ಆ್ಯಪ್ನಗರ

ಪಿಎನ್‌ಬಿ ಹಗರಣ: ಉಷಾ ಅನಂತಸುಬ್ರಮಣ್ಯನ್‌ ವಜಾ

ಅಲಹಾಬಾದ್‌ ಬ್ಯಾಂಕ್‌ನ ಮಾಜಿ ಸಿಎಂಡಿ ಉಷಾ ಅನಂತ ಸುಬ್ರಮಣಿಯನ್‌ ಅವರನ್ನು ಬ್ಯಾಂಕ್‌ನ ಎಲ್ಲ ಸೇವೆಯಿಂದ ವಜಾ ಮಾಡಲಾಗಿದೆ...

THE ECONOMIC TIMES 14 Aug 2018, 5:00 am
ಅಲಹಾಬಾದ್‌: ಅಲಹಾಬಾದ್‌ ಬ್ಯಾಂಕ್‌ನ ಮಾಜಿ ಸಿಎಂಡಿ ಉಷಾ ಅನಂತ ಸುಬ್ರಮಣಿಯನ್‌ ಅವರನ್ನು ಬ್ಯಾಂಕ್‌ನ ಎಲ್ಲ ಸೇವೆಯಿಂದ ವಜಾ ಮಾಡಲಾಗಿದೆ. ಇದರಿಂದಾಗಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣಕ್ಕೆ(ಪಿಎನ್‌ಬಿ) ಸಂಬಂಧಿಸಿದಂತೆ ಉಷಾ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐಗೆ ಅವಕಾಶವಾಗಲಿದೆ.
Vijaya Karnataka Web govt dismisses usha ananthasubramanian from service
ಪಿಎನ್‌ಬಿ ಹಗರಣ: ಉಷಾ ಅನಂತಸುಬ್ರಮಣ್ಯನ್‌ ವಜಾ


ಉಷಾ ಅವರನ್ನು ವಿಚಾರಣೆ ನಡೆಸಲು ಸಿಬಿಐಗೆ ಕೇಂದ್ರ ಸರಕಾರವು ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಉಷಾ ಅವರನ್ನು ಬ್ಯಾಂಕ್‌ನ ಎಲ್ಲ ಸೇವೆಯಿಂದ ಸೋಮವಾರದಿಂದಲೇ(ಆ.13) ಅನ್ವಯವಾಗುವಂತೆ ಹೊರಗಿಡಲಾಗಿದೆ. ಪಿಎನ್‌ಬಿಗೆ ಸಂಬಂಧಿಸಿದ 14,000 ಕೋಟಿ ರೂ. ವಂಚನೆಯ ಆರೋಪಪಟ್ಟಿಯಲ್ಲಿ ಉಷಾ ಹೆಸರನ್ನು ಸಿಬಿಐ ಸೇರಿಸಿತ್ತು. ಆ ಸಂದರ್ಭದಲ್ಲಿ ಅಲಹಾಬಾದ್‌ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಸ್ಥಾನದಿಂದ ಉಷಾ ಅವರನ್ನು ಹೊರಗಿಡಲಾಗಿತ್ತು. ಆದರೂ, ಬ್ಯಾಂಕ್‌ನ ಇತರೆ ಜವಾಬ್ದಾರಿಗಳನ್ನು ಉದ್ಯೋಗಿಯಾಗಿ ನಿಭಾಯಿಸುತ್ತಿದ್ದರು.

ಉಷಾ ಮತ್ತು ಪಿಎನ್‌ಬಿಯ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಸಂಜೀವ್‌ ಸರಣ್‌ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ, ಸರಕಾರದ ಅನುಮತಿ ಕೇಳಿತ್ತು. ಸರಕಾರ ಅಸ್ತು ಎಂದಿದ್ದು ವಿಚಾರಣೆಗೆ ಹಾದಿ ಸುಗಮವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ