ಆ್ಯಪ್ನಗರ

ಬ್ಯಾಂಕ್‌ ಠೇವಣಿಗೆ ವಿಮೆ ವ್ಯಾಪ್ತಿ ಏರಿಕೆ : ಚಳಿಗಾಲದ ಅಧಿವೇಶನದಲ್ಲಿ ವಿದೇಯಕ ಮಂಡನೆ

ಗ್ರಾಹಕರ ಬ್ಯಾಂಕ್‌ ಠೇವಣಿಗಳಿಗೆ ಪ್ರಸ್ತುತ ಇರುವ ಗರಿಷ್ಠ 1 ಲಕ್ಷ ರೂ.ಗಳ ವಿಮಾ ರಕ್ಷೆಯನ್ನು ಹೆಚ್ಚಿಸಲು ಕೇಂದ್ರ ಸರಕಾರ ಮುಂದಾಗಿದೆ. ಈ ಸಂಬಂಧ ವಿಧೇಯಕವನ್ನು ಮಂಡಿಸುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಹೇಳಿದ್ದಾರೆ

Vijaya Karnataka Web 16 Nov 2019, 1:07 pm
ಪಿಟಿಐ ಹೊಸದಿಲ್ಲಿ: ಗ್ರಾಹಕರ ಬ್ಯಾಂಕ್‌ ಠೇವಣಿಗಳಿಗೆ ಪ್ರಸ್ತುತ ಇರುವ ಗರಿಷ್ಠ 1 ಲಕ್ಷ ರೂ.ಗಳ ವಿಮಾ ರಕ್ಷೆಯನ್ನು ಹೆಚ್ಚಿಸಲು ಕೇಂದ್ರ ಸರಕಾರ ಮುಂದಾಗಿದೆ. ಈ ಸಂಬಂಧ ವಿಧೇಯಕವನ್ನು ಮಂಡಿಸುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಹೇಳಿದ್ದಾರೆ. ಇದರ ಜೊತೆಗೆ ಬಹು ರಾಜ್ಯಗಳಲ್ಲಿನ ಕೋ-ಆಪರೇಟಿವ್‌ ಬ್ಯಾಂಕ್‌ಗಳ ನಿಯಂತ್ರಿಸುವ ವಿಧೇಯಕವನ್ನೂ ಮಂಡಿಸಲಿದೆ. ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಗೊಳ್ಳುತ್ತಿದ್ದು, ಈ ವಿಧೇಯಕಗಳು ಮಂಡನೆಯಾಗಲಿವೆ ಎಂದು ಸಚಿವೆ ತಿಳಿಸಿದ್ದಾರೆ.
Vijaya Karnataka Web nirmala sitharaman
ನಿರ್ಮಲಾ ಸೀತಾರಾಮನ್


ಮುಂಬಯಿ ಮೂಲದ ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಕೋ-ಆಪರೇಟಿವ್‌ ಬ್ಯಾಂಕ್‌ ಹಗರಣದಿಂದಾಗಿ, ಆರ್‌ಬಿಐ ನಿರ್ಬಂಧ ಗಳನ್ನು ವಿಧಿಸಿದೆ. ಇದರಿಂದಾಗಿ ಗ್ರಾಹಕರಿಗೆ ತಮ್ಮ ಠೇವಣಿಯನ್ನು ಹಿಂಪಡೆಯಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿಗ್ರಾಹಕಸ್ನೇಹಿ ವಿಧೇಯಕಗಳ ಜಾರಿಗೆ ಸರಕಾರ ಮುಂದಾಗಿದೆ. ''ಸಾಮಾಜಿಕ ಭದ್ರತಾ ಯೋಜನೆಗಳ ವೆಚ್ಚವನ್ನು ಕಡಿತ ಮಾಡುವ ಉದ್ದೇಶ ಸರಕಾರಕ್ಕಿಲ್ಲ. ಬಜೆಟ್‌ನಲ್ಲಿನೀಡಲಾಗಿರುವ ಎಲ್ಲಹಣ ಖರ್ಚು ಮಾಡಲು ಸಂಬಂಧ ಪಟ್ಟ ಇಲಾಖೆಗಳಿಗೆ ಸೂಚಿಸ ಲಾಗುವುದು,'' ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

2000 ರೂ. ನೋಟುಗಳೂ ಅಮಾನ್ಯವಾಗಲಿ: ವಿತ್ತ ಸಚಿವಾಲಯದ ನಿವೃತ್ತ ಅಧಿಕಾರಿ ಹೇಳಿಕೆ

ಟೆಲಿಕಾಂ ಕಂಪನಿ ಮುಚ್ಚಲು ಬಿಡೆವು
ಟೆಲಿಕಾಂ ವಲಯದ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ ನಿರ್ಮಲಾ ಸೀತಾರಾಮನ್‌, ''ಯಾವುದೇ ಟೆಲಿಕಾಂ ಕಂಪನಿಗೆ ಬೀಗ ಬೀಳುವುದು ನಮಗೆ ಇಷ್ಟವಿಲ್ಲ. ಎಲ್ಲ ಕಂಪನಿಗಳೂ ಚೆನ್ನಾಗಿರಬೇಕು ಎನ್ನುವುದು ನಮ್ಮ ಬಯಕೆ,'' ಎಂದಿದ್ದಾರೆ. ವೊಡಾಫೋನ್‌ ಮತ್ತು ಏರ್‌ಟೆಲ್‌ ತೀವ್ರ ನಷ್ಟಕ್ಕೀಡಾಗಿದ್ದು, ಬಾಕಿ ಪಾವತಿಯ ಸಮಸ್ಯೆ ಎದುರಿಸುತ್ತಿವೆ.

ಶಿಷ್ಟಾಚಾರ ಬದಿಗೊತ್ತಿ ಮಹಿಳಾ ಪೇದೆಯ ಆರೋಗ್ಯ ವಿಚಾರಿಸಿದ ರಾಷ್ಟ್ರಪತಿ

ಪ್ರಸ್ತುತ ಠೇವಣಿಗಳಿಗೆ ಲಕ್ಷ ರೂ. ವಿಮೆ ರಕ್ಷೆ
ಯಾವುದೇ ಬ್ಯಾಂಕುಗಳಲ್ಲಿ ಗ್ರಾಹಕರು ಎಷ್ಟೇ ಠೇವಣಿ ಇಟ್ಟರೂ, ಬ್ಯಾಂಕ್‌ಗಳು ಮುಳುಗಿದ ಸಂದರ್ಭದಲ್ಲಿ ಗ್ರಾಹಕರಿಗೆ ಗರಿಷ್ಠ 1 ಲಕ್ಷ ರೂ.ಗಳ ವಿಮಾ ರಕ್ಷೆಯಷ್ಟೇ ದೊರೆಯುತ್ತದೆ. ಡಿಪಾಸಿಟ್‌ ಇನ್ಷೂರೆನ್ಸ್‌ ಆ್ಯಂಡ್‌ ಕ್ರೆಡಿಟ್‌ ಗ್ಯಾರಂಟಿ ಕಾರ್ಪೋರೇಷನ್‌ನಿಂದ ಈ ವಿಮಾ ರಕ್ಷೆ ದೊರಕುತ್ತಿದೆ. ಗ್ರಾಹಕರ ಹಿತದೃಷ್ಟಿಯಿಂದ ವಿಮಾ ರಕ್ಷೆಯ ಮೊತ್ತವನ್ನು ಹೆಚ್ಚಿಸಬೇಕೆಂಬ ಬೇಡಿಕೆಗಳಿದ್ದು, ವಿಧೇಯಕ ಮಂಡನೆಗೆ ಸರಕಾರ ಮುಂದಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ವಿಮಾ ಭದ್ರತೆಯು ಹಾಲಿ 1 ಲಕ್ಷ ರೂ. ನಿಂದ ಕನಿಷ್ಠ 2 ಲಕ್ಷ ರೂ.ಗೆ ಹೆಚ್ಚಳ ಮಾಡುವ ಸಾಧ್ಯತೆಗಳಿವೆ. ಮೊದಲಿಗೆ ಬ್ಯಾಂಕ್‌ನಲ್ಲಿನ ಗ್ರಾಹಕರ ಠೇವಣಿ ಮೇಲೆ 30 ಸಾವಿರ ರೂ. ವಿಮೆ ರಕ್ಷೆ ಇತ್ತು. 1993ರಲ್ಲಿಅದನ್ನು 1 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ