ಆ್ಯಪ್ನಗರ

ಸಶಸ್ತ್ರ ಪಡೆಗೂ ಬಾಧಿಸಿದ ಐಎಲ್‌ಆ್ಯಂಡ್‌ಎಫ್‌ಎಸ್‌ ಬಾಂಡ್‌ಗಳ ಸೋಂಕು

ಒಂದು ಕಾಲದಲ್ಲಿ ಐಎಲ್‌ ಆ್ಯಂಡ್‌ ಎಫ್‌ಎಸ್‌ ಬಾಂಡ್‌ಗಳಿಗೆ ಒಳ್ಳೆಯ ಹೆಸರಿತ್ತು. ಎಎಎ ರೇಟಿಂಗ್‌ ಪಡೆದಿದ್ದ ಈ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವೆಂದು ಹೇಳಲಾಗಿತ್ತು.

Vijaya Karnataka 11 Mar 2019, 7:25 am
ಹೊಸದಿಲ್ಲಿ: ಹೆಚ್ಚಿನ ಸಾಲದ ಹೊರೆಯಿಂದ ತತ್ತರಿಸಿರುವ ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಸಿಂಗ್‌ ಸರ್ವೀಸಸ್‌(ಐಎಲ್‌ ಆ್ಯಂಡ್‌ ಎಫ್‌ಎಸ್‌) ಕಂಪನಿಯಿಂದ ಈಗಾಗಲೇ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪಟ್ಟಿಗೆ ಭಾರತೀಯ ಸಶಸ್ತ್ರ ಪಡೆಯ ಯೋಧರು ಈಗ ಹೊಸ ಸೇರ್ಪಡೆ!
Vijaya Karnataka Web Bond


ಐಎಲ್‌ ಆ್ಯಂಡ್‌ ಎಫ್‌ಎಸ್‌ ಬಾಂಡ್‌ಗಳ ದೆಸೆಯಿಂದ ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಕೆಲಸ ಮಾಡುವ ವೇತನದಾರ ಉದ್ಯೋಗಿಗಳು ಮತ್ತು ಪೋಸ್ಟಲ್‌ ಲೈಫ್‌ ಇನ್ಷೂರೆನ್ಸ್‌ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದೆ. ಒಂದು ಕಾಲದಲ್ಲಿ ಐಎಲ್‌ ಆ್ಯಂಡ್‌ ಎಫ್‌ಎಸ್‌ ಬಾಂಡ್‌ಗಳಿಗೆ ಒಳ್ಳೆಯ ಹೆಸರಿತ್ತು. ಎಎಎ ರೇಟಿಂಗ್‌ ಪಡೆದಿದ್ದ ಈ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವೆಂದು ಹೇಳಲಾಗಿತ್ತು.

ಅಂದಹಾಗೇ ಆರ್ಮಿ ವೆಲ್‌ಫೇರ್‌ ಫಂಡ್‌ ಬ್ಯಾಟಲ್‌ ಕ್ಯಾಸುಯೆಲ್ಟೀಸ್‌(2016ರಲ್ಲಿ ಆರಂಭ), ಆರ್ಮಿ ಸೆಂಟ್ರಲ್‌ ವೆಲ್‌ಫೇರ್‌ ಫಂಡ್‌ ಮತ್ತು ಪ್ಯಾರಪ್ಲೇಜಿಕ್‌ ರೀಹ್ಯಾಬಿಲಿಟೇಷನ್‌ ಸೆಂಟರ್‌ -ಈ ಮೂರು ನಿರ್ದಿಷ್ಟ ನಿಧಿಗಳನ್ನು ಭಾರತೀಯ ಸೇನೆ ಹೊಂದಿದೆ. ದೇಶಕ್ಕಾಗಿ ದುಡಿಯುವ ಯೋಧರಿಗೆ ಈ ನಿಧಿಗಳನ್ವಯ ಕಾಲಕಾಲಕ್ಕೆ ನೆರವು ನೀಡಲಾಗುತ್ತಿದೆ.

ಆದರೆ, ಈ ನಿಧಿಗಳಲ್ಲಿನ ಹಣವನ್ನು ಸಾಲದಿಂದ ತತ್ತರಿಸಿರುವ ಐಎಲ್‌-ಎಫ್‌ಎಸ್‌ನ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ. ಇದರಿಂದಾಗಿ ಲಕ್ಷಾಂತರ ಯೋಧರು ಮತ್ತು ಅವರ ಕುಟುಂಬಕ್ಕೆ ಆಸರೆಯಾಗಿದ್ದ ಹಣಕ್ಕೆ ಸಂಚಕಾರ ಎದುರಾಗಿದೆ.

ಮುಂದಿನ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ, ಐಎಲ್‌ ಆ್ಯಂಡ್‌ ಎಫ್‌ಎಸ್‌ನಲ್ಲಿರುವ ತಮ್ಮ ಹಣಕ್ಕೆ ಬಿಡುಗಡೆ ಹೇಗೆ ಎನ್ನುವ ಬಗ್ಗೆ ಪರಾಮರ್ಶಿಸಲು ಸೇನೆಯ ಪ್ರತಿನಿಧಿಗಳು ರಕ್ಷಣಾ ಸಚಿವಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಈ ಸೂಕ್ಷ್ಮ ವಿಷಯವನ್ನು ಸರಕಾರ ಹೇಗೆ ನಿಭಾಯಿಸುತ್ತದೆ ಎನ್ನುವುದು ಕುತೂಹಲದ ಸಂಗತಿ.

ಇತ್ತೀಚೆಗಷ್ಟೇ ಐಎಲ್‌ ಆಂಡ್‌ ಎಫ್‌ಎಸ್‌ ಅನ್ನು ಸರಕಾರವು ತನ್ನ ವಶಕ್ಕೆ ಪಡೆದುಕೊಂಡಿದ್ದು, ಕೊಟಕ್‌ ಮಹೀಂದ್ರಾ ಬ್ಯಾಂಕ್‌ ಎಂಡಿ ಉದಯ್‌ ಕೊಟಕ್‌ ನೇತೃತ್ವದಲ್ಲಿ 6 ಮಂದಿ ಸದಸ್ಯರ ಸಮಿತಿ ರಚಿಸಿದೆ. ಈ ಕಂಪನಿ ಷೇರುದಾರರು ಸಾಲದ ಸುಳಿಯಿಂದ ಸಂಸ್ಥೆಯನ್ನು ಪಾರುಮಾಡಲು ಸಮ್ಮತಿಸಿದ್ದು, ಅದರ ಅನ್ವಯ ಕೇಂದ್ರ ಸರಕಾರ ಸಂಸ್ಥೆಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ.

ಈ ಕಂಪನಿಯು 91,000 ಕೋಟಿ ರೂ.ಗೂ ಅಧಿಕ ಮೊತ್ತದ ಸಾಲದ ಸುಳಿಯಲ್ಲಿ ಸಿಲುಕಿದೆ. ದೇಶದ ಮೂಲ ಸೌಕರ್ಯ ಯೋಜನೆಗಳಿಗೆ ಹಣ ಪೂರೈಸುವ ಸಲುವಾಗಿ 31 ವರ್ಷಗಳ ಹಿಂದೆ ಪ್ರಾರಂಭವಾದ ಈ ಕಂಪನಿ ಈಗ ದಯನೀಯ ಸ್ಥಿತಿ ತಲುಪಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ