ಆ್ಯಪ್ನಗರ

ಜನವರಿ-ಮಾರ್ಚ್‌ನಲ್ಲಿ ಜಿಡಿಪಿ ಶೇ.1.2ಕ್ಕೆ ಕುಸಿತ! ₹30 ಲಕ್ಷ ಕೋಟಿ ನಷ್ಟ

ದೇಶದ ಜಿಡಿಪಿ 2019-20ರ ಜನವರಿ-ಮಾರ್ಚ್ ಅವಧಿಯಲ್ಲಿ ಶೇ.1.2ಕ್ಕೆ ಕುಸಿತಕ್ಕೀಡಾಗುವ ನಿರೀಕ್ಷೆ ಇದೆ. ಹಾಗೂ ದೇಶಾದ್ಯಂತ ಲಾಕ್‌ ಡೌನ ಅವಧಿಯಲ್ಲಿ ಆರ್ಥಿಕತೆಗೆ 30.3 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಎಸ್‌ಬಿಐನ ಸಂಶೋಧನಾ ವರದಿ ತಿಳಿಸಿದೆ.

Vijaya Karnataka Web 27 May 2020, 5:23 pm
ಹೊಸದಿಲ್ಲಿ: ದೇಶದ ಜಿಡಿಪಿ 2019-20ರ ಜನವರಿ-ಮಾರ್ಚ್ ಅವಧಿಯಲ್ಲಿ ಶೇ.1.2ಕ್ಕೆ ಕುಸಿತಕ್ಕೀಡಾಗುವ ನಿರೀಕ್ಷೆ ಇದೆ. ಹಾಗೂ ದೇಶಾದ್ಯಂತ ಲಾಕ್‌ ಡೌನ ಅವಧಿಯಲ್ಲಿ ಆರ್ಥಿಕತೆಗೆ 30.3 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಎಸ್‌ಬಿಐನ ಸಂಶೋಧನಾ ವರದಿ ತಿಳಿಸಿದೆ.
Vijaya Karnataka Web GDP


ರಾಷ್ಟ್ರೀಯ ಅಂಕಿ ಅಂಶಗಳ ಸಂಘಟನೆ (ಎನ್‌ಎಸ್‌ಒ) ಮೇ 29ರಂದು ನಾಲ್ಕನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ವರದಿ ಬಿಡುಗಡೆಗೊಳಿಸಲಿದೆ. ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ.4.7ರಷ್ಟಿತ್ತು. ಕೊರೊನಾ ಬಿಕ್ಕಟ್ಟಿನ ಪರಿಣಾಮ ಆರ್ಥಿಕ ಬೆಳವಣಿಗೆ ಮುಗ್ಗರಿಸಿದೆ ಎಂದು ತಿಳಿಸಿದೆ.

ರಾಜ್ಯಗಳ ಪೈಕಿ ಮಹಾರಾಷ್ಟ್ರ (ಶೇ.15.6), ತಮಿಳುನಾಡು (ಶೇ.9.4) ಮತ್ತು ಗುಜರಾತ್‌ ( ಶೇ.8.6) ಅತಿ ಹೆಚ್ಚು ಜಿಡಿಪಿ ನಷ್ಟಕ್ಕೀಡಾಗಿದೆ. ರಾಜ್ಯಗಳ ವಿತ್ತೀಯ ಕೊರತೆಯ ಪ್ರಮಾಣ 8.5 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಶೇ.4.5ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಎಂದು ಎಸ್‌ಬಿಐ ಗ್ರೂಪ್‌ನ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯ ಕಂತಿ ಘೋಷ್‌ ತಿಳಿಸಿದ್ದಾರೆ.

ಕೆಂಪು ವಲಯಗಳಲ್ಲಿ ಶೇ.50ರಷ್ಟು ನಷ್ಟ ಸಂಭವಿಸಿದ್ದು, ಬಹುಪಾಲು ದೊಡ್ಡ ಜಿಲ್ಲೆಗಳು ಅಲ್ಲಿವೆ. ಹಸಿರು ವಲಯದಲ್ಲಿ ಗ್ರಾಮಾಂತರ ಪ್ರದೇಶಗಳಿದ್ದು, ಅಲ್ಲಿಸಂಭವಿಸಿರುವ ನಷ್ಟ ಕಡಿಮೆ. ಮುಂದಿನ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ಚೇತರಿಸುವ ಸುಳಿವನ್ನೂ ವರದಿ ನೀಡಿದೆ.

ನಾಲ್ಕನೇ ಆರ್ಥಿಕ ಹಿಂಜರಿತ:
ದೇಶ ಸ್ವಾತಂತ್ರ್ಯಾನಂತರ ಮೂರು ಆರ್ಥಿಕ ಹಿಂಜರಿತಗಳನ್ನು ಎದುರಿಸಿದ್ದು, ನಾಲ್ಕನೆಯ ಹಿಂಜರಿತ ಸಮೀಪಿಸಿದೆ ಎಂದು ಕ್ರಿಸಿಲ್‌ ಎಚ್ಚರಿಸಿದೆ. ಕಳೆದ 69 ವರ್ಷಗಳಲ್ಲಿ ಭಾರತ ಕೇವಲ 3 ಸಲ ಮಾತ್ರ ಆರ್ಥಿಕ ಹಿಂಜರಿತ ಎದುರಿಸಿದೆ. 1958, 1966 ಮತ್ತು 1980ರಲ್ಲಿ ಹಿಂಜರಿತವಾಗಿದೆ ಎಂದು ತಿಳಿಸಿದೆ. ಈ ವರ್ಷ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಇದರಿಂದ ಕೃಷಿ ಚಟುವಟಿಕೆಗಳು ಸುಧಾರಿಸಲಿವೆ. ಇದು ಆರ್ಥಿಕ ಹಿಂಜರಿತದ ತೀವ್ರತೆಯನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ