳಿಸಬೇಕು. ಅಲ್ಲದೇ ‘ಒಂದು ರಾಷ್ಟ್ರ, ಒಂದು ರೇಷನ್‌ ಕಾರ್ಡ್‌’ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು ಎಂದು ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞರಾದ ಅಭಿಜಿತ್‌ ಬ್ಯಾನರ್ಜಿ ಮತ್ತು ಎಸ್ತಾರ್‌ ಡುಫ್ಲೋ ಒತ್ತಾಯಿಸಿದ್ದಾರೆ.
Vijaya Karnataka Web abhijit banerjee esther duflo


ಆನ್‌ಲೈನ್‌ ಚರ್ಚೆಯ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ‘‘ಸಾರ್ವತ್ರಿಕ ಮೂಲ ಆದಾಯ ವಿತರಣೆ ಯೋಜನೆ ಮೂಲಕ ಒಬ್ಬ ವ್ಯಕ್ತಿಗೆ 1,000 ರೂಪಾಯಿ ಮಾಸಿಕ ನೆರವು ನೀಡಿದರೆ, ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆಯಾಗುತ್ತದೆ. 1,000 ರೂ. ಜಾಸ್ತಿಯಾಯಿತು ಅನ್ನಿಸಿದರೆ ಕನಿಷ್ಠ 500 ರೂ.ಕೊಟ್ಟರೂ, ಐವರು ಸದಸ್ಯರ ಕುಟುಂಬಕ್ಕೆ 2,500 ರೂ. ಸಿಕ್ಕಿದಂತಾಗುತ್ತದೆ. ಕೋವಿಡ್‌ ಬಿಕ್ಕಟ್ಟಿನ ಹೊತ್ತಿನಲ್ಲಿ ತುರ್ತು ಅಗತ್ಯಗಳಿಗೆ ಖರ್ಚು ಮಾಡಲು ಅನುಕೂಲವಾಗುತ್ತದೆ," ಎಂದು ಈ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

"ಭಾರತವು ಬೇಡಿಕೆ ಕೊರತೆಯ ಭಾರೀ ಆಘಾತವನ್ನು ಎದುರಿಸುತ್ತಿದೆ. ಹೀಗಾಗಿ ಜನರ ಕೈಯಲ್ಲಿ ಹಣ ಉಳಿಯುವಂತೆ ಸರಕಾರವು ಮಾಡಬೇಕಾಗಿದೆ. ಇದು ಭಾರತದ ಬೇಡಿಕೆ ಇಳಿಕೆ ಸಮಸ್ಯೆಗೆ ಪರಿಹಾರವಾಗಿದೆ," ಎಂದು ಬ್ಯಾನರ್ಜಿ ಹೇಳಿದ್ದಾರೆ.

‘ಒಂದು ರಾಷ್ಟ್ರ, ಒಂದು ರೇಷನ್‌ ಕಾರ್ಡ್‌’ ಅನ್ನುವ ಕೇಂದ್ರದ ಯೋಜನೆಯನ್ನು ಶ್ಲಾಘಿಸಿದ ಬ್ಯಾನರ್ಜಿ, ‘‘ಅನುಷ್ಠಾನವು ಈಗ ಅತ್ಯಂತ ತ್ವರಿತವಾಗಿ ಆಗಬೇಕಿದೆ,’’ ಎಂದಿದ್ದಾರೆ.

ಬಡತನ ಕೂಪಕ್ಕೆ ತಳ್ಳುವ ಕೊರೊನಾ

ಕೊರೊನಾ ಪರಿಸ್ಥಿತಿಯು ಜನರನ್ನು ಬಡತನ ಕೂಪಕ್ಕೆ ತಳ್ಳಲಿದೆ. ಸಾರ್ವತ್ರಿಕ ಮೂಲ ಆದಾಯ ವಿತರಣೆ ಯೋಜನೆಯು ಇಂಥವರಿಗೆ ನೆರವಾಗಲಿದೆ. ಜನಧನ್‌ ಮೂಲಕ ಜನರ ಖಾತೆಗೆ ಹಣ ಹಾಕುವ ಯೋಜನೆ ತುರ್ತಾಗಿ ಆರಂಭವಾಗಬೇಕು ಎಂದು ಫ್ರಾನ್ಸ್‌ ಮೂಲದ ಅರ್ಥಶಾಸ್ತ್ರಜ್ಞೆ, ನೊಬೆಲ್‌ ಪುರಸ್ಕೃತೆ ಎಸ್ತಾರ್‌ ಡುಫ್ಲೋ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ