ಆ್ಯಪ್ನಗರ

ಸಾಲ ವಂಚನೆ ಪ್ರಕರಣ: ಸರಕಾರಿ ಬ್ಯಾಂಕ್‌ ಸಿಇಒಗೂ ಜವಾಬ್ದಾರಿ

ಅದರಂತೆ ಸಾಲವಂಚನೆಯಂತಹ ಪ್ರಕರಣ ಬೆಳಕಿಗೆ ಬಂದಲ್ಲಿ ಕೂಡಲೇ ಕ್ರಮ ಕೈಗೊಳ್ಳುವಂತೆ ಅನುಕೂಲವಾಗಲು ಬ್ಯಾಂಕ್ ಸಿಇಒ, ಸರಕಾರಕ್ಕೆ ಮನವಿ ಮಾಡಿ ಲುಕ್‌ಔಟ್ ನೋಟಿಸ್‌ಗೆ ಕೋರಿಕೆ ಸಲ್ಲಿಸಬಹುದು.

Vijaya Karnataka Web 22 Nov 2018, 10:02 pm
ಹೊಸದಿಲ್ಲಿ: ಬಹುಸಾವಿರ ಕೋಟಿ ರೂ. ವಂಚಿಸಿ ಹಲವು ಉದ್ಯಮಿಗಳು ಪರಾರಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಗೃಹ ಸಚಿವಾಲಯ, ಉದ್ದೇಶಿತ ಸುಸ್ಥಿದಾರರು ಮತ್ತು ಸಾಲವಂಚಕರ ಪತ್ತೆಗೆ ನೆರವಾಗುವಂತೆ ಲುಕ್‌ಔಟ್ ನೋಟಿಸ್ ಕೋರುವ ಅಧಿಕಾರವನ್ನು ಸರಕಾರಿ ಬ್ಯಾಂಕ್‌ಗಳ ಸಿಇಒಗಳಿಗೆ ನೀಡಿದೆ.
Vijaya Karnataka Web Loan


ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪ್ರಕರಣದ ಬಳಿಕ ಹಲವು ಸಾಲವಂಚನೆ ಪತ್ತೆಯಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಗೃಹ ಸಚಿವಾಲಯ ಕೆಲವೊಂದು ಅಗತ್ಯ ಮಾರ್ಪಾಟು ಮಾಡಿದ್ದು, ಲುಕ್‌ಔಟ್ ನೋಟಿಸ್ ಹೊರಡಿಸುವಂತೆ ಗೃಹ ಸಚಿವಾಲಯಕ್ಕೆ ಸಿಇಒ ಮನವಿ ಮಾಡಿಕೊಳ್ಳಬಹುದಾಗಿದೆ.

ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಈ ಕುರಿತು ಶಿಫಾರಸು ಮಾಡಿ, ನಿಯಮ ಜಾರಿಗೆ ಸೂಚನೆ ನೀಡಿದ್ದಾರೆ. ಅದರಂತೆ ಸಾಲವಂಚನೆಯಂತಹ ಪ್ರಕರಣ ಬೆಳಕಿಗೆ ಬಂದಲ್ಲಿ ಕೂಡಲೇ ಕ್ರಮ ಕೈಗೊಳ್ಳುವಂತೆ ಅನುಕೂಲವಾಗಲು ಬ್ಯಾಂಕ್ ಸಿಇಒ, ಸರಕಾರಕ್ಕೆ ಮನವಿ ಮಾಡಿ ಲುಕ್‌ಔಟ್ ನೋಟಿಸ್‌ಗೆ ಕೋರಿಕೆ ಸಲ್ಲಿಸಬಹುದು.

ಇದರಿಂದ ಪ್ರಕರಣ ಕುರಿತು ತ್ವರಿತ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ