ಆ್ಯಪ್ನಗರ

ಲೈಫ್‌ಸ್ಟೈಲ್‌ ಕಾಯಿಲೆಗಳ ನೆಪ ಹೇಳಿ ವಿಮೆ ನಿರಾಕರಿಸುವಂತಿಲ್ಲ

ನೀಲಂ ಚೋಪ್ರಾ ಎಂಬ ಮಹಿಳೆ ಸಲ್ಲಿಸಿದ್ದ ದೂರಿನ ಸಂಬಂಧ ತೀರ್ಪು ನೀಡಿರುವ ಎನ್‌ಸಿಡಿಆರ್‌ಸಿ ಪರಿಹಾರವಾಗಿ 25,000 ರೂ. ಮತ್ತು ಕಾನೂನು ವೆಚ್ಚವಾಗಿ 5 ಸಾವಿರ ರೂ. ನೀಡುವಂತೆ ಚಂಡೀಗಢದ ಎಲ್‌ಐಸಿ ಶಾಖೆಗೆ ಸೂಚಿಸಿದೆ.

Vijaya Karnataka 13 Oct 2018, 9:16 am
ಹೊಸದಿಲ್ಲಿ: ಜೀವನಶೈಲಿಗೆ ಸಂಬಂಧಿಸಿದ ಸಾಮಾನ್ಯ ಕಾಯಿಲೆಗಳ ನೆಲೆಯಲ್ಲಿ ವಿಮೆಯನ್ನು ನಿರಾಕರಿಸುವಂತಿಲ್ಲ ಎಂದು ದೇಶದ ಅತ್ಯುನ್ನತ ಗ್ರಾಹಕ ಆಯೋಗವು ತೀರ್ಪು ನೀಡಿದೆ. ಅಲ್ಲದೇ, ಪ್ರಕರಣವೊಂದರ ಸಂಬಂಧ ಅರ್ಜಿದಾರರ 5 ಲಕ್ಷ ರೂ.ಗಳ ವಿಮೆ ಕ್ಲೇಮ್‌ ಅನ್ನು ನಿರಾಕರಿಸದಂತೆ ಸೂಚಿಸಿದ್ದು, ಕೂಡಲೇ ಪಾವತಿಸುವಂತೆ ಭಾರತೀಯ ಜೀವ ವಿಮಾ ನಿಗಮಕ್ಕೆ(ಎಲ್‌ಐಸಿ) ಸೂಚಿಸಿದೆ.
Vijaya Karnataka Web LIC.


ನೀಲಂ ಚೋಪ್ರಾ ಎಂಬ ಮಹಿಳೆ ಸಲ್ಲಿಸಿದ್ದ ದೂರಿನ ಸಂಬಂಧ ತೀರ್ಪು ನೀಡಿರುವ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು(ಎನ್‌ಸಿಡಿಆರ್‌ಸಿ), ಪರಿಹಾರವಾಗಿ 25,000 ರೂ. ಮತ್ತು ಕಾನೂನು ವೆಚ್ಚವಾಗಿ 5 ಸಾವಿರ ರೂ.ಗಳನ್ನೂ ಮುಂದಿನ 45 ದಿನಗಳೊಳಗೆ ನೀಲಂಗೆ ನೀಡುವಂತೆ ಚಂಡೀಗಢದ ಎಲ್‌ಐಸಿ ಶಾಖೆಗೆ ಸೂಚಿಸಿದೆ.

ಏನಿದು ಪ್ರಕರಣ?

ನೀಲಂ ಚೋಪ್ರಾ ಅವರ ಪತಿ ಮಧುಮೇಹದಿಂದ ಬಳಲುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಕಂಪನಿಯವರು ವಿಮೆ ರಕ್ಷೆಯನ್ನು ಒದಗಿಸಿದ್ದರು. ಆದರೆ, ಅವರು ಸಲ್ಲಿಸಿದ್ದ ಪ್ರೊಪೋಸಲ್‌ ಅರ್ಜಿಯಲ್ಲಿ ತಮಗೆ ಮಧುಮೇಹ ಇರುವುದನ್ನು ನಮೂದಿಸಿರಲಿಲ್ಲ. 2004ರಲ್ಲಿ ಅವರು ನಿಧನರಾದರು. ಗಂಡನ ನಿಧನದ ಬಳಿಕ ನೀಲಂ ಚೋಪ್ರಾ ಅವರು ವಿಮೆಗಾಗಿ ಕ್ಲೇಮ್‌ ಮಾಡಿದರು. ಆದರೆ, ಆರೋಗ್ಯದ ಮಾಹಿತಿ ಒದಗಿಸಿಲ್ಲ ಎನ್ನುವ ಕಾರಣ ಮುಂದಿಟ್ಟ ಎಲ್‌ಐಸಿ, ವಿಮೆ ರಕ್ಷೆಯ ಹಕ್ಕನ್ನು ನಿರಾಕರಿಸಿತ್ತು. ಇದೀಗ, ಗ್ರಾಹಕರ ಹಕ್ಕನ್ನು ಎನ್‌ಸಿಡಿಆರ್‌ಸಿ ಎತ್ತಿ ಹಿಡಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ