ಆ್ಯಪ್ನಗರ

'ಎಲ್ಪಿಜಿ' ಬೆಲೆ ಏರಿಕೆ ಖಚಿತಪಡಿಸಿದ ಸರಕಾರ: ರಾಹುಲ್‌ ಗಾಂಧಿ ಖಂಡನೆ

ಅಡುಗೆ ಅನಿಲದ ಸಿಲಿಂಡರ್‌(ಎಲ್‌ಪಿಜಿ) ದರ ಪರಿಷ್ಕರಣೆಯಾಗಿರುವ ಕುರಿತು ಕೇಂದ್ರ ಸರಕಾರ ಅಧಿಕೃತವಾಗಿ ಖಾತರಿಪಡಿಸಿದೆ. ಇದೇ ತಿಂಗಳು ಈ ತಿಂಗಳು ದೇಶದ ಪ್ರಮುಖ ಮೆಟ್ರೊ ನಗರಗಳಲ್ಲಿಎಲ್‌ಪಿಜಿಗೆ 144.5 ರೂಪಾಯಿ ಹೆಚ್ಚು ಪಾವತಿ ಮಾಡಬೇಕಿದೆ.

Vijaya Karnataka Web 13 Feb 2020, 9:31 pm
ಹೊಸದಿಲ್ಲಿ: ಅಡುಗೆ ಅನಿಲದ ಸಿಲಿಂಡರ್‌(ಎಲ್‌ಪಿಜಿ) ದರ ಪರಿಷ್ಕರಣೆಯಾಗಿರುವ ಕುರಿತು ಕೇಂದ್ರ ಸರಕಾರ ಅಧಿಕೃತವಾಗಿ ಖಾತರಿಪಡಿಸಿದೆ. ಇದೇ ತಿಂಗಳು ಈ ತಿಂಗಳು ದೇಶದ ಪ್ರಮುಖ ಮೆಟ್ರೊ ನಗರಗಳಲ್ಲಿಎಲ್‌ಪಿಜಿಗೆ 144.5 ರೂಪಾಯಿ ಹೆಚ್ಚು ಪಾವತಿ ಮಾಡಬೇಕಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ಬೆಲೆಯನ್ನು ಅನುಸರಿಸಿ ಭಾರತದಲ್ಲಿ ಅಡುಗೆ ಅನಿಲದ ಬೆಲೆಯನ್ನು ಏರಿಸಲಾಗಿದೆ ಎಂದು ಕೇಂದ್ರ ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ.
Vijaya Karnataka Web rahul gandhi


2020ರ ಜನವರಿಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಅನಿಲದ ಬೆಲೆ ತೀವ್ರ ಏರಿಕೆ ಕಂಡಿದೆ. ಒಂದು ಮೆಟ್ರಿಕ್‌ ಟನ್‌ ಅಡುಗೆ ಅನಿಲದ ಬೆಲೆ 448 ಡಾಲರ್‌ನಿಂದ 567 ಡಾಲರ್‌ಗೆ ಏರಿಕೆಯಾಗಿದೆ. ಇದಕ್ಕೆ ಅನುಗುಣವಾಗಿದೆ ಒಂದು ಸಿಲಿಂಡರ್‌ (14.2 ಕೆಜಿ) ಅಡುಗೆ ಅನಿಲದ ಬೆಲೆಯನ್ನು 144.5 ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಸಬ್ಸಿಡಿರಹಿತ ಗ್ರಾಹಕರು ಇನ್ನು ಮುಂದೆ ಸಿಲಿಂಡರ್‌ಗೆ ಹೆಚ್ಚುವರಿಯಾಗಿ 144.6 ರೂ. ತೆರಬೇಕಾಗಿದೆ. ಅಂದರೆ ಇದುವರೆಗೆ 714 ರೂಪಾಯಿ ಪಾವತಿ ಮಾಡುತ್ತಿದ್ದವರು ಇನ್ನು ಮುಂದೆ 858.5 ರೂಪಾಯಿ ಪಾವತಿಸಬೇಕಿದೆ.

ಇದೇ ವೇಳೆ ಸಬ್ಸಿಡಿ ಸಿಲಿಂಡರ್‌ದಾರರ ಮೇಲಿನ ಹೊರೆ ತಪ್ಪಿಸಲು ಸರಕಾರವು ಸಬ್ಸಿಡಿ ಮೊತ್ತವನ್ನು ದುಪ್ಪಟ್ಟುಗೊಳಿಸಿದೆ. ಈ ಪರಿಣಾಮ ಸಬ್ಸಿಡಿ ಪಡೆಯುವ ಬೆಂಗಳೂರು ಗ್ರಾಹಕರಿಗೆ 8 ರೂ. ಮಾತ್ರ ಹೊರೆಯಾಗಲಿದೆ. ಇದೇ ರೀತಿ, ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ 6 ರೂ. ಹೊರೆ ಬೀಳಲಿದೆ. ಪ್ರತಿ ಸಿಲಿಂಡರ್‌ಗೆ 153.86 ರೂಪಾಯಿ ಇದ್ದ ಸಹಾಯಧನವನ್ನು 291.48 ರೂಪಾಯಿಗೆ ಹೆಚ್ಚಿಸಲಾಗಿದೆ. ಉಜ್ವಲ ಗ್ರಾಹಕರಿಗೆ ಇದುವರೆಗೆ 174.86 ರೂಪಾಯಿ ಸಹಾಯಧನ ನೀಡಲಾಗುತ್ತಿತ್ತು, ಇನ್ನು ಮುಂದೆ 312.48 ರೂಪಾಯಿ ಸಹಾಯಧನ ಪಡೆಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರಾತ್ರೋರಾತ್ರಿ 149 ರೂ. ಹೆಚ್ಚಾದ ಎಲ್‌ಪಿಜಿ ದರ, ಬೆಂಗಳೂರಲ್ಲಿ ಎಷ್ಟಿದೆ? ಇಲ್ಲಿದೆ ವಿವರ

ಸಂಸದ ರಾಹುಲ್‌ ಗಾಂಧಿ ಖಂಡನೆ
ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‌ ದರವನ್ನು 144.5 ರೂ.ವರೆಗೆ ಏರಿಕೆ ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಕೇಂದ್ರ ಸರಕಾರಕ್ಕೆ ಮಾತಿನಲ್ಲೇ ತಿವಿದಿದ್ದಾರೆ. ಯುಪಿಎ ಅವಧಿಯಲ್ಲಿಎಲ್ಪಿಜಿ ಸಿಲಿಂಡರ್‌ ದರ ಏರಿಕೆಯಾಗಿದ್ದರ ವಿರುದ್ಧ ಅಂದು ಬಿಜೆಪಿ ನಾಯಕಿ ಸ್ಮೃತಿ ಇರಾನಿ ಹಾಗೂ ಇತರ ನಾಯಕರು ಪ್ರತಿಭಟನೆ ಮಾಡಿದ್ದ ಚಿತ್ರವನ್ನು ಟ್ವೀಟ್‌ ಮಾಡಿರುವ ರಾಹುಲ್‌, ಈಗ ಅಧಿಕಾರದಲ್ಲಿರುವ ಬಿಜೆಪಿಯವರು ದರ ಏರಿಕೆ ಹಿಂಪಡೆಯುವರೇ ಎಂದು ಪ್ರಶ್ನಿಸಿದ್ದಾರೆ.

ಸಾಲ ವಸೂಲು: ರೈತ ಸಮ್ಮಾನ್‌, ಎಲ್ಪಿಜಿ ಸಬ್ಸಿಡಿಯನ್ನೂ ಮುಟ್ಟುಗೋಲು ಹಾಕಿಕೊಳ್ಳುತ್ತಿವೆ ಬ್ಯಾಂಕ್‌ಗಳು!

ರೋಲ್‌ಬ್ಯಾಕ್‌ ಹೈಕ್‌' ಹ್ಯಾಷ್‌ಟ್ಯಾಗ್‌ನಲ್ಲಿ''ಎಲ್ಪಿಜಿ ಸಿಲಿಂಡರ್‌ ದರ 150 ರೂ. ಏರಿಕೆಯಾಗಿರುವುದರ ವಿರುದ್ಧ ಪ್ರತಿಭಟನೆ ನಡೆಸುವ ಬಿಜೆಪಿ ನಾಯಕರೊಂದಿಗೆ ನನ್ನ ಸಹಮತವಿದೆ. ಆದರೆ ಈಗ 144.5 ರೂ. ಏರಿಕೆಯಾಗಿದ್ದನ್ನು ಹೀಗೆ ಪ್ರತಿಭಟಿಸಿ ದರ ಏರಿಕೆ ಹಿಂಪಡೆಯಬೇಕು,'' ಎಂದಿದ್ದಾರೆ. ಇದೇ ವೇಳೆ ಅವರು ಆರ್ಥಿಕತೆ ಚೇತರಿಕೆಗೆ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೇಂದ್ರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲಎಂದು ದೂರಿದ್ದಾರೆ. ದಿಲ್ಲಿವಿಧಾನಸಭೆ ಚುನಾವಣೆಯಲ್ಲಿಸೋಲು ಅನುಭವಿಸಿದ್ದಕ್ಕೆ ಪ್ರತೀಕಾರವಾಗಿ ಬಿಜೆಪಿ, ಎಲ್ಪಿಜಿ ಬೆಲೆ ಏರಿಸಿ ಬರೆ ಎಳೆದಿದೆ ಎಂದು ಕಾಂಗ್ರೆಸ್‌ ದೂರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ