ಆ್ಯಪ್ನಗರ

ಜಿಎಸ್‌ಟಿ ಜಾರಿಗೆ 5 ವರ್ಷ ಅಡ್ಡಗಾಲು ಏಕೆ ಹಾಕಿದಿರಿ?: ಚಿದು ಪ್ರಶ್ನೆ

ನೂತನ ಸರಕು ಮತ್ತು ಸೇವಾ ತೆರಿಗೆ ಪದ್ಧತಿ(ಜಿಎಸ್‌ಟಿ) ಜಾರಿಗೆ ಬಂದು, ಸದ್ಯದಲ್ಲಿಯೇ ಒಂದು ವರ್ಷ ಪೂರ್ಣವಾಗಲಿದೆ...

PTI 26 Jun 2018, 9:22 am
Vijaya Karnataka Web chidambaram
ಚೆನ್ನೈ: ನೂತನ ಸರಕು ಮತ್ತು ಸೇವಾ ತೆರಿಗೆ ಪದ್ಧತಿ(ಜಿಎಸ್‌ಟಿ) ಜಾರಿಗೆ ಬಂದು, ಸದ್ಯದಲ್ಲಿಯೇ ಒಂದು ವರ್ಷ ಪೂರ್ಣವಾಗಲಿದೆ. ಜಿಎಸ್‌ಟಿಯನ್ನು 'ಪ್ರಾಮಾಣಿಕತೆಯ ಸಂಭ್ರಮಾಚರಣೆ' ಎಂದು ಬಣ್ಣಿಸಿರುವ ಕೇಂದ್ರ ಸರಕಾರದ ನಡೆಯನ್ನು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸೋಮವಾರ ಟೀಕಿಸಿದ್ದಾರೆ.

''ಜಿಎಸ್‌ಟಿ ಅನ್ನುವುದು ಪ್ರಾಮಾಣಿಕತೆಯ ಸಂಭ್ರಮಾಚರಣೆ ಎಂದು ಬಿಜೆಪಿ ನೇತೃತ್ವದ ಸರಕಾರ ಇಂದು ಹೇಳುತ್ತಿದೆ. ಆದರೆ, ಅಂದು ಯುಪಿಎ ಸರಕಾರ ಜಾರಿಗೆ ಮುಂದಾದಾಗ ವಿರೋಧಿಸಿದ್ದು ಏಕೆ? ಜಿಎಸ್‌ಟಿ ಜಾರಿಗೆ 5 ವರ್ಷಗಳ ಕಾಲ ಅಡ್ಡಗಾಲು ಹಾಕಿದ್ದು ಏಕೆ?'' ಎಂದು ಪ್ರಶ್ನಿಸಿದ್ದಾರೆ.

ಜಿಎಸ್‌ಟಿ ಜಾರಿಯ ಯಶಸ್ಸನ್ನು ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಈ ಮಧ್ಯೆ, ಸರಣಿ ಟ್ವೀಟ್‌ ಮೂಲಕ ಬಿಜೆಪಿ ನಡೆಯನ್ನು ಚಿದಂಬರಂ ಪ್ರಶ್ನಿಸಿದ್ದಾರೆ. ಅಲ್ಲದೇ, ''ಜಿಎಸ್‌ಟಿ ಜಾರಿಯಲ್ಲಾಗಿರುವ ಲೋಪದೋಷಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವ ಅರುಣ್‌ ಜೇಟ್ಲಿ ಮತ್ತು ಹಂಗಾಮಿ ವಿತ್ತ ಸಚಿವರೇಕೆ ಮಾತನಾಡುತ್ತಿಲ್ಲ. ಜಿಎಸ್‌ಟಿ ಜಾರಿಯಾದ 12 ತಿಂಗಳ ಬಳಿಕವೂ ಏಕೆ ಜಿಎಸ್‌ಟಿಆರ್‌-ಫಾರ್ಮ್‌ 2 ಮತ್ತು ಜಿಎಸ್‌ಟಿಆರ್‌-ಫಾರ್ಮ್‌ 3 ಅನ್ನು ಇನ್ನೂ ಜಾರಿಗೊಳಿಸಿಲ್ಲ?'' ಎಂದೂ ಕೇಳಿದ್ದಾರೆ.

ಜಿಎಸ್‌ಟಿ ಬಗ್ಗೆ ಮನ್‌ಕಿಬಾತ್‌ನಲ್ಲಿ ಭಾನುವಾರ ಪ್ರಸ್ತಾಪಿಸಿದ್ದ ಪ್ರಧಾನಿ, ''ಜಿಎಸ್‌ಟಿ ಅನ್ನುವುದು ಒಕ್ಕೂಟ ವ್ಯವಸ್ಥೆಯ ಉದಾಹರಣೆಯಾಗಿದೆ. ಹೊಸ ವ್ಯವಸ್ಥೆಯನ್ನು ಪ್ರಾಮಾಣಿಕತೆಯ ಹಬ್ಬದಂತೆ ಸಂಭ್ರಮಾಚರಣೆ ಮಾಡಬೇಕು,'' ಎಂದು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ