ಆ್ಯಪ್ನಗರ

​ಜಿಎಸ್‌ಟಿ ರಿಟರ್ನ್ಸ್‌: ವ್ಯಾಪಾರಿಗಳಿಗೆ ಸಿಕ್ಕಿತು ಹೆಚ್ಚುವರಿ ಟೈಮ್‌

ದೇಶದ ಅತಿ ದೊಡ್ಡ ತೆರಿಗೆ ಸುಧಾರಣೆ ಎಂದು ಹೇಳಲಾಗುವ ಸರಕು ಮತ್ತು ಸೇವಾ ತೆರಿಗೆ ಪದ್ಧತಿಯನ್ನು ಈ ಮೊದಲು ಘೋಷಿಸಿದಂತೆ ಜುಲೈ 1ರಂದೇ ಜಾರಿಗೆ ತರಲು ಜಿಎಸ್‌ಟಿ ಮಂಡಳಿ ದೃಢ ನಿರ್ಧಾರ ಪ್ರಕಟಿಸಿದೆ.

ಏಜೆನ್ಸೀಸ್ 19 Jun 2017, 9:28 am
ಹೊಸದಿಲ್ಲಿ: ದೇಶದ ಅತಿ ದೊಡ್ಡ ತೆರಿಗೆ ಸುಧಾರಣೆ ಎಂದು ಹೇಳಲಾಗುವ ಸರಕು ಮತ್ತು ಸೇವಾ ತೆರಿಗೆ ಪದ್ಧತಿಯನ್ನು ಈ ಮೊದಲು ಘೋಷಿಸಿದಂತೆ ಜುಲೈ 1ರಂದೇ ಜಾರಿಗೆ ತರಲು ಜಿಎಸ್‌ಟಿ ಮಂಡಳಿ ದೃಢ ನಿರ್ಧಾರ ಪ್ರಕಟಿಸಿದೆ.
Vijaya Karnataka Web gst implement from july 1
​ಜಿಎಸ್‌ಟಿ ರಿಟರ್ನ್ಸ್‌: ವ್ಯಾಪಾರಿಗಳಿಗೆ ಸಿಕ್ಕಿತು ಹೆಚ್ಚುವರಿ ಟೈಮ್‌


ಈ ನಡುವೆ, ಹೊಸ ತೆರಿಗೆ ಪದ್ಧತಿ ಜಾರಿ ಬಳಿಕ ವ್ಯಾಪಾರಿಗಳು ಪಾಲಿಸಬೇಕಾದ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆಗೆ ಹೆಚ್ಚುವರಿ ಕಾಲಾವಕಾಶ ಒದಗಿಸಲಾಗಿದೆ.
ಭಾನುವಾರ ನಡೆದ ಜಿಎಸ್‌ಟಿ ಮಂಡಳಿಯ 17ನೇ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಘೋಷಿಸಿರುವ ತೆರಿಗೆಗಳಲ್ಲಿ ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳನ್ನು ಪ್ರಕಟಿಸಲಾಗಿದೆ.

ಯಾವಾಗ ರಿಟರ್ನ್ಸ್‌ ಸಲ್ಲಿಕೆ?
ಹಿಂದಿನ ಸೂಚನೆ ಪ್ರಕಾರ, ವರ್ತಕರು ಜುಲೈ ತಿಂಗಳ ಜಿಎಸ್‌ಟಿ ರಿಟರ್ನ್ಸ್‌ನ್ನು ಆಗಸ್ಟ್‌ 10ಕ್ಕೆ ಸಲ್ಲಿಸಬೇಕಾಗಿತ್ತು. ಇದೀಗ ಅದಕ್ಕೆ ಸೆಪ್ಟೆಂಬರ್‌ 5ರವರೆಗೆ ಕಾಲಾವಕಾಶ ನೀಡಲಾಗಿದೆ.
ಕಂಪನಿಗಳು ಸೆಪ್ಟೆಂಬರ್‌ 10ರೊಳಗೆ ಸಲ್ಲಿಸಬೇಕಾಗಿದ್ದ ಆಗಸ್ಟ್‌ ತಿಂಗಳ ಇನ್‌ವಾಯ್ಸ್‌ಗಳನ್ನು ಸೆಪ್ಟೆಂಬರ್‌ 20ರವರೆಗೂ ಸಲ್ಲಿಸಲು ಹೊಸ ಸೂಚನೆಯಲ್ಲಿ ಅವಕಾಶವಿದೆ.
ಸೆಪ್ಟೆಂಬರ್‌ ತಿಂಗಳ ಬಳಿಕ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ. ಹಿಂದಿನ ತಿಂಗಳ ಲೆಕ್ಕಾಚಾರಗಳನ್ನು ಮುಂದಿನ ತಿಂಗಳ 10ರೊಳಗೆ ಸಲ್ಲಿಸುವುದು ಕಡ್ಡಾಯ ಎಂದು ಸಭೆಯ ಬಳಿಕ ಮಾತನಾಡಿದ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದರು.
ಹಲವಾರು ಕಂಪನಿಗಳು ತಾವು ಜಿಎಸ್‌ಟಿಗೆ ಪರಿಪೂರ್ಣ ಸಿದ್ಧತೆ ನಡೆಸಿಲ್ಲ ಎಂದು ಹೇಳುತ್ತಿವೆ. ಆದರೆ, ಜಿಎಸ್‌ಟಿಯ ಜಾರಿಯನ್ನು ವಿಳಂಬಿಸುವಷ್ಟು ವಿಫುಲ ಸಮಯಾವಕಾಶ ಸರಕಾರಕ್ಕೂ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಜಿಎಸ್‌ಟಿ ಮಂಡಳಿ ಮುಂದಿನ ಸಭೆ ಜೂನ್‌ 30ರಂದು ನಡೆಯಲಿದೆ. ಜೂನ್‌ 30ರ ಮಧ್ಯರಾತ್ರಿ ಜಿಎಸ್‌ಟಿ ಚಾಲನೆಗೆ ದಿಲ್ಲಿಯಲ್ಲಿ ಕಾರ್ಯಕ್ರಮವಿದೆ.

ಲಾಟರಿಗೆ ಎಷ್ಟು ತೆರಿಗೆ?
12%
ಸರಕಾರಿ ಲಾಟರಿಗೆ
28%
ಖಾಸಗಿ ಲಾಟರಿ


ಹೋಟೆಲ್‌ಗಳ ತೆರಿಗೆ ಲೆಕ್ಕ
7500 ರೂ.ಗಿಂತ ಹೆಚ್ಚು ದಿನ ಬಾಡಿಗೆ ವಸೂಲಿ ಮಾಡುವ ಹೋಟೆಲ್‌ಗಳಿಗೆ 28 ಶೇ. ತೆರಿಗೆ.
ಈ ಹೋಟೆಲ್‌ಗಳಲ್ಲಿರುವ ರೆಸ್ಟೋರೆಂಟ್‌ಗಳಿಗೆ ಎಸಿ ಇರುವ ರೆಸ್ಟೋರೆಂಟ್‌ಗಳಿಗೆ ವಿಧಿಸುವಷ್ಟೇ ತೆರಿಗೆ(18%)

ಅಂತಿಮವಾಗದ ಇ-ವೇ ಬಿಲ್‌
ಇ-ಬಿಲ್‌ ಪಾವತಿಗೆ ಸಂಬಂಧಿಸಿ ಇನ್ನೂ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಹೊಸ ಜಿಎಸ್‌ಟಿ ನಿಗದಿವರೆಗೆ ಹಳೆ ನಿಯಮಗಳೇ ಚಾಲ್ತಿಯಲ್ಲಿರುತ್ತವೆ.

ಅಕ್ರಮ ಲಾಭ ತಡೆಗೆ ಮಂಡಳಿ
ಜಿಎಸ್‌ಟಿ ಮಂಡಳಿ ಅನಿಯಮಿತ, ಅಕ್ರಮ ಲಾಭ ತಡೆಯೂ ಸೇರಿದಂತೆ 6 ನಿಯಮಗಳನ್ನು ಇತ್ಯರ್ಥಗೊಳಿಸಿದೆ. ಇನ್ನೆರಡು ವರ್ಷದಲ್ಲಿ ಅಕ್ರಮ ಲಾಭ ತಡೆ ಮಂಡಳಿ ರಚಿಸಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ