ಹೊಸದಿಲ್ಲಿ: ಕೆಲವು ಬ್ಯಾಂಕ್ಗಳನ್ನು ಸರಕಾರ ಮುಚ್ಚಲಿದೆ ಎಂಬುದು ಕೇವಲ ವದಂತಿಗಳಾಗಿದ್ದು, ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು. ಸಾರ್ವಜನಿಕ ವಲಯದ ಯಾವುದೇ ಬ್ಯಾಂಕ್ ಅನ್ನು ಮುಚ್ಚುವ ಪ್ರಶ್ನೆಯೇ ಸರಕಾರಕ್ಕಿಲ್ಲ ಎಂದು ಹಣಕಾಸು ಇಲಾಖೆಯ ಕಾರ್ಯ್ದರ್ಶಿ ರಾಜೀವ್ ಕುಮಾರ್ ಹೇಳಿದ್ದಾರೆ. ಸರಕಾರ ಸಂಕಷ್ಟದಲ್ಲಿರುವ ಕೆಲವು ಪಿಎಸ್ಯು ಬ್ಯಾಂಕ್ಗಳನ್ನು ಮುಚ್ಚುವ ಸಾಧ್ಯತೆ ಇದೆ ಎಂಬ ವದಂತಿಗಳು ಇತ್ತೀಚೆಗೆ ಹರಡಿತ್ತು. ಈ ಊಹಾಪೋಹಗಳಿಗೆ ಸರಕಾರ ಇದೀಗ ತೆರೆ ಎಳೆದಿದೆ.
ಪಿಎಸ್ಯು ಬ್ಯಾಂಕ್ ಸ್ಥಗಿತ ಇಲ್ಲ:ಕೇಂದ್ರ
ಕೆಲವು ಬ್ಯಾಂಕ್ಗಳನ್ನು ಸರಕಾರ ಮುಚ್ಚಲಿದೆ ಎಂಬುದು ಕೇವಲ ವದಂತಿಗಳಾಗಿದ್ದು, ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
Vijaya Karnataka Web 24 Dec 2017, 4:00 am