ಆ್ಯಪ್ನಗರ

ಇಪಿಎಫ್‌ಒ ಸದಸ್ಯತ್ವ ಹೆಚ್ಚಳ, ಹೊಸ ಉದ್ಯೋಗಿಗಳ ಸಂಖ್ಯೆ 59% ವೃದ್ಧಿ

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಅಂಕಿ-ಅಂಶಗಳ ಪ್ರಕಾರ ಹಣಕಾಸು ವರ್ಷ 2021-22ರಲ್ಲಿ ನಿವ್ವಳ ಹೊಸ ಉದ್ಯೋಗಗಳ ಸೇರ್ಪಡೆ ಪ್ರಮಾಣ ಶೇ. 58.7ರಷ್ಟು ವೃದ್ಧಿಯಾಗಿದೆ. ಆದರೆ ಇನ್ನೂ ಕೋವಿಡ್‌ ಪೂರ್ವ ಮಟ್ಟವನ್ನು ಮುಟ್ಟಿಲ್ಲ.

Edited byಎನ್‌. ಸಚ್ಚಿದಾನಂದ | Vijaya Karnataka Web 27 May 2022, 11:37 am

ಹೈಲೈಟ್ಸ್‌:

  • ಹಣಕಾಸು ವರ್ಷ 2021-22ರಲ್ಲಿ ಇಪಿಎಫ್‌ಒ ಸದಸ್ಯತ್ವ ಹೆಚ್ಚಳ
  • ನಿವ್ವಳ ಹೊಸ ಉದ್ಯೋಗಗಳ ಪ್ರಮಾಣ ಶೇ.58.7ರಷ್ಟು ವೃದ್ಧಿ
  • ಆರ್ಥಿಕತೆ ಚೇತರಿಕೆ ಸೂಚನೆ, ಹೀಗಿದ್ದೂ ಕೋವಿಡ್‌ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web EPFO
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಡೇಟಾ ಪ್ರಕಾರ ಹಣಕಾಸು ವರ್ಷ 2021-22ರಲ್ಲಿ ನಿವ್ವಳ ಹೊಸ ಉದ್ಯೋಗಗಳ ಪ್ರಮಾಣ ಶೇ. 58.7ರಷ್ಟು ವೃದ್ಧಿಯಾಗಿದೆ. ಕೋವಿಡ್‌ ಬಿಕ್ಕಟ್ಟಿನ ಬಳಿಕ ಆರ್ಥಿಕತೆ ಚೇತರಿಕೆ ಕಂಡಿದೆ ಎಂಬ ಅಂಶವನ್ನು ಈ ಅಂಕಿ-ಅಂಶಗಳು ಬಿಂಬಿಸುತ್ತಿವೆ.
ಉದ್ಯೋಗಿಗಳ ರಾಜ್ಯ ವಿಮಾ ನಿಗಮದಲ್ಲಿ (ಇಎಸ್‌ಐಸಿ) ಹೊಸ ಚಂದಾದಾರರ ಸಂಖ್ಯೆ ಶೇ. 29.6 ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್‌ಪಿಎಸ್‌) ಚಂದಾದಾರರ ಸಂಖ್ಯೆಯಲ್ಲಿ ಶೇ. 23.4 ಹೆಚ್ಚಳವಾಗಿದೆ. ಕಳೆದ 2020-21ಕ್ಕೆ ಹೋಲಿಸಿದರೆ ಇಪಿಎಫ್‌ಒಗೆ ನೋಂದಣಿಯಾಗಿರುವ ಉದ್ಯೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ಇಪಿಎಫ್‌ಒ ಅಡಿಯಲ್ಲಿ ನಿವ್ವಳ ಹೊಸ ಚಂದಾದಾರರ ಸಂಖ್ಯೆಯು 2020-21ರಲ್ಲಿ 77 ಲಕ್ಷವಿದ್ದರೆ, 2021-22ರಲ್ಲಿ 1.22 ಕೋಟಿಗೆ ತಲುಪಿದೆ. ಇಎಸ್‌ಐಸಿಗೆ ಸೇರ್ಪಡೆಯಾದವರ ಸಂಖ್ಯೆ 1.49 ಕೋಟಿಯಷ್ಟಿದೆ. ಎನ್‌ಪಿಎಸ್‌ಗೆ ಸೇರ್ಪಡೆಯಾದವರ ಸಂಖ್ಯೆ 7.7 ಲಕ್ಷದಷ್ಟಿದೆ. ಇದರ ಹಿಂದಿನ ವರ್ಷ 6.2 ಲಕ್ಷದಷ್ಟಿತ್ತು.

ಇಪಿಎಫ್‌ಒ, ಇಎಸ್‌ಐಸಿ, ಪಿಎಫ್‌ಆರ್‌ಡಿಎಗಳ ಸಾಮಾಜಿಕ ಭದ್ರತೆ ಯೋಜನೆಗಳಿಗೆ ಹೊಸದಾಗಿ ಸೇರ್ಪಡೆಯಾದವರ ಮಾಹಿತಿಯನ್ನು ಕ್ರೋಡೀಕರಿಸಿ, ಹೊಸ ಉದ್ಯೋಗಿಗಳ ಸಂಖ್ಯೆ ವೃದ್ಧಿಯಾಗಿರುವ ಅಂಶವನ್ನು ಕೇಂದ್ರ ಸಚಿವಾಲಯವು ವಿವರಿಸಿದೆ.

ಕೋವಿಡ್‌ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆ

ಅಂಕಿ-ಅಂಶ ಮತ್ತು ಯೋಜನೆ ಅನುಷ್ಠಾನ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ವರದಿ ಪ್ರಕಾರ, ಇಪಿಎಫ್‌ಒ ಮತ್ತು ಎನ್‌ಪಿಎಸ್‌ಗೆ ಸೇರ್ಪಡೆಯಾದವರ ಸಂಖ್ಯೆ ಗಣನೀಯವಾಗಿ ವೃದ್ಧಿಯಾಗಿದೆ. ಆದಾಗ್ಯೂ, ಕೋವಿಡ್‌ ಮೊದಲಿನ ವರ್ಷಗಳಿಗೆ ಹೋಲಿಸಿದರೆ ಹೊಸ ಸೇರ್ಪಡೆಗಳು ಕಡಿಮೆಯೇ ಇದೆ.

ಇಪಿಎಫ್‌ಒಗೆ ಉದ್ಯೋಗಿಗಳ ನಿವ್ವಳ ನೋಂದಣಿ

ಮಾರ್ಚ್ - 15.3 ಲಕ್ಷ

ಫೆಬ್ರವರಿ - 12.8 ಲಕ್ಷ

ಇಎಸ್‌ಐಸಿಗೆ ಹೊಸ ಉದ್ಯೋಗಿಗಳ ಸೇರ್ಪಡೆ

ಮಾರ್ಚ್ - 14.0 ಲಕ್ಷ

ಫೆಬ್ರವರಿ - 12.7 ಲಕ್ಷ

ಎನ್‌ಪಿಎಸ್‌ಗೆ ನೋಂದಣಿ

ಮಾರ್ಚ್ - 75,931

ಫೆಬ್ರವರಿ - 64,611

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ 'ಎಕನಾಮಿಕ್ ಟೈಮ್ಸ್' ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.
ಲೇಖಕರ ಬಗ್ಗೆ
ಎನ್‌. ಸಚ್ಚಿದಾನಂದ
2019ರಿಂದ ವಿಜಯ ಕರ್ನಾಟಕ ವೆಬ್‌ನಲ್ಲಿ ಉಪಸಂಪಾದಕರಾಗಿದ್ದಾರೆ. 2015ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಇವರು ಸದ್ಯ ‘ವಿಕ’ ವೆಬ್‌ನ ವಾಣಿಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ