ಎಫ್ಆರ್ಡಿಐ ವಿಧೇಯಕ ಹಿಂತೆಗೆತಕ್ಕೆ ಸಂಪುಟ ಒಪ್ಪಿಗೆ
ಸರಕಾರ ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದ ಎಫ್ಆರ್ಡಿಎ ವಿಧೇಯಕವನ್ನು (ಫೈನಾನ್ಷಿಯಲ್ ರೆಸೆಲ್ಯೂಷನ್ ಆ್ಯಂಡ್ ಡಿಪಾಸಿಟ್ ಇನ್ಷೂರೆನ್ಸ್ (ಎಫ್ಆರ್ಡಿಐ) ಹಿಂತೆಗೆದುಕೊಳ್ಳಲು ನಿರ್ಧರಿಸಿದೆ.
Vijaya Karnataka Web 20 Jul 2018, 5:00 am
ಹೊಸದಿಲ್ಲಿ : ಸರಕಾರ ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದ ಎಫ್ಆರ್ಡಿಎ ವಿಧೇಯಕವನ್ನು (ಫೈನಾನ್ಷಿಯಲ್ ರೆಸೆಲ್ಯೂಷನ್ ಆ್ಯಂಡ್ ಡಿಪಾಸಿಟ್ ಇನ್ಷೂರೆನ್ಸ್ (ಎಫ್ಆರ್ಡಿಐ) ಹಿಂತೆಗೆದುಕೊಳ್ಳಲು ನಿರ್ಧರಿಸಿದೆ.
ಕೇಂದ್ರ ಸಚಿವ ಸಂಪುಟ ಸಭೆ ಈ ಸಂಬಂಧ ಒಪ್ಪಿಗೆ ನೀಡಿದೆ. ಎಫ್ಆರ್ಡಿಐ ವಿಧೇಯಕವನ್ನು ಲೋಕಸಭೆಯಲ್ಲಿ 2017ರ ಆಗಸ್ಟ್ 11ರಂದು ಮಂಡಿಸಲಾಗಿತ್ತು. ನಂತರ ಜಂಟಿ ಸದನ ಸಮಿತಿಯ ಪರಿಶೀಲನೆಗೆ ಕಳಿಸಲಾಗಿತ್ತು. ಸಮಿತಿಯು ತನ್ನ ವರದಿಯನ್ನು ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನ (ಆಗಸ್ಟ್ 10) ಸರಕಾರಕ್ಕೆ ಸಲ್ಲಿಸಲಿದೆ.
ಬ್ಯಾಂಕ್ಗಳು ದಿವಾಳಿಯಾಗುವ ಸಂದರ್ಭ ಎದುರಿಸುವಾಗ ಕೈಗೊಳ್ಳುವ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಎಫ್ಆರ್ಡಿಎ ವಿಧೇಯಕದಲ್ಲಿನ ಕೆಲವು ಅಂಶಗಳಿಗೆ ಆಕ್ಷೇಪ ವ್ಯಕ್ತವಾಗಿತ್ತು. ವಿಧೇಯಕದಲ್ಲಿ ಬ್ಯಾಂಕ್ ದಿವಾಳಿಯಾಗುವುದನ್ನು ತಪ್ಪಿಸಲು, ಠೇವಣಿದಾರರ ಠೇವಣಿ ಹಣವನ್ನೂ ಬಳಸಲು ಅನುಕೂಲವಾಗುವಂಥ ಪ್ರಸ್ತಾಪ ಇದೆ ಎಂದು ಆರೋಪಿಸಲಾಗಿದೆ. ಹೀಗಿದ್ದರೂ, ಠೇವಣಿದಾರರ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ ಎಂದು ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ.
ಕೇಂದ್ರ ಸಚಿವ ಸಂಪುಟ ಸಭೆ ಈ ಸಂಬಂಧ ಒಪ್ಪಿಗೆ ನೀಡಿದೆ. ಎಫ್ಆರ್ಡಿಐ ವಿಧೇಯಕವನ್ನು ಲೋಕಸಭೆಯಲ್ಲಿ 2017ರ ಆಗಸ್ಟ್ 11ರಂದು ಮಂಡಿಸಲಾಗಿತ್ತು. ನಂತರ ಜಂಟಿ ಸದನ ಸಮಿತಿಯ ಪರಿಶೀಲನೆಗೆ ಕಳಿಸಲಾಗಿತ್ತು. ಸಮಿತಿಯು ತನ್ನ ವರದಿಯನ್ನು ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನ (ಆಗಸ್ಟ್ 10) ಸರಕಾರಕ್ಕೆ ಸಲ್ಲಿಸಲಿದೆ.
ಬ್ಯಾಂಕ್ಗಳು ದಿವಾಳಿಯಾಗುವ ಸಂದರ್ಭ ಎದುರಿಸುವಾಗ ಕೈಗೊಳ್ಳುವ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಎಫ್ಆರ್ಡಿಎ ವಿಧೇಯಕದಲ್ಲಿನ ಕೆಲವು ಅಂಶಗಳಿಗೆ ಆಕ್ಷೇಪ ವ್ಯಕ್ತವಾಗಿತ್ತು. ವಿಧೇಯಕದಲ್ಲಿ ಬ್ಯಾಂಕ್ ದಿವಾಳಿಯಾಗುವುದನ್ನು ತಪ್ಪಿಸಲು, ಠೇವಣಿದಾರರ ಠೇವಣಿ ಹಣವನ್ನೂ ಬಳಸಲು ಅನುಕೂಲವಾಗುವಂಥ ಪ್ರಸ್ತಾಪ ಇದೆ ಎಂದು ಆರೋಪಿಸಲಾಗಿದೆ. ಹೀಗಿದ್ದರೂ, ಠೇವಣಿದಾರರ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ ಎಂದು ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ.