ಆ್ಯಪ್ನಗರ

ಲಾಕ್‌ಡೌನ್‌ ಸಡಿಲಿಕೆ‌ ಪರಿಣಾಮ: ದೇಶದ ಉದ್ಯೋಗ ದರ 3.3% ಏರಿಕೆ!

ದೇಶದಲ್ಲಿ ಉದ್ಯೋಗ ಸೃಷ್ಟಿ ದರವು ಜೂನ್‌ 14ಕ್ಕೆ ಅಂತ್ಯವಾದ ವಾರದಲ್ಲಿ ಶೇ.3.3 ಹೆಚ್ಚಳವಾಗಿದ್ದು ಶೇ.35.7ಕ್ಕೆ ತಲುಪಿದೆ. ಕೈಗಾರಿಕೆಗಳಲ್ಲಿ ಕಾರ್ಮಿಕರ ಹಾಜರಾತಿ ಹೆಚ್ಚುತ್ತಿದೆ ಎನ್ನುತ್ತಿದೆ ಚಿಂತಕರ ಚಾವಡಿ ಸಿಎಂಐಇ ವರದಿ.

Vijaya Karnataka Web 17 Jun 2020, 11:05 pm
ಹೊಸದಿಲ್ಲಿ: ದೇಶದಲ್ಲಿ ಉದ್ಯೋಗ ಸೃಷ್ಟಿ ದರವು ಜೂನ್‌ 14ಕ್ಕೆ ಅಂತ್ಯವಾದ ವಾರದಲ್ಲಿ ಶೇ.3.3 ಹೆಚ್ಚಳವಾಗಿದ್ದು ಶೇ.35.7ಕ್ಕೆ ತಲುಪಿದೆ. ಕೈಗಾರಿಕೆಗಳಲ್ಲಿ ಕಾರ್ಮಿಕರ ಹಾಜರಾತಿ ಹೆಚ್ಚುತ್ತಿದೆ ಎನ್ನುತ್ತಿದೆ ಚಿಂತಕರ ಚಾವಡಿ ಸಿಎಂಐಇ ವರದಿ.
Vijaya Karnataka Web employment


ಲಾಕ್‌ಡೌನ್‌ ಸಡಿಲಗೊಳಿಸಿದ ಪರಿಣಾಮ ಮನೆಯಲ್ಲಿದ್ದ ಜನರು ಕೆಲಸಗಳಿಗೆ ಮರಳುತ್ತಿದ್ದಾರೆ. ಹೀಗಾಗಿ ಉದ್ಯೋಗ ಸೃಷ್ಟಿ ದರ ತುಸು ಏರಿಕೆಯಾಗಿದೆ ಎಂದು ಸಿಎಂಐಇ ಸಿಇಒ ಮಹೇಶ್‌ ವ್ಯಾಸ್‌ ಹೇಳಿದ್ದಾರೆ.

ಉದ್ಯೋಗ ದರ ಏರಿಕೆಯಿಂದಾಗಿ ನಿರುದ್ಯೋಗ ದರವು ತ್ವರಿತವಾಗಿ ಕುಸಿಯುತ್ತಿದೆ. ಏಪ್ರಿಲ್‌ ಮತ್ತು ಮೇನಲ್ಲಿ ನಿರುದ್ಯೋಗ ದರ ಶೇ.23.5ರಷ್ಟಿತ್ತು. ಜೂನ್‌ ಮೊದಲ ವಾರದಲ್ಲಿ ಅದು ಶೇ.17.5ಕ್ಕೆ ಇಳಿಕೆಯಾಗಿದೆ. ಎರಡನೇ ವಾರ ಇನ್ನಷ್ಟು ಅಂದರೆ ಶೇ.11.6ಕ್ಕೆ ಕುಸಿದಿದೆ. ಜೂನ್‌ 14ಕ್ಕೆ ಅಂತ್ಯವಾದ ವಾರಾಂತ್ಯದ ಹೊತ್ತಿಗೆ ಕಾರ್ಮಿಕರ ಪಾಲ್ಗೊಳ್ಳುವಿಕೆ ದರ(ಎಲ್‌ಪಿಆರ್‌) ಶೇ.40.4ರಷ್ಟಿತ್ತು. ಮಾರ್ಚ್ 22ರ ವಾರಾಂತ್ಯದಲ್ಲಿ ಅದು 42.4% ಇತ್ತು.

ಚೀನಾ ವಿರುದ್ಧ ಮಾರುಕಟ್ಟೆಯನ್ನೇ ಅಸ್ತ್ರವಾಗಿಸಲು ಭಾರತದ ಸಿದ್ಧತೆ!

ಕೋವಿಡ್‌ ಹಿನ್ನೆಲೆಯ ಎರಡು ತಿಂಗಳ ಲಾಕ್‌ಡೌನ್‌ ಬಳಿಕ, ಸರಕಾರವು ನಿಯಮಗಳನ್ನು ಸಡಿಲಗೊಳಿಸಿದೆ. ಲಾಕ್‌ಡೌನ್‌ ಅನ್ನು ನಿಧಾನವಾಗಿ ಮುಕ್ತಗೊಳಿಸಲಾಗುತ್ತಿದ್ದು, ಕಂಪನಿ ಮತ್ತು ಕೈಗಾರಿಕೆಗಳ ವ್ಯವಹಾರಗಳು ಕ್ರಮೇಣ ಆರಂಭಗೊಳ್ಳುತ್ತಿವೆ.

ಇಎಂಐ ಬಡ್ಡಿ ಮನ್ನಾ ಪ್ರಕರಣ: ಕೇಂದ್ರ ಸರ್ಕಾರ ಕೈಚೆಲ್ಲುವಂತಿಲ್ಲ ಎಂದ ಸುಪ್ರೀಂ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ