ಆ್ಯಪ್ನಗರ

ಜಿಎಸ್‌ಟಿ: ವಿಮೆ ಕಂತು, ಬ್ಯಾಂಕ್‌ ಶುಲ್ಕಗಳು ಏರಿಕೆ?

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿ ನಂತರ ಜುಲೈನಿಂದ ಇನ್ಷೂರೆನ್ಸ್‌ ಪ್ರೀಮಿಯಂ, ಬ್ಯಾಂಕಿಂಗ್‌ ಶುಲ್ಕಗಳು ಏರಿಕೆಯಾಗಬಹುದು...

Vijaya Karnataka Web 1 Jun 2017, 10:21 am

ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿ ನಂತರ ಜುಲೈನಿಂದ ಇನ್ಷೂರೆನ್ಸ್‌ ಪ್ರೀಮಿಯಂ, ಬ್ಯಾಂಕಿಂಗ್‌ ಶುಲ್ಕಗಳು ಏರಿಕೆಯಾಗಬಹುದು.

ಬ್ಯಾಂಕಿಂಗ್‌, ಇನ್ಷೂರೆನ್ಸ್‌, ರಿಯಲ್‌ ಎಸ್ಟೇಟ್‌, ಮ್ಯೂಚುವಲ್‌ ಫಂಡ್‌ಗಳಿಗೆ ಪ್ರಸ್ತುತ ಶೇ.15ರಷ್ಟು ತೆರಿಗೆ ಇದ್ದು, ಜಿಎಸ್‌ಟಿ ನಂತರ ಅದು ಶೇ.18ಕ್ಕೆ ಏರಿಕೆಯಾಗಲಿದೆ. ಇದು ನೇರವಾಗಿ ಗ್ರಾಹಕರಿಗೆ ವರ್ಗವಾಗಲಿದ್ದು, ಈ ಸಂಬಂಧಿ ಸೇವೆಗಳು ಅಲ್ಪ ಪ್ರಮಾಣದಲ್ಲಿ ದುಬಾರಿಯಾಗುವುದು ಖಚಿತ.

ಹೂಡಿಕೆ ಮತ್ತು ಉಳಿತಾಯ ಮಾಡುವ ಮಂದಿಗೂ ಜಿಎಸ್‌ಟಿ ಹೊರೆ ಬೀಳಲಿದೆ. ಹಣಕಾಸು ಸೇವೆಗಳಿಗೆ ಶೇ.18ರ ಜಿಎಸ್‌ಟಿ ನಿಗದಿಯಾಗಿದ್ದು, ಮೊದಲಿಗಿಂತಲೂ ಶೇ.3ರಷ್ಟು ದುಬಾರಿಯಾಗಲಿದೆ.

ಟರ್ಮ್‌ ಇನ್ಷೂರೆನ್ಸ್‌ ಪ್ರೀಮಿಯಂ, ಯುಲಿಪ್‌, ಆರೋಗ್ಯ ವಿಮೆ, ವಾಹನ ವಿಇಮೆ, ಎಂಡೋಮೆಂಟ್‌ ಮೊದಲ ವರ್ಷದ ಪ್ರೀಮಿಯಂ, ಎಂಡೋಮೆಂಟ್‌ ರೆನಿವಲ್‌ ಪ್ರೀಮಿಯಂ, ಕಾರ್‌ ವಿಮೆ ಮೇಲೆ ಪ್ರಸ್ತುತ ಶೇ.15ರಷ್ಟು ತೆರಿಗೆ ಇದ್ದು, ಜು.1ರ ಜಿಎಸ್‌ಟಿ ಜಾರಿ ನಂತರ ಶೇ.18ಕ್ಕೆ ಏರಿಕೆಯಾಗಲಿದೆ. ಇದರ ಜತೆಗೆ ಕೃಷಿ ಕಲ್ಯಾಣ ಸೆಸ್‌, ಸ್ವಚ್ಛ ಭಾರತ ಸೆಸ್‌ ಸೇರಿದಂತೆ ಸೇವಾ ತೆರಿಗೆಯೂ ಅನ್ವಯವಾಗಲಿದೆ.

Vijaya Karnataka Web gst impact insurance premium bank charges to increase
ಜಿಎಸ್‌ಟಿ: ವಿಮೆ ಕಂತು, ಬ್ಯಾಂಕ್‌ ಶುಲ್ಕಗಳು ಏರಿಕೆ?


ಚಪ್ಪಲಿ, ಬಿಸ್ಕತ್ತು, ಜವಳಿಗೆ ಕಡಿಮೆ ಜಿಎಸ್‌ಟಿಗೆ ಆಗ್ರಹ

ವಿಕ ಸುದ್ದಿಲೋಕ ಬೆಂಗಳೂರು

ಜನ ಸಾಮಾನ್ಯರು ಉಪಯೋಗಿಸುವ ಚಪ್ಪಲಿ, ಬಿಸ್ಕತ್ತು ಹಾಗೂ ಜವಳಿ ಉತ್ಪನ್ನಗಳ ಮೇಲೆ ಕಡಿಮೆ ಜಿಎಸ್‌ಟಿ ನಿಗದಿಪಡಿಸುವಂತೆ ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಅವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್‌ ಜೇಟ್ಲಿ ಅವರಿಗೆ ಪತ್ರ ಬರೆದಿರುವ ದೇಶಪಾಂಡೆ ಅವರು ಶ್ರೀಮಂತರಿರಲಿ ಅಥವಾ ಬಡವರಿರಲಿ ನಿತ್ಯ ಅಗತ್ಯವಾಗಿ ಬಳಸುವ ಉತ್ಪನ್ನಗಳ ಮೇಲೆ ಕಡಿಮೆ ಜಿಎಸ್‌ಟಿ ನಿಗದಿಪಡಿಸಬೇಕು. ಚಪ್ಪಲಿ, ಬಿಸ್ಕತ್ತು ಹಾಗೂ ಜವಳಿ ಉತ್ಪನ್ನಗಳ ತಯಾರಿಕೆಯಲ್ಲಿ ಅಸಂಘಟಿತ ಕಾರ್ಮಿಕರು ದುಡಿಯುತ್ತಿದ್ದಾರೆ. ಆದ್ದರಿಂದ ಕಡಿಮೆ ತೆರಿಗೆ ದರ ವಿಧಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ