ಆ್ಯಪ್ನಗರ

ಹೂಡಿಕೆದಾರರಿಗೆ ಭಾರತ ಜಗತ್ತಿನಲ್ಲೇ ಬೆಸ್ಟ್‌: ನಿರ್ಮಲಾ ಸೀತಾರಾಮನ್‌

ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ದೇಶವಾಗಿದ್ದು, ಅತ್ಯುತ್ತಮ ಕೌಶಲ್ಯದ ಮಾನವ ಶಕ್ತಿಯನ್ನು ಹೊಂದಿದೆ ಎಂದು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಹೇಳಿದರು.

Vijaya Karnataka Web 17 Oct 2019, 10:02 pm
ವಾಷಿಂಗ್ಟನ್‌: ಹೂಡಿಕೆದಾರರಿಗೆ ಜಗತ್ತಿನಲ್ಲಿ ಭಾರತಕ್ಕಿಂತಲೂ ಉತ್ತಮ ತಾಣ ಸಿಗುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Vijaya Karnataka Web ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್


ಬಂಡವಾಳಗಾರರನ್ನು ಗೌರವಿಸುವ ಪ್ರಜಾತಾಂತ್ರಿಕ ಪರಿಸರ ಭಾರತದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ವಾಷಿಂಗ್ಟನ್‌ನಲ್ಲಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಕೇಂದ್ರ ಕಚೇರಿಯಲ್ಲಿ ಅಮೆರಿಕ-ಭಾರತ ಮಹತ್ವದ ಮತ್ತು ಪಾಲುದಾರಿಕೆ ವೇದಿಕೆಯ ಸಹಯೋಗದಲ್ಲಿ ಫಿಕ್ಕಿ ಆಯೋಜಿಸಿರುವ ಕಾರ್ಯಕ್ರಮವೊಂದರಲ್ಲಿ ನಿರ್ಮಲಾ ಸೀತಾರಾಮನ್‌ ಮಾತನಾಡಿದರು.

ಸುಧಾರಣೆಗಳನ್ನು ತರಲು ಸರಕಾರ ನಿರಂತರ ಶ್ರಮಿಸುತ್ತಿರುವುದಾಗಿ ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಭರವಸೆ ನೀಡಿದ ಅವರು, ಒತ್ತಡದ ವಲಯಗಳಲ್ಲಿ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ ವಿತ್ತ ಸಚಿವರು ತಿಳಿಸಿದರು.

ಒಟ್ಟಾರೆ ಬಳಕೆಯನ್ನು ವೃದ್ಧಿಸುವ ಕ್ರಮವಾಗಿ ನಿರ್ಮಾಣ ವಲಯದ ಎಲ್ಲ ಬ್ಯಾಂಕುಗಳು ಮತ್ತು ಅವುಗಳ ಪಾಲುದಾರರು, ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆಗಳು ಒಟ್ಟಾಗಿ ಸಣ್ಣ ಪಟ್ಟಣಗಳು ಮತ್ತು ಗ್ರಾಮಗಳಿಗೆ ಸೇವೆಯನ್ನು ವಿಸ್ತರಿಸಿ ಎಲ್ಲ ರೀತಿಯ ಸಾಲದ ನೆರವು ಕಲ್ಪಿಸಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ