ಆ್ಯಪ್ನಗರ

ಆರ್ಥಿಕ ಅಂಕಿ - ಅಂಶ ಸಮಗ್ರ ಡೇಟಾಬೇಸ್‌ಗೆ ತಜ್ಞರ ಸಲಹೆ

ಭಾರತದ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಅಂಕಿಸಂಖ್ಯೆಗಳಲ್ಲಿ ಹೆಚ್ಚಿನ ವಿಶ್ವಾಸಾರ್ಹತೆ ಸಾಧಿಸಲು ಮತ್ತು ಸ್ಥಿರತೆ ಕಾಯ್ದುಕೊಳ್ಳಲು ಏಕರೂಪದ ಡೇಟಾಬೇಸ್‌ ರೂಪಿಸಲು ತಜ್ಞರ ಸಮಿತಿಯೊಂದು ಸರಕಾರಕ್ಕೆ ಸಲಹೆ ನೀಡಿದೆ.

THE ECONOMIC TIMES 31 Jul 2018, 9:52 am
ಹೊಸದಿಲ್ಲಿ: ಭಾರತದ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಅಂಕಿಸಂಖ್ಯೆಗಳಲ್ಲಿ ಹೆಚ್ಚಿನ ವಿಶ್ವಾಸಾರ್ಹತೆ ಸಾಧಿಸಲು ಮತ್ತು ಸ್ಥಿರತೆ ಕಾಯ್ದುಕೊಳ್ಳಲು ಏಕರೂಪದ ಡೇಟಾಬೇಸ್‌ ರೂಪಿಸಲು ತಜ್ಞರ ಸಮಿತಿಯೊಂದು ಸರಕಾರಕ್ಕೆ ಸಲಹೆ ನೀಡಿದೆ.
Vijaya Karnataka Web economy database


ಹಣದುಬ್ಬರ, ಕೈಗಾರಿಕಾ ಉತ್ಪಾದನೆ, ಉದ್ಯೋಗ ಸೃಷ್ಟಿ ಮತ್ತಿತರ ಸೂಚ್ಯಂಕಗಳ ವಿಶ್ವಾಸಾರ್ಹತೆ ಹೆಚ್ಚಿಸುವ ನಿಟ್ಟಿನಲ್ಲಿ ಏಕರೂಪದ ಡೇಟಾಬೇಸ್‌ ಪೂರಕವಾಗಲಿದೆ. ಇದಕ್ಕಾಗಿ ರಾಷ್ಟ್ರೀಯ ಸಮಗ್ರ ಡೇಟಾ ವ್ಯವಸ್ಥೆ(ಎನ್‌ಐಡಿಎಸ್‌) ರಚಿಸಲು ಐಐಟಿ ಮುಂಬಯಿಯ ತಜ್ಞರು ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಸಮಗ್ರ ಡೇಟಾದ ಕೊರತೆ ಅಥವಾ ಪ್ರಮುಖ ಆರ್ಥಿಕ ಸೂಚ್ಯಂಕಗಳಿಗೆ ಸಂಬಂಧಿಸಿದ ಮಾಹಿತಿಯ ಕೊರತೆ ದೇಶದಲ್ಲಿದೆ. ಅದನ್ನು ಸರಿದೂಗಿಸಲು ಉದ್ದೇಶಿತ ಎನ್‌ಐಡಿಎಸ್‌ ನೆರವಾಗಲಿದೆ. ನಾನಾ ಡೇಟಾಗಳನ್ನು ಸಮಗ್ರ ಡೇಟಾಗೆ ಜೋಡಣೆ ಮಾಡಲು ಎನ್‌ಐಡಿಎಸ್‌ನಿಂದ ಸಾಧ್ಯವಾಗಲಿದೆ. ಇದರಿಂದ ಡೇಟಾ ವಿನಿಮಯ, ಕ್ರೋಡೀಕರಣ ಸುಲಭವಾಗಲಿದೆ.

''ಒಂದೇ ವೇದಿಕೆಯಲ್ಲಿ ಎಲ್ಲ ಡೇಟಾಗಳನ್ನೂ ಬಳಕೆದಾರರು ಗಮನಿಸಲು ಹೊಸ ವ್ಯವಸ್ಥೆಯಿಂದ ಅನುಕೂಲವಾಗಲಿದೆ. ಪ್ರಗತಿಯ ಮಾಪನದಲ್ಲಿ ಗುಣಮಟ್ಟ, ಡೇಟಾ ಮತ್ತು ಅಂಕಿಅಂಶಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಇದರಿಂದ ಅನುಕೂಲವಾಗಲಿದೆ,'' ಎಂದು ವರದಿಯಲ್ಲಿ ಸಮಿತಿ ಹೇಳಿದೆ.

ಏನಿದರ ವಿಶೇಷ?
ಪ್ರಸ್ತುತ ನಾನಾ ಮೂಲಗಳಿಂದ ಮತ್ತು ನಾನಾ ವಿಶ್ಲೇಷಣೆಗಳ ಮೂಲಕ ಡೇಟಾ ಕ್ರೋಡೀಕರಿಸುವ ಪದ್ಧತಿ ಜಾರಿಯಲ್ಲಿದೆ. ಇದರಿಂದ ಒಂದೇ ವಿಷಯ ಕುರಿತಾಗಿ ವಿರೋಧಾಭಾಸದ ಸೂಚ್ಯಂಕಗಳು ದಾಖಲಾಗುವ ಅವಕಾಶಗಳೂ ಇವೆ. ಇದನ್ನು ತಪ್ಪಿಸಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮತ್ತು ಮಾಪನದಲ್ಲಿ ಗುಣಮಟ್ಟ ಉಳಿಸಿಕೊಳ್ಳುವುದು ಹೊಸ ಸಮಗ್ರ ಡೇಟಾ ವ್ಯವಸ್ಥೆಯ ಉದ್ದೇಶ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ