ಆ್ಯಪ್ನಗರ

ಐಕಾಯಿನ್‌ ವಂಚನೆ, ದೂರುಗಳ ಸುರಿಮಳೆ

ನಗರದಲ್ಲಿ ನಡೆದಿರುವ ಐಕಾಯಿನ್‌ ವಂಚನೆ ಪ್ರಕರಣದಲ್ಲಿ ಮೋಸಹೋದ 250ಕ್ಕೂ ಹೆಚ್ಚು ಮಂದಿ ಶನಿವಾರ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ...

Vijaya Karnataka 24 Jun 2019, 5:00 am
ಚಿಕ್ಕಮಗಳೂರು: ನಗರದಲ್ಲಿ ನಡೆದಿರುವ ಐಕಾಯಿನ್‌ ವಂಚನೆ ಪ್ರಕರಣದಲ್ಲಿ ಮೋಸಹೋದ 250ಕ್ಕೂ ಹೆಚ್ಚು ಮಂದಿ ಶನಿವಾರ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ರೂವಾರಿ ರುಕ್ಸಿಂದಾಬಾನುಳನ್ನು ಶುಕ್ರವಾರ ರಾತ್ರಿ ಬಂಧಿಸಿರುವ ಸುದ್ದಿ, ಮಾಧ್ಯಮಗಳಲ್ಲಿ ಪ್ರಕಟವಾಗಿದ್ದನ್ನು ಕಂಡ ಜನರು ಶನಿವಾರ ಬೆಳಗಿನಿಂದಲೇ ದೂರು ಅರ್ಜಿಗಳನ್ನು ಹಿಡಿದು ನಗರ ಪೊಲೀಸ್‌ ಠಾಣೆಗೆ ಎಡತಾಕಲು ಆರಂಭಿಸಿದರು.
Vijaya Karnataka Web icoin scam in chikkamagalur
ಐಕಾಯಿನ್‌ ವಂಚನೆ, ದೂರುಗಳ ಸುರಿಮಳೆ


ಕೆಲವರು 3 ಪಟ್ಟು ಹಣದ ಆಸೆಗೆ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದ ಹಣವನ್ನೂ ತಂದು ಐಕಾಯಿನ್‌ ವ್ಯವಹಾರಕ್ಕೆ ಹೂಡಿಕೆ ಮಾಡಿದ್ದರು. ಇನ್ನೂ ಕೆಲವರು ಮದುವೆ, ಮಕ್ಕಳ ವಿದ್ಯಾಭ್ಯಾಸದಂತಹ ಸಾಂದರ್ಭಿಕ ಉದ್ದೇಶಗಳಿಗೆ ಅನುಕೂಲವಾಗುತ್ತದೆ ಎಂದು ನಂಬಿ ಹಣ ಹೂಡಿಕೆ ಮಾಡಿದ್ದರು.

ತಳ್ಳುಗಾಡಿಯಲ್ಲಿ ಹಣ್ಣು ಮಾರುವ ವ್ಯಾಪಾರಿಯೊಬ್ಬರು ಬೆವರು ಸುರಿಸಿ ಗಳಿಸಿದ 3 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಮಾಜಿ ಶಾಸಕ ಸಿಎಂಎಸ್‌ ಶಾಸ್ತ್ರಿಅವರ ಮೊಮ್ಮಗಳು ಸಿಂಧೂರಾ ಸಹ ಐಕಾಯಿನ್‌ ವ್ಯವಹಾರದಲ್ಲಿ 3 ಲಕ್ಷ ರೂ. ಹೂಡಿಕೆ ಮಾಡಿ ಕಳೆದುಕೊಂಡಿದ್ದಾರೆ. ತಾತನವರೇ ಕಟ್ಟಿ ಬೆಳೆಸಿದ ಸಹಕಾರಿ ಬ್ಯಾಂಕ್‌ ನಗರದಲ್ಲಿ ಉತ್ತಮವಾಗಿ ನಡೆಯುತ್ತಿರುವಾಗ ಇಲ್ಲಿ ಹಣ ಹೂಡುವ ಅಗತ್ಯವೇನಿತ್ತೆಂದು ಅಲ್ಲಿದ್ದವರು ಮಾತನಾಡಿಕೊಳ್ಳುತ್ತಿದ್ದರು.

ವಿಜಯಪುರದಲ್ಲಿ ವಾಹನ ಸವೀರ್‍ಸ್‌ ಸ್ಟೇಷನ್‌ ಮಾಲೀಕ ರಫೀಕ್‌ ಎಂಬವವರು 14 ಲಕ್ಷ ರೂ. ಹೂಡಿಕೆ ಮಾಡಿ ಕೈಸುಟ್ಟುಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಿದರು. ತಮ್ಮ ಹೆಸರಿನಲ್ಲಿ 10 ಲಕ್ಷ ಹಾಗೂ ಪತ್ನಿಯ ಹೆಸರಿನಲ್ಲಿ 4 ಲಕ್ಷ ರೂ. ತೊಡಗಿಸಿದ್ದಾಗಿ ಸುದ್ದಿಗಾರರಿಗೆ ತಿಳಿಸಿದರು.

ಎಂ.ಜಿ.ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ರಸ್ತೆ ಬದಿ ಚುರುಮುರಿ ಮಾರುವ ಶೇಖರ್‌ ಎಂಬಾತ ಕಳೆದ 8 ದಿನಗಳ ಹಿಂದಷ್ಟೇ 75 ಸಾವಿರ ರೂ. ತೊಡಗಿಸಿದ್ದು, ವಾಪಾಸು ಕೊಡಿಸುವಂತೆ ದೂರು ನೀಡಿದರು.

ಈ ವಂಚನೆಯ ಕಂಪನಿಗೆ ಹಣ ತೊಡಗಿಸಿದ್ದವರ ಪೈಕಿ ಹೆಚ್ಚಿನವರು ವಿದ್ಯಾವಂತರೇ ಇದ್ದಾರೆ. ಪ್ರಕರಣದಲ್ಲಿ ಬಂಧಿತ ಆರೋಪಿ ರುಕ್ಸಿಂದಾ ಬಾನು ಅವರೊಂದಿಗೆ ಸಾಕಷ್ಟು ಮಂದಿ ಏಜೆಂಟರುಗಳು ಹಣ ತೊಡಗಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದರು. ಅವರನ್ನೂ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಕೆಲವರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ