ಆ್ಯಪ್ನಗರ

ಹಣದುಬ್ಬರ ನಿಯಂತ್ರಣಕ್ಕೆ ಬರುವವರೆಗೆ ಜಿಎಸ್‌ಟಿ ದರ ಪರಿಷ್ಕರಣೆ ವಿಳಂಬ : ವರದಿ

ದೇಶದಲ್ಲಿ ಉಂಟಾಗಿರುವ ಮಿತಿಮೀರಿದ ಹಣದುಬ್ಬರ ಮತ್ತು ಪ್ರಾದೇಶಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಲ್ಲಿ ಬದಲಾವಣೆ ತರುವ ಪ್ರಕ್ರಿಯೆ ವಿಳಂಬವಾಗಲಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Edited byಬಾನುಪ್ರಸಾದ ಕೆ.ಎನ್\u200c. | Vijaya Karnataka Web 26 May 2022, 1:11 pm
ಹೊಸದಿಲ್ಲಿ: ದೇಶದಲ್ಲಿ ಉಂಟಾಗಿರುವ ಮಿತಿಮೀರಿದ ಹಣದುಬ್ಬರ ಮತ್ತು ಪ್ರಾದೇಶಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಲ್ಲಿ ಬದಲಾವಣೆ ತರುವ ಪ್ರಕ್ರಿಯೆ ವಿಳಂಬವಾಗಲಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಕಾರಿ ಆಸ್ತಿಗಳ ಖಾಸಗೀಕರಣ ಮತ್ತು ಬಂಡವಾಳ ಹಿಂತೆಗೆದ ಮಾತನಾಡಿರುವ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಜಿಎಸ್‌ಟಿ ದರ ಪರಿಷ್ಕರಣೆ ಕುರಿತೂ ಮಾಹಿತಿ ನೀಡಿದ್ದಾರೆ.
Vijaya Karnataka Web GST


ಪವನ್ ಹನ್ಸ್ ಮತ್ತು ಸೆಂಟ್ರಲ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (CEL)ನಿಂದ ಬಂಡವಾಳ ಹಿಂತೆಗೆತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಾನೂನು ದೃಷ್ಟಿಕೋನವನ್ನು ಕೋರಿದೆ. ಇದು ಯಶಸ್ವಿ ಬಿಡ್‌ದಾರನ್ನು ಒಳಗೊಂಡಂತೆ ಕೂನೂನು ತೊಡಕುಗಳನ್ನು ಎದುರಿಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸರ್ಕಾರವು ಪ್ರಸ್ತುತ ಜಾರಿಯಲ್ಲಿರುವ ಮಾರುಕಟ್ಟೆ ಸಾಲ ಯೋಜನೆಯನ್ನೇ ಮುಂದುವರಿಸಲಿದೆ. ಹೆಚ್ಚಿನ ಆಹಾರ ಮತ್ತು ರಸಗೊಬ್ಬರ ಸಬ್ಸಿಡಿ ಪೂರೈಸಲು ಹಣವನ್ನು ಸಂಗ್ರಹಿಸಲು ಇತರ ಮೂಲಗಳನ್ನು ಹುಡುಕಲಿದೆ. ಕಳೆದ ಕೆಲ ದಿನಗಳಿಂದ ಹಣದುಬ್ಬರ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳಿಂದಾಗಿ ಸರ್ಕಾರದ ಆದಾಯದಲ್ಲಿ ಇಳಿಕೆಯಾಗಿದೆ. ಜಿಎಸ್‌ಟಿ ದರಗಳನ್ನು ಪರಿಶೀಲಿಸಲು GST ಮಂಡಳಿ ರಚಿಸರುವ ಸಚಿವರ ತಂಡ (GoM) ಇನ್ನೂ ತನ್ನ ವರದಿಯನ್ನು ಅಂತಿಮಗೊಳಿಸಿಲ್ಲ.

ಏಪ್ರಿಲ್‌ನಲ್ಲಿ ದಾಖಲೆಯ ₹1.68 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಲು ಹಣದುಬ್ಬರ ಕಾರಣವಲ್ಲ! ಮತ್ತೇನು?

ಹೆಚ್ಚಿನ ಅಗತ್ಯ ವಸ್ತುಗಳು ಶೇ.5ರ ಜಿಎಸ್‌ಟಿ ಸ್ಲ್ಯಾಬ್‌ನಲ್ಲಿ
ಆದರೆ, ಭಾರತದ ಹೆಚ್ಚಿನ ಹಣದುಬ್ಬರವನ್ನು ಗಮನಿಸಿದರೆ, ಈ ಸಂದರ್ಭದಲ್ಲಿ ಜಿಎಸ್‌ಟಿ ದರಗಳ ಬದಲಾವಣಿಗೆ ಸೂಕ್ತ ಸಮಯವಲ್ಲ ಎಂದು ಕೇಂದ್ರ ಮತ್ತು ರಾಜ್ಯಗಳೆರಡೂ ಒಪ್ಪಿಕೊಂಡಿವೆ. ಅಗತ್ಯ ವಸ್ತುಗಳು ಶೇ.5ರ ಸ್ಲ್ಯಾಬ್‌ನಲ್ಲಿಯೇ ಇರಲಿವೆ. ಆದರೆ, ಕೆಲವು ವಸ್ತುಗಳ ಮೇಲಿನ GST ಹೆಚ್ಚಾಗಬಹುದು. ಗ್ರಾಹಕ ಹಣದುಬ್ಬರವು ಕಳೆದ ಎಂಟು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೇರಿದೆ (7.79%) ಈ ಪರಿಸ್ಥಿತಿಯಲ್ಲಿ ಕೆಲವು ಸರಕುಗಳ ಜಿಎಸ್‌ಟಿ ಹೆಚ್ಚಿಸಿ ದುಬಾರಿಯಾಗಿಸಬಹುದು. 'ಆದರೆ, ಹಣದುಬ್ಬರ ಹೆಚ್ಚಿರುವ ಈ ಸಮಯದಲ್ಲಿ ಜಿಎಸ್‌ಟಿ ದರ ಬದಲಾವಣೆ ಕಷ್ಟಕರವಾಗಿದೆ. ಪರಿಸ್ಥಿತಿ ಸುಧಾರಿಸುವವರೆಗೆ ಕಾಯಬೇಕಾಗಿದೆ' ಎಂದು ಅಧಿಕಾರಿ ಹೇಳಿದರು.

ಬ್ಲಾಕ್ ಆಗಿರುವ ಜಿಎಸ್‌ಟಿ ಖಾತೆ ಅನ್ಲಾಕ್ ಆಗದೆ ಕೋಟ್ಯಂತರ ರೂ. ನಷ್ಟ, ಉದ್ಯಮಿಯ ಅಳಲು

ಜೂನ್‌ನಲ್ಲಿ ಜಿಎಸ್‌ಟಿ ಕೌನ್ಸಿಲ್ ಸಭೆ
ಜೂನ್‌ನಲ್ಲಿ ಜಿಎಸ್‌ಟಿ ಕೌನ್ಸಿಲ್ ಸಭೆ ಸೇರುವ ಸಾಧ್ಯತೆ ಇದೆ. ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಮತ್ತೊಂದು ಸಚಿವರ ತಂಡದ (GoM) ವರದಿಯನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಅದು ಆನ್‌ಲೈನ್ ಗೇಮಿಂಗ್, ರೇಸಿಂಗ್ ಮತ್ತು ಕ್ಯಾಸಿನೊಗಳಲ್ಲಿ ಶೇ. 28ರ ಜಿಎಸ್‌ಟಿ ವಿಧಿಸುವ ಕುರಿತದ್ದಾಗಿದೆ ಎಂದು ವರದಿಯಾಗಿದೆ. ಸಾಗರ ಸರಕು ಸಾಗಣೆಯ ಮೇಲಿನ ಸಮಗ್ರ ಜಿಎಸ್‌ಟಿಯನ್ನು ಮಂಡಳಿ ಚರ್ಚಿಸುವ ನಿರೀಕ್ಷೆಯಿದೆ.

ಜಿಎಸ್‌ಟಿ ದರ ರಚನೆಗೆ ಬದಲಾವಣೆಗಳನ್ನು ಸೂಚಿಸಲು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರ ತಂಡವನ್ನು ರಚಿಸಲಾಗಿತ್ತು. ತಲೆಕೆಳಗಾದ ತೆರಿಗೆ ರಚನೆಗಳನ್ನು ಸರಿಪಡಿಸಲು ದರ ಬದಲಾವಣೆಗಳನ್ನು ಸೂಚಿಸಲು ಮತ್ತು ಜಿಎಸ್‌ಟಿ ಸ್ಲ್ಯಾಬ್‌ಗಳ ಸಂಖ್ಯೆಯನ್ನು ಅಸ್ತಿತ್ವದಲ್ಲಿರುವ 5%, 12%, 18% ಮತ್ತು 28% ರಿಂದ ಕೇವಲ ಮೂರಕ್ಕೆ ಇಳಿಸಲು ಇದು ಕಾರ್ಯ ನಿರ್ವಹಿಸುತ್ತಿದೆ. ಹೆಚ್ಚಿನ ಹಣದುಬ್ಬರದಿಂದಾಗಿ ರಾಜ್ಯಗಳು ದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಬೆಂಬಲಿಸುವುದಿಲ್ಲ ಎಂದು ET ವರದಿ ಮಾಡಿದೆ. ಹೆಚ್ಚಿನ ಅಗತ್ಯ ವಸ್ತುಗಳು ಶೇ.5ರ ಜಿಎಸ್‌ಟಿ ಸ್ಲ್ಯಾಬ್‌ನಲ್ಲಿವೆ.'

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ 'ಎಕನಾಮಿಕ್ ಟೈಮ್ಸ್' ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.
ಲೇಖಕರ ಬಗ್ಗೆ
ಬಾನುಪ್ರಸಾದ ಕೆ.ಎನ್\u200c.
ವಿಜಯ ಕರ್ನಾಟಕ ಡಿಜಿಟಲ್\u200c ಪತ್ರಕರ್ತ. ವಿಜ್ಞಾನ ತಂತ್ರಜ್ಞಾನ, ರಾಷ್ಟ್ರೀಯ- ಅಂತಾರಾಷ್ಟ್ರೀಯ, ಸಾಹಿತ್ಯ-ಕಲೆ, ಶಿಕ್ಷಣ, ಆಸಕ್ತಿಯ ವಿಷಯಗಳು... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ