ಆ್ಯಪ್ನಗರ

ಆದಾಯ ತೆರಿಗೆದಾರರಿಗೆ ಗುಡ್‌ ನ್ಯೂಸ್‌: ಐಟಿ ರಿಟರ್ನ್ಸ್‌ಗೆ ನ,30ರವರೆಗೆ ಗಡುವು ವಿಸ್ತರಣೆ!

2019-20ರ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಯ ಕೊನೆಯ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಇದೀಗ ನವೆಂಬರ್ 30ರವರೆಗೆ ಗಡುವು ವಿಸ್ತರಿಸಿರುವುದಾಗಿ ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ.

Vijaya Karnataka Web 4 Jul 2020, 5:30 pm
ಬೆಂಗಳೂರು: 2019-20ರ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಯ ಕೊನೆಯ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಇದೀಗ ನವೆಂಬರ್ 30ರವರೆಗೆ ಗಡುವು ವಿಸ್ತರಿಸಿರುವುದಾಗಿ ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ.
Vijaya Karnataka Web income tax


ಸದ್ಯಕ್ಕಿರುವ ಪರಿಸ್ಥಿತಿಯನ್ನು ಮನಗಂಡು ಐಟಿಆರ್ ಸಲ್ಲಿಕೆ ಅವಧಿಯನ್ನು ನವೆಂಬರ್ 30ರವರೆಗೂ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಟ್ವೀಟ್ ನಲ್ಲಿ ಹೇಳಿದೆ. ಎರಡು ದಿನಗಳ ಹಿಂದಷ್ಟೇ ಇದಕ್ಕೆ ಪೂರಕವಾದ ಕ್ರಮಗಳನ್ನ ಐಟಿ ಇಲಾಖೆ ಕೈಗೊಂಡಿತ್ತು. ತೆರಿಗೆ ಉಳಿತಾಯದ ಹೂಡಿಕೆಗಳಿಗೆ ಇದ್ದ ಗಡುವನ್ನು ಜುಲೈ 31ರವರೆಗೆ ವಿಸ್ತರಿಸಲಾಗಿತ್ತು.
'' ಪ್ರಸ್ತುತ ಇರುವ ಬಿಕ್ಕಟ್ಟಿನ ಸಮಯವನ್ನು ಮತ್ತು ಗಮನದಲ್ಲಿಟ್ಟುಕೊಂಡು, ನಾವು ಆದಾಯ ತೆರಿಗೆ ಸಲ್ಲಿಕೆ ಅವಧಿಯನ್ನು ವಿಸ್ತರಿಸುತ್ತಿದ್ದೇವೆ. ಈಗ, 2019-20ನೇ ಸಾಲಿನ ಐಟಿಆರ್ ಸಲ್ಲಿಸುವಿಕೆಯನ್ನು ನವೆಂಬರ್ 30ಕ್ಕೆ ವಿಸ್ತರಿಸಲಾಗಿದೆ'' ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.

ಚೀನಾ ಕಂಪನಿಗಳ ಮೊಬೈಲ್‌ ಉತ್ಪಾದನೆಗೆ ಭಾರೀ ಹೊಡೆತ ನೀಡಿದ ಭಾರತ!

ಎರಡು ದಿನಗಳ ಹಿಂದಷ್ಟೇ ಇದಕ್ಕೆ ಪೂರಕವಾದ ಕ್ರಮಗಳನ್ನ ಐಟಿ ಇಲಾಖೆ ಕೈಗೊಂಡಿತ್ತು. ತೆರಿಗೆ ಉಳಿತಾಯದ ಹೂಡಿಕೆಗಳಿಗೆ ಇದ್ದ ಗಡುವನ್ನು ಜುಲೈ 31ರವರೆಗೆ ವಿಸ್ತರಿಸಿತ್ತು. ಇದರಿಂದ ಹೂಡಿಕೆದಾರರ ತಮ್ಮ ಹಣವನ್ನ ಈ ಯೋಜನೆಗಳಿಗೆ ಹಾಕಿ ಆ ಮೂಲಕ ತೆರಿಗೆ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಹೂಡಿಕೆಗಳನ್ನ ಐಟಿ ರಿಟರ್ನ್ ಸಲ್ಲಿಕೆ ವೇಳೆ ನಮೂದಿಸಿ ತೆರಿಗೆ ಹಣ ಕ್ಲೈಮ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ, ಉಳಿತಾಯ ಯೋಜನೆಗೆ ಹೂಡಿಕೆ ಮಾಡುವ ಗಡುವು ಹಾಗೂ ಐಟಿ ರಿಟರ್ನ್ ಫೈಲ್ ಮಾಡುವ ಗಡುವು ಎರಡೂ ಪೂರಕವಾಗಿರುವಂತೆ ಐಟಿ ಇಲಾಖೆ ಎಚ್ಚರ ವಹಿಸಿದೆ. ಪಿಪಿಎಫ್ ಸೇರಿ ಹಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿಲ್ಲ ಬದಲಾವಣೆ

ಟಿಕ್‌ಟಾಕ್‌, ಹೆಲೋ ನಿಷೇಧದಿಂದ ಚೀನಾದ ಟೆಕ್‌ ದೈತ್ಯ ಬೈಟ್‌ಡ್ಯಾನ್ಸ್‌ಗೆ 44,800 ಕೋಟಿ ನಷ್ಟ!

ಜೀವ ವಿಮೆ, ಪಿಪಿಎಫ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್, ಇಎಲ್ಎಸ್ಎಸ್ ಇತ್ಯಾದಿ ಸರ್ಕಾರದ ಉಳಿತಾಯ ಯೋಜನೆಗಳಲ್ಲಿ ಜನರು ತಮ್ಮ ಹಣವನ್ನ ತೊಡಗಿಸಿಕೊಳ್ಳಲು ಸಾಧ್ಯ. ಹೆಚ್ಚು ಆದಾಯ ಕೊಡದಿದ್ದರೂ ಕಡಿಮೆ ರಿಸ್ಕ್ ಹೊಂದಿರುವ ಈ ಉಳಿತಾಯ ಯೋಜನೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಈ ತಿಂಗಳ ಅಂತ್ಯದವರೆಗೂ ಇದರಲ್ಲಿ ಹಣ ತೊಡಗಿಸಿಕೊಳ್ಳಲು ಜನರಿಗೆ ಅವಕಾಶ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ