ಆ್ಯಪ್ನಗರ

ಪ್ರಸ್ತುತ ಹೂಡಿಕೆಗೆ ಉತ್ತಮ ಅವಕಾಶ: ಉದ್ಯಮಿಗಳನ್ನು ಹುರಿದುಂಬಿಸಿದ ನರೇಂದ್ರ ಮೋದಿ!

ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೋವಿಡ್‌-19 ಬಿಕ್ಕಟ್ಟು ಉತ್ತಮ ಅವಕಾಶ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉದ್ಯಮಿಗಳನ್ನು ಹುರಿದುಂಬಿಸಿದ್ದಾರೆ. ಆಮದು ಮಾಡಿಕೊಳ್ಳುವ ಉತ್ಪನ್ನಗಳನ್ನು ಇಲ್ಲಿಯೇ ಉತ್ಪಾದಿಸಬೇಕು ಎಂದಿದ್ದಾರೆ.

Vijaya Karnataka Web 12 Jun 2020, 5:05 pm
ಕೋಲ್ಕತ: ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೋವಿಡ್‌-19 ಬಿಕ್ಕಟ್ಟು ಉತ್ತಮ ಅವಕಾಶ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉದ್ಯಮಿಗಳನ್ನು ಹುರಿದುಂಬಿಸಿದ್ದಾರೆ.
Vijaya Karnataka Web modi  new


ಕೋಲ್ಕತದಲ್ಲಿ ನಡೆದ ಭಾರತೀಯ ವಾಣಿಜ್ಯ ಒಕ್ಕೂಟದ (ಐಸಿಸಿ) 95ನೇ ವಾರ್ಷಿಕ ಅಧಿವೇಶನವನ್ನು ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ವಿದೇಶದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳನ್ನು ಇಲ್ಲಿಯೇ ಉತ್ಪಾದಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು.

''ಕಳೆದ ಐದಾರು ವರ್ಷಗಳಲ್ಲಿ ಭಾರತ ಸ್ವಾವಲಂಬನೆಯ ಹಾದಿಯಲ್ಲಿಮುನ್ನಡೆದಿದೆ. ಕೋವಿಡ್‌-19 ಬಿಕ್ಕಟ್ಟು ಈ ಪ್ರಯತ್ನಗಳನ್ನು ಮತ್ತಷ್ಟು ತೀವ್ರಗೊಳಿಸಲು ಅವಕಾಶ ಸೃಷ್ಟಿಸಿದೆ. ದಿಟ್ಟ ನಿರ್ಧಾರ ಮತ್ತು ಹೂಡಿಕೆ ಕೈಗೊಳ್ಳಲು ಇದು ಸಕಾಲ'' ಎಂದರು.

ಹಣಕಾಸು ಕೊರತೆ: ಇಎಂಐ, ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿ ಹೆಚ್ಚಳ!

'' ಭಾರತೀಯರು ತಮಗೆ ಬೇಕಾದ ಉತ್ಪನ್ನಗಳನ್ನು ತಾವೇ ತಯಾರಿಸಬೇಕು ಹಾಗೂ ಇತರ ರಾಷ್ಟ್ರಗಳಲ್ಲೂ ಮಾರುಕಟ್ಟೆ ಕಂಡುಕೊಳ್ಳಬೇಕು ಎಂಬುದು ಸ್ವಾಮಿ ವಿವೇಕಾನಂದ ಅವರು ಹೇಳುತ್ತಿದ್ದರು. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜನ ಸ್ನೇಹಿ, ಪರಿಸರ ಸ್ನೇಹಿ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದೆ. ಸರಕಾರದ ಇತ್ತೀಚಿನ ನಿರ್ಧಾರಗಳು ರೈತರಿಗೆ ಅವರ ಕೃಷಿ ಉತ್ಪನ್ನಗಳನ್ನು ಎಲ್ಲಿಬೇಕಾದರೂ ಮಾರಾಟ ಮಾಡಬಹುದಾದ ಸ್ವಾತಂತ್ರ್ಯ ನೀಡಿದೆ'' ಎಂದು ಪ್ರಧಾನಿ ತಿಳಿಸಿದರು.

ಲಾಕ್‌ಡೌನ್‌ ತೆರವಿನ ನಂತರವಷ್ಟೇ ಪದವಿ ಪರೀಕ್ಷೆ: ಡಾ. ಅಶ್ವತ್ಥನಾರಾಯಣ

ವೈದ್ಯಕೀಯ ಸಲಕರಣೆಗಳ ಉತ್ಪಾದನೆ, ರಕ್ಷಣಾ ಉತ್ಪಾದನೆ, ಕಲ್ಲಿದ್ದಲು ಮತ್ತು ಗಣಿಗಾರಿಕೆ, ಖಾದ್ಯ ತೈಲ ಮತ್ತು ಇತರ ವಲಯಗಳಲ್ಲಿ ದೇಶ ಸ್ವಾವಲಂಬಿಯಾಗಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಸೌರ ವಿದ್ಯುತ್‌ ಉತ್ಪಾದನೆ ವಲಯವನ್ನು ಪ್ರವೇಶಿಸಬೇಕು ಎಂದು ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ