ಆ್ಯಪ್ನಗರ

ಐಸಿಐಸಿಐ ಬ್ಯಾಂಕ್‌ ಹುದ್ದೆ ತೊರೆದ ಚಂದಾ ಕೊಚ್ಚಾರ್

ವಿಡಿಯೋಕಾನ್ ಗ್ರೂಪ್ ಜತೆಗೆ ಮತ್ತು ಇತರ ಕೆಲವೊಂದು ವಿಚಾರದಲ್ಲಿ ಅಕ್ರಮ ಎಸಗಲಾಗಿದೆ ಎಂದು ಸೆಬಿ ಮತ್ತು ಇತರ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿದ್ದು, ಕೊಚ್ಚಾರ್ ಕುಟುಂಬದ ವಿರುದ್ಧ ಆರೋಪಗಳಳು ಕೇಳಿಬಂದಿದ್ದವು.

Vijaya Karnataka Web 4 Oct 2018, 4:09 pm
ಹೊಸದಿಲ್ಲಿ: ಐಸಿಐಸಿಐ ಬ್ಯಾಂಕ್‌ ಮುಖ್ಯಸ್ಥೆ ಸ್ಥಾನದಿಂದ ಚಂದಾ ಕೊಚ್ಚಾರ್ ಹೊರನಡೆದಿದ್ದಾರೆ. ಅವಧಿಗೂ ಮುಂಚೆಯೇ ನಿವೃತ್ತಿ ಬಯಸಿದ್ದ ಅವರ ಮನವಿಯನ್ನು ಐಸಿಐಸಿಐ ಬ್ಯಾಂಕ್‌ನ ನಿರ್ದೇಶಕರ ಮಂಡಳಿ ಅಂಗೀಕರಿಸಿದ್ದು, ಸಂದೀಪ್ ಭಕ್ಷಿ ಅವರನ್ನು ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಿದೆ.
Vijaya Karnataka Web **FILE** Mumbai: In this file photo dated Sept 12, 2016, are seen ICICI Bank Man...


ಸಂದೀಪ್ ಭಕ್ಷಿ ಅ. 3, 2023ರವರೆಗೆ ಬ್ಯಾಂಕಿನ ಎಂಡಿ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಉಳಿದಂತೆ ಅವರ ವೇತನ ಇತ್ಯಾದಿ ಸಂಬಂಧಿತ ವಿಚಾರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಜತೆಗೆ ಬ್ಯಾಂಕಿನ ಮತ್ತೋರ್ವ ಸ್ವತಂತ್ರ್ಯ ನಿರ್ದೇಶಕ ಎಂಡಿ ಮಲ್ಯ ಅನಾರೋಗ್ಯದ ಕಾರಣ ನೀಡಿ ಬ್ಯಾಂಕ್‌ನ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯನ್ನು ಕೂಡ ನಿರ್ದೇಶಕರ ಮಂಡಳಿ ಅಂಗೀಕರಿಸಿದೆ.

ವಿಡಿಯೋಕಾನ್ ಗ್ರೂಪ್ ಜತೆಗೆ ಮತ್ತು ಇತರ ಕೆಲವೊಂದು ವಿಚಾರದಲ್ಲಿ ಅಕ್ರಮ ಎಸಗಲಾಗಿದೆ ಎಂದು ಸೆಬಿ ಮತ್ತು ಇತರ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿದ್ದು, ಕೊಚ್ಚಾರ್ ಕುಟುಂಬದ ವಿರುದ್ಧ ಆರೋಪಗಳು ಕೇಳಿಬಂದಿದ್ದವು. ಹೀಗಾಗಿ ಚಂದಾ ಅವರ ಹುದ್ದೆಗೆ ಕುತ್ತುಂಟಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ