ಆ್ಯಪ್ನಗರ

ಕೃಷಿ ಉದ್ದೇಶಿತ ಚಿನ್ನದ ಸಾಲದ ಬಡ್ಡಿಯನ್ನು ಶೇ.7ಕ್ಕೆ ಇಳಿಸಿದ ಇಂಡಿಯನ್‌ ಬ್ಯಾಂಕ್‌!

ಕೋವಿಡ್‌-19 ಆರ್ಥಿಕ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮ ಬೀರಿದೆ. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಇಂಡಿಯನ್‌ ಬ್ಯಾಂಕ್‌, ಕೃಷಿ ಚಟುವಟಿಕೆ ಸಂಬಂಧಿ ಚಿನ್ನದ ಸಾಲದ ಮೇಲಿನ ಬಡ್ಡಿದರವನ್ನು ಇಳಿಸಿದೆ.

Vijaya Karnataka Web 3 Aug 2020, 9:01 am
ಬೆಂಗಳೂರು: ಕೋವಿಡ್‌-19 ಆರ್ಥಿಕ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮ ಬೀರಿದೆ. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಇಂಡಿಯನ್‌ ಬ್ಯಾಂಕ್‌, ಕೃಷಿ ಚಟುವಟಿಕೆ ಸಂಬಂಧಿ ಚಿನ್ನದ ಸಾಲದ ಮೇಲಿನ ಬಡ್ಡಿದರವನ್ನು ಇಳಿಸಿದೆ.
Vijaya Karnataka Web indian bank


ಜು.22ರಿಂದಲೇ ಇದು ಅನ್ವಯವಾಗಿದೆ. ಕೃಷಿ ಉದ್ದೇಶಗಳಿಗೆ ಆಭರಣಗಳ ಮೇಲೆ ಸಾಲವನ್ನು ವಾರ್ಷಿಕ ಶೇ.7ರ ದರದಲ್ಲಿ ನೀಡಲಾಗುತ್ತಿದೆ. ಸಾಲದ ಪ್ರತಿ 100 ರೂ.ಗೆ ಸುಮಾರು 58 ಪೈಸೆ ಬಡ್ಡಿ ತಗಲುತ್ತದೆ.

ಉಳಿದ ಬ್ಯಾಂಕ್‌ಗಳಿಗೆ ಹೋಲಿಸಿದರೆ ಈಗ ಇದು ಅತ್ಯಂತ ಕಡಿಮೆ ಬಡ್ಡಿದರದ ಸಾಲವಾಗಿದೆ. ಚಿನ್ನದ 80% ಮಾರುಕಟ್ಟೆ ಮೌಲ್ಯದ ಮೇಲೆ ಸಾಲ ನೀಡಲಾಗುತ್ತದೆ. ಹೀಗಾಗಿ ರೈತರು ಹೆಚ್ಚಿನ ಮೊತ್ತದ ಸಾಲಕ್ಕೆ ಅರ್ಹರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಚೀನಾ ರಾಖಿ ಆಮದಿಗೆ ವ್ಯಾಪಾರಿಗಳ ಒಕ್ಕೂಟ ನಿರ್ಬಂಧ, ಮೋದಿ ರಾಖಿಗೆ ಹೆಚ್ಚಿದ ಬೇಡಿಕೆ

ಕೃಷಿ ಚಿನ್ನದ ಮೇಲಿನ ಸಾಲ ಯೋಜನೆಯಡಿ ವ್ಯವಸಾಯಕ್ಕೆ, ಪಶು ಸಂಗೋಪನೆಗೆ, ಮೀನುಗಾರಿಕೆಗೆ ಹಾಗೂ ಇತರ ಕೃಷಿ ಚಟುವಟಿಕೆಗಳಿಗೆ ಸಾಲ ಪಡೆಯಬಹುದು. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಹಾಗೂ ಇತರ ಉದ್ದೇಶಗಳಿಗೂ ಸಾಲ ನೀಡಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ