ಆ್ಯಪ್ನಗರ

ಮಹಾರಾಜನ ಮಾರಾಟಕ್ಕೆ ಹಿಂದೇಟು

ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾದ ಮಾರಾಟ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಸ್ಥಗಿತಗೊಳಿಸಿದ್ದು, ಏರ್‌ಲೈನ್ಸ್‌ ನಿರ್ವಹಣೆಗೆ ಹಣಕಾಸು ನೆರವು ಮುಂದುವರಿಸಲು ಸರಕಾರ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ. ಖರೀದಿಗೆ ಬಿಡ್ಡರ್‌ಗಳ ಕೊರತೆ ಕಂಡು ಬಂದಿದೆ. ಅಲ್ಲದೆ, ಇದು ಚುನಾವಣಾ ವರ್ಷವಾದ್ದರಿಂದ ಮಾರಾಟ ಪ್ರಕ್ರಿಯೆಯನ್ನು ಸರಕಾರ ಕೈಬಿಟ್ಟಿದೆ.

TNN & Agencies 20 Jun 2018, 9:43 am
ಹೊಸದಿಲ್ಲಿ : ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾದ ಮಾರಾಟ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಸ್ಥಗಿತಗೊಳಿಸಿದ್ದು, ಏರ್‌ಲೈನ್ಸ್‌ ನಿರ್ವಹಣೆಗೆ ಹಣಕಾಸು ನೆರವು ಮುಂದುವರಿಸಲು ಸರಕಾರ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ. ಖರೀದಿಗೆ ಬಿಡ್ಡರ್‌ಗಳ ಕೊರತೆ ಕಂಡು ಬಂದಿದೆ. ಅಲ್ಲದೆ, ಇದು ಚುನಾವಣಾ ವರ್ಷವಾದ್ದರಿಂದ ಮಾರಾಟ ಪ್ರಕ್ರಿಯೆಯನ್ನು ಸರಕಾರ ಕೈಬಿಟ್ಟಿದೆ.
Vijaya Karnataka Web flight


ನಷ್ಟದ ಹೊರೆ ಹೊತ್ತಿರುವ ಕಂಪನಿಯ ಶೇ.76ರಷ್ಟು ಷೇರುಗಳನ್ನು ಮಾರಾಟ ಮಾಡಲು ಸರಕಾರ ಮುಂದಾಗಿತ್ತು. ಆದರೆ, ಖರೀದಿಗೆ ಯಾವುದೇ ಹೂಡಿಕೆದಾರರು ಮುಂದೆ ಬಂದಿರಲಿಲ್ಲ. ಬಿಡ್ಡರ್‌ಗಳನ್ನು ಆಕರ್ಷಿಸುವಲ್ಲಿ ಏರ್‌ ಇಂಡಿಯಾ ವಿಫಲವಾಗಿದೆ. ಬಿಡ್ಡರ್‌ ಪ್ರಕ್ರಿಯೆಯ ಗಡುವು ಮುಗಿದು 3 ವಾರಗಳು ಪೂರ್ಣಗೊಳ್ಳುವ ಮೊದಲೇ, ಮಾರಾಟ ಪ್ರಕ್ರಿಯೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ ಎನ್ನುವ ಸುದ್ದಿ ಸ್ಪಷ್ಟವಾಗಿದೆ.

ಏರ್‌ ಇಂಡಿಯಾ ಏರ್‌ಲೈನ್ಸ್‌ನ ನಿರ್ವಹಣೆಗೆ ಅಗತ್ಯವಾದಷ್ಟು ಹಣವನ್ನು ಸರಕಾರ ಸದ್ಯದಲ್ಲಿಯೇ ಬಿಡುಗಡೆ ಮಾಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸರಕಾರದ ಉನ್ನತ ಮಟ್ಟದ ಸಮಿತಿ, ಈ ಸಂಬಂಧಿ ತೀರ್ಮಾನವನ್ನು ಕೈಗೊಂಡಿದೆ. ಸೋಮವಾರ ನಡೆದಿದ್ದ ಸಭೆಯಲ್ಲಿ ಹಣಕಾಸು ಖಾತೆ ಉಸ್ತುವಾರಿ ಸಚಿವ ಪಿಯೂಶ್‌ ಗೋಯಲ್‌, ನಾಗರಿಕ ವಿಮಾನ ಯಾನ ಸಚಿವ ಸುರೇಶ್‌ ಪ್ರಭು, ಸಾರಿಗೆ ಸಚಿವ ನಿತಿನ್‌ ಗಡ್ಕರಿ, ಹಣಕಾಸು ಮತ್ತು ನಾಗರಿಕ ವಿಮಾನ ಯಾನ ಸಚಿವಾಲಯದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

''ಏರ್‌ ಇಂಡಿಯಾ ಈಗ ಕಾರ್ಯಾಚರಣೆ ಲಾಭವನ್ನು ದಾಖಲಿಸಿದೆ. ಯಾವ ವಿಮಾನವೂ ಖಾಲಿ ಸಂಚರಿಸುತ್ತಿಲ್ಲ. ಮೊದಲಿಗೆ ಹೋಲಿಸಿದರೆ, ಏರ್‌ಲೈನ್ಸ್‌ನ ಕಾರ್ಯಕ್ಷಮತೆ ಸಾಕಷ್ಟು ಸುಧಾರಿಸಿದೆ. ಹೀಗಾಗಿ ಹೂಡಿಕೆ ಹಿಂಪಡೆಯುವ ಅಗತ್ಯ ಸದ್ಯಕ್ಕಿಲ್ಲ,'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಷೇರುಪೇಟೆ ಪ್ರವೇಶಿಸಲು ಏರ್‌ ಇಂಡಿಯಾ ಸಜ್ಜಾಗುತ್ತಿದ್ದು, ಅದಕ್ಕೂ ಮುನ್ನ ಲಾಭವನ್ನು ದಾಖಲಿಸಲು ಸರಕಾರ ಮುಂದಾಗಿದೆ. ''ಲಿಸ್ಟಿಂಗ್‌ ಕಂಪನಿಯಾಗುವ ನಿಟ್ಟಿನಲ್ಲಿರುವ ನಿಯಮಗಳಿಗೆ ಹೊಂದುವಂತೆ ಏರ್‌ ಇಂಡಿಯಾದಲ್ಲಿ ಸುಧಾರಣೆ ತರಲಾಗಿದೆ. ಸಾರ್ವಜನಿಕರಿಂದ ಬಂಡವಾಳ ಸ್ವೀಕರಿಸಲೂ ಏರ್‌ ಇಂಡಿಯಾ ಮುಂದಾಗಿದೆ,'' ಎಂದು ಮೂಲಗಳು ಹೇಳಿವೆ.

24,000 ಕೋಟಿ ರೂ. ಸಾಲ

ಏರ್‌ ಇಂಡಿಯಾ 24,000 ಕೋಟಿ ರೂ. ಸಾಲದ ಹೊರೆ ಹೊತ್ತಿದೆ. ಈ ಏರ್‌ಲೈನ್ಸ್‌ ಖರೀದಿಸಲು ಮುಂದಾಗುವ ಮಂದಿ ಸಾಲದ ಹೊಣೆಯನ್ನೂ ಹೊರಬೇಕಾಗುತ್ತದೆ. ಜತೆಗೆ 8,000 ಕೋಟಿ ರೂ.ಗಳ ಆಸ್ತಿಯನ್ನೂ ಇದು ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ