ಆ್ಯಪ್ನಗರ

ವಸೂಲಾಗದ ಸಾಲದಿಂದ ಪ್ರಾಮಾಣಿಕರಿಗೆ ಹೊರೆ: ರಾಷ್ಟ್ರಪತಿ

ಬ್ಯಾಂಕಿಂಗ್‌ ವಲಯದಲ್ಲಿ ಹೆಚ್ಚುತ್ತಿರುವ ವಸೂಲಾಗದ ಸಾಲದ ಬಿಕ್ಕಟ್ಟಿನಿಂದ, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಜನತೆಗೆ ಹೊರೆಯಾಗುತ್ತಿದೆ ಎಂದು ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ಹೇಳಿದ್ದಾರೆ.

Vijaya Karnataka 6 Apr 2018, 5:00 am
ಹೊಸದಿಲ್ಲಿ : ಬ್ಯಾಂಕಿಂಗ್‌ ವಲಯದಲ್ಲಿ ಹೆಚ್ಚುತ್ತಿರುವ ವಸೂಲಾಗದ ಸಾಲದ ಬಿಕ್ಕಟ್ಟಿನಿಂದ, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಜನತೆಗೆ ಹೊರೆಯಾಗುತ್ತಿದೆ ಎಂದು ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ಹೇಳಿದ್ದಾರೆ.
Vijaya Karnataka Web honest citizens ultimately bear burden of bank defaults president ram nath kovind
ವಸೂಲಾಗದ ಸಾಲದಿಂದ ಪ್ರಾಮಾಣಿಕರಿಗೆ ಹೊರೆ: ರಾಷ್ಟ್ರಪತಿ


ಬ್ಯಾಂಕ್‌ ಸಾಲ ಪಡೆದ ಉದ್ದೇಶಪೂರ್ವಕ ಸುಸ್ತಿದಾರರು ಹಾಗೂ ವಂಚಕರ ಕ್ರಿಮಿನಲ್‌ ಕೃತ್ಯಗಳಿಂದ ಉಂಟಾಗುವ ಹೊರೆಯನ್ನು ಅಂತಿಮವಾಗಿ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಜನರು ಭರಿಸುವಂತಾಗುತ್ತದೆ ಎಂದು ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ಹೇಳಿದ್ದಾರೆ.

ಕೈಗಾರಿಕಾ ಮಂಡಳಿ ಫಿಕ್ಕಿಯ ಮಹಿಳಾ ಘಟಕ (ಎಫ್‌ಎಲ್‌ಒ) ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬ್ಯಾಂಕಿಂಗ್‌ ವಲಯದ ಬಿಕ್ಕಟ್ಟನ್ನು ವಿವರಿಸಿದರು.

2017ರ ಡಿಸೆಂಬರ್‌ ವೇಳೆಗೆ ಉದ್ದೇಶಪೂರ್ವಕ ಸಾಲ ಸುಸ್ತಿದಾರರ ಸಂಖ್ಯೆ 9,063ಕ್ಕೆ ಏರಿಕೆಯಾಗಿದೆ. ಇಂಥ ಪ್ರಕರಣಗಳಲ್ಲಿ 1 ಲಕ್ಷ ಕೋಟಿ ರೂ.ಗೂ ಅಧಿಕ ಸುಸ್ತಿ ಸಾಲದ ಮೊತ್ತ ಇದೆ. ಇದಲ್ಲದೆ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ 7.77 ಲಕ್ಷ ಕೋಟಿ ರೂ. ಎನ್‌ಪಿಎ(ವಸೂಲಾಗದ ಸಾಲ) ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ