ಆ್ಯಪ್ನಗರ

ಭಾರತದ ಆರ್ಥಿಕ ಬೆಳವಣಿಗೆ ಸನ್ನಿಹಿತ ಎಂದ ಆರ್‌ಬಿಐ ಗವರ್ನರ್‌

'' ನಾವು ಬಹುತೇಕ ಆರ್ಥಿಕ ಚೇತರಿಕೆಯ ಬಾಗಿಲಿನಲ್ಲಿದ್ದೇವೆ. ಈ ಹಂತದಲ್ಲಿ ಹಣಕಾಸು ಸಂಸ್ಥೆಗಳು ಬೆಳವಣಿಗೆಗೆ ಅಗತ್ಯವಿರುವ ಬಂಡವಾಳವನ್ನು ಹೊಂದಿರುವುದು ಮುಖ್ಯ'' ಎಂದು ಆರ್‌ಬಿಐ ಗವರ್ನರ್‌ ಹೇಳಿದರು.

Vijaya Karnataka Web 22 Oct 2020, 1:44 pm
ಮುಂಬಯಿ: ಭಾರತದ ಆರ್ಥಿಕ ಬೆಳವಣಿಗೆ ಚೇತರಿಕೆಯ ಹಂತದಲ್ಲಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.
Vijaya Karnataka Web ಶಕ್ತಿಕಾಂತ್‌ ದಾಸ್‌
ಶಕ್ತಿಕಾಂತ್‌ ದಾಸ್‌


'' ನಾವು ಬಹುತೇಕ ಆರ್ಥಿಕ ಚೇತರಿಕೆಯ ಬಾಗಿಲಿನಲ್ಲಿದ್ದೇವೆ. ಈ ಹಂತದಲ್ಲಿ ಹಣಕಾಸು ಸಂಸ್ಥೆಗಳು ಬೆಳವಣಿಗೆಗೆ ಅಗತ್ಯವಿರುವ ಬಂಡವಾಳವನ್ನು ಹೊಂದಿರುವುದು ಮುಖ್ಯ'' ಎಂದು ದಾಸ್‌ ಹೇಳಿದರು.

ಹಣಕಾಸು ಆಯೋಗದ ಅಧ್ಯಕ್ಷ ಎನ್‌.ಕೆ ಸಿಂಗ್‌ ಅವರ ಪೋರ್‌ಟ್ರೇಟ್ಸ್‌‌ ಆಫ್‌ ಪವರ್‌: ಹಾಫ್‌ ಎ ಸೆಂಚುರಿ ಆಫ್‌ ಬೀಂಗ್‌ ಎಟ್‌ ರಿಂಗ್‌ಸೈಡ್‌' ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ವಿಷಯ ತಿಳಿಸಿದರು.

ಈಗಾಗಲೇ ಹಲವಾರು ಹಣಕಾಸು ಸಂಸ್ಥೆಗಳು ಬಂಡವಾಳವನ್ನು ಕ್ರೋಢೀಕರಿಸಿವೆ. ಮತ್ತೆ ಕೆಲವು ಸಂಸ್ಥೆಗಳು ಪ್ರಕ್ರಿಯೆಯಲ್ಲಿವೆ. ಕೋವಿಡ್‌ ನಿಯಂತ್ರಣದ ನಂತರ ಸರಕಾರ ದೇಶದ ಆರ್ಥಿಕ ಬೆಳವಣಿಗೆ ಕುರಿತು ವಿತ್ತೀಯ ಮಾರ್ಗದರ್ಶಿ ರಚಿಸಲಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ