ಆ್ಯಪ್ನಗರ

ಪತಂಜಲಿ ಬೆಳವಣಿಗೆಗೆ ಜಿಎಸ್‌ಟಿ ಹೊಡೆತ

ಕೇಂದ್ರ ಸರಕಾರ ಜಾರಿಗೊಳಿಸಿದ ನೋಟು ಅಮಾನ್ಯತೆ ಮತ್ತು ಜಿಎಸ್‌ಟಿಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಪತಂಜಲಿಯ ಮಾರಾಟ ವಹಿವಾಟಿನ ಬೆಳವಣಿಗೆಗೂ ಜಿಎಸ್‌ಟಿಯಿಂದ ಹೊಡೆತ ಬಿದ್ದಿದೆ ಎಂದು ಬಾಬಾ ರಾಮದೇವ್‌ ನೇತೃತ್ವದ ಪತಂಜಲಿ ಕಂಪನಿಯ ಎಂಡಿ ಆಚಾರ್ಯ ಬಾಲಕೃಷ್ಣ ದೂರಿದ್ದಾರೆ.

PTI 21 May 2018, 8:17 am
ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೊಳಿಸಿದ ನೋಟು ಅಮಾನ್ಯತೆ ಮತ್ತು ಜಿಎಸ್‌ಟಿಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಪತಂಜಲಿಯ ಮಾರಾಟ ವಹಿವಾಟಿನ ಬೆಳವಣಿಗೆಗೂ ಜಿಎಸ್‌ಟಿಯಿಂದ ಹೊಡೆತ ಬಿದ್ದಿದೆ ಎಂದು ಬಾಬಾ ರಾಮದೇವ್‌ ನೇತೃತ್ವದ ಪತಂಜಲಿ ಕಂಪನಿಯ ಎಂಡಿ ಆಚಾರ್ಯ ಬಾಲಕೃಷ್ಣ ದೂರಿದ್ದಾರೆ.
Vijaya Karnataka Web Ramdev Baba


''ಸದ್ಯದಲ್ಲಿಯೇ ನಮ್ಮ ಆದಾಯದ ವಿವರಗಳನ್ನು ಪ್ರಕಟಿಸಲಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಾಸ್ತಿಯೇ ಇರಲಿದೆ. ಜಿಎಸ್‌ಟಿ ಕಾರಣದಿಂದ ತೊಡಕಾಗಿದ್ದರೂ, ಅಲ್ಪ ಮಟ್ಟದ ಬೆಳವಣಿಗೆಯನ್ನು ನಾವು ದಾಖಲಿಸಿದ್ದೇವೆ,'' ಎಂದು ಕಂಪನಿ ವಕ್ತಾರ ಎಸ್‌.ಕೆ.ತಿಜರಾವಾಲಾ ಹೇಳಿದ್ದಾರೆ.

''ಜಿಎಸ್‌ಟಿಗಾಗಿ ನಾವು ಹೆಚ್ಚಿನ ಗಮನ ನೀಡಬೇಕಾಯಿತು. ಇದರ ಅನುಷ್ಠಾನಕ್ಕೆ ನಮಗೆ ಹೆಚ್ಚಿನ ಸಮಯ ಇರಲಿಲ್ಲ. ನಮ್ಮ ಪಾಲಿಗೆ ಇದು 12 ತಿಂಗಳ ವರ್ಷವಲ್ಲ,'' ಎಂದು ಅವರು ಹೇಳಿದ್ದಾರೆ. 2016-17ರಲ್ಲಿ ಕಂಪನಿ 10,561 ಕೋಟಿ ರೂ. ವಹಿವಾಟು ನಡೆಸಿ, ಶೇ.111ರ ಬೆಳವಣಿಗೆ ದಾಖಲಿಸಿತ್ತು. ವಹಿವಾಟನ್ನು ದ್ವಿಗುಣಗೊಳಿಸುವ ಗುರಿಯನ್ನು ಕಂಪನಿ ಪ್ರಕಟಿಸಿತ್ತು.

ನೋಟು ಅಮಾನ್ಯದ ಸಂದರ್ಭದಲ್ಲಿ ಆ ಬೆಳವಣಿಗೆಯನ್ನು ರಾಮದೇವ್‌ ಸ್ವಾಗತಿಸಿದ್ದರು. ಆದರೆ, ಈಗ ಮೋದಿ ಅವರ ಆರ್ಥಿಕ ನೀತಿಗಳ ಬಗ್ಗೆ ಪತಂಜಲಿ ಸಂಸ್ಥೆ ತುಸು ಆಕ್ಷೇಪ ವ್ಯಕ್ತಪಡಿಸಿದೆ. ಜಿಎಸ್‌ಟಿಗೆ ಹೊಂದಿಕೊಳ್ಳಲು ಎರಡು ತಿಂಗಳು ಬೇಕಾಯಿತು ಎಂದು ಕಂಪನಿ ಅಭಿಪ್ರಾಯಪಟ್ಟಿದೆ. ಮುಂದಿನ ದಿನಗಳಲ್ಲಿ ಪ್ಯಾಕ್‌ ಮಾಡಿದ ಕುಡಿಯುವ ನೀರು, ಡೇರಿ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಕಂಪನಿ ಸಜ್ಜಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಪತಂಜಲಿ ಕಂಪನಿಯ ಬೆಳವಣಿಗೆ ಸಾಕಷ್ಟು ಪಟ್ಟು ವೃದ್ಧಿಸಿದೆ. ''ಪ್ರತಿ ವರ್ಷವೂ ಕಂಪನಿಯ ಆದಾಯವು ದ್ವಿಗುಣಗೊಳ್ಳುತ್ತಾ ಸಾಗಲಿದೆ. 2018ರ ಮಾರ್ಚ್‌ ಅಂತ್ಯದ ಹೊತ್ತಿಗೆ ವಹಿವಾಟು 20,000 ಕೋಟಿ ರೂ. ದಾಟಲಿದೆ,'' ಎಂದು ರಾಮದೇವ್‌ ಅಂದಾಜು ಮಾಡಿದ್ದರು. ಅಲ್ಲದೇ, ಪತಂಜಲಿಯ ವಾರ್ಷಿಕ ಆದಾಯವು ಹಿಂದೂಸ್ಥಾನ್‌ ಲಿವರ್‌ ಲಿಮಿಟೆಡ್‌ ಕಂಪನಿಯನ್ನು 2019ರ ಮಾರ್ಚ್‌ ಹೊತ್ತಿಗೆ ಮೀರಿಸಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ