ಆ್ಯಪ್ನಗರ

ಇನ್ಫೋಸಿಸ್‌ ಇದೀಗ ಸ್ಥಿರ: ನಂದನ್‌ ನಿಲೇಕಣಿ

ಇನ್ಫೋಸಿಸ್‌ ತನ್ನ ಸ್ಥಿರತೆಗೆ ಸಂಬಂಧಿಸಿ ಉಂಟಾಗಿದ್ದ ಕಳವಳಗಳನ್ನು ಪರಿಹರಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದು, ಈಗ ಕಂಪನಿ ಅತ್ಯಂತ ಸ್ಥಿರತೆಯಿಂದ ಕೂಡಿದೆ ಎಂದು ಕಾರ‍್ಯಕಾರಿಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ತಿಳಿಸಿದ್ದಾರೆ.

Vijaya Karnataka 24 Jun 2018, 9:55 am
ಬೆಂಗಳೂರು : ಇನ್ಫೋಸಿಸ್‌ ತನ್ನ ಸ್ಥಿರತೆಗೆ ಸಂಬಂಧಿಸಿ ಉಂಟಾಗಿದ್ದ ಕಳವಳಗಳನ್ನು ಪರಿಹರಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದು, ಈಗ ಕಂಪನಿ ಅತ್ಯಂತ ಸ್ಥಿರತೆಯಿಂದ ಕೂಡಿದೆ ಎಂದು ಕಾರ‍್ಯಕಾರಿಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ತಿಳಿಸಿದ್ದಾರೆ.
Vijaya Karnataka Web infosys stable on verge of something momentous says nandan nilekani
ಇನ್ಫೋಸಿಸ್‌ ಇದೀಗ ಸ್ಥಿರ: ನಂದನ್‌ ನಿಲೇಕಣಿ


ಕಂಪನಿಯ ಸ್ಥಾಪಕ ಎನ್‌ಆರ್‌ ನಾರಾಯಣಮೂರ್ತಿ ಮತ್ತು ಹಿಂದಿನ ಆಡಳಿತ ಮಂಡಳಿಯ ನಡುವೆ ಕಾರ್ಪೊರೇಟ್‌ ಆಡಳಿತಕ್ಕೆ ಸಂಬಂಧಿಸಿ ವಿವಾದ ಉಂಟಾಗಿತ್ತು. ಪರಿಣಾಮ ಕಳೆದ ವರ್ಷ ಆಗಸ್ಟ್‌ನಲ್ಲಿ ಸಿಇಒ ವಿಶಾಲ್‌ ಸಿಕ್ಕಾ ರಾಜೀನಾಮೆ ನೀಡಿದ್ದರು. ಹಾಗೂ ಆಗಸ್ಟ್‌ನಲ್ಲಿ ನಂದನ್‌ ನಿಲೇಕಣಿಯವರು ಎರಡನೇ ಬಾರಿಗೆ ಕಾರ‍್ಯಕಾರಿಯೇತರ ಅಧ್ಯಕ್ಷರಾಗಿ ಮರಳಿದ್ದರು.

ಇನ್ಫೋಸಿಸ್‌ನ 37ನೇ ವಾರ್ಷಿಕ ಮಹಾ ಸಭೆಯನ್ನುದ್ದೇಶಿಸಿ ಮಾತನಾಡಿದ ನಿಲೇಕಣಿ, ಈಗ ನಾವು ಅತ್ಯಂತ ಸ್ಥಿರವಾದ ಆಡಳಿತಮಂಡಳಿಯನ್ನು ಹೊಂದಿದ್ದೇವೆ. ಕಂಪನಿಯ ಏಳಿಗೆಗೆ ಎಲ್ಲರೂ ಸಂಘಟಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ