ಆ್ಯಪ್ನಗರ

ರಾಜ್ಯದಲ್ಲಿ 27,000 ಕೋಟಿ ಹೂಡಿಕೆಗೆ ಅನುಮೋದನೆ: 101 ಉದ್ದಿಮೆಗೆ ಕ್ಲಿಯರೆನ್ಸ್‌, ಕೊರೊನಾ ನಡುವೆಯೂ ಹೆಚ್ಚಿದ ಆಕರ್ಷಣೆ

ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿನಲ್ಲಿ 27,000 ಕೋಟಿ ಮೌಲ್ಯದ ಬಂಡವಾಳ ಹೂಡಿಕೆಯ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ. 101 ಉದ್ದಿಮೆಗೆ ಕ್ಲಿಯರೆನ್ಸ್ ಸಿಕ್ಕಿದೆ. ಇದರಿಂದ ಮೂರು ವರ್ಷಗಳಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಾಗಲಿವೆ.

Vijaya Karnataka Web 4 Aug 2020, 9:39 am
ಕೇಶವಪ್ರಸಾದ್‌ ಬಿ. ಬೆಂಗಳೂರು
Vijaya Karnataka Web ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿನಲ್ಲಿ 27,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬಂಡವಾಳ ಹೂಡಿಕೆಯ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ. ಇದರ ಪರಿಣಾಮ ಮುಂದಿನ 3 ವರ್ಷಗಳಲ್ಲಿ45 ಸಾವಿರಕ್ಕೂ ಹೆಚ್ಚು ನೇರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

''ಕಳೆದ ಮಾರ್ಚ್ 24ರಂದು ಅನುಮೋದನೆ ಪಡೆದಿರುವುದು ಬಹುತೇಕ ಕಂಪನಿಗಳ ಹೊಸ ವಿಸ್ತರಣಾ ಯೋಜನೆಗಳಾಗಿವೆ. ಈ ನಡುವೆ ಹಲವು ಹೊಸ ಪ್ರಸ್ತಾಪಗಳೂ ಬಂದಿವೆ. ಅನುಮೋದಿತ ಕಂಪನಿಗಳಿಗೆ ಭೂಮಿಯನ್ನೂ ಮಂಜೂರು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಸೇರಿದಂತೆ, ಹೊಸ ಹೂಡಿಕೆಗಳೂ ಬರುವ ಸಾಧ್ಯತೆಗಳಿವೆ,'' ಎಂದು ಕೈಗಾರಿಕಾ ಇಲಾಖೆಗೆ ಸೇರಿದ ಉದ್ಯೋಗ ಮಿತ್ರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಾಹನಗಳ ಮಾರಾಟ ಡಬಲ್‌: ಕೋವಿಡ್‌ ಪೂರ್ವ ಮಟ್ಟಕ್ಕೆ ಸುಧಾರಣೆ

''ಕೋವಿಡ್‌ ಇದ್ದರೂ ಹೂಡಿಕೆದಾರರು ಉತ್ಸುಕರಾಗಿರುವುದು ಶುಭ ಸೂಚನೆ. ಹೊಸ ಕೈಗಾರಿಕಾ ನೀತಿ, ಭೂ ಸುಧಾರಣಾ ಕಾಯಿದೆಯ ತಿದ್ದುಪಡಿ ಇತ್ಯಾದಿ ಸುಧಾರಣಾ ಕ್ರಮಗಳಿಂದಾಗಿ ಹೂಡಿಕೆದಾರರು ಹೆಚ್ಚು ಆಕರ್ಷಿತರಾಗಿದ್ದಾರೆ. ಇಲಾಖೆಯನ್ನು ಸಂಪರ್ಕಿಸುತ್ತಿದ್ದಾರೆ'' ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

ಯಾವ ಉದ್ದಿಮೆಗಳಲ್ಲಿ ಹೂಡಿಕೆ?
ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಔಷಧ, ಇಂಧನ, ಉಕ್ಕು, ರಿಯಾಲ್ಟಿ, ಪ್ಲಾಸ್ಟಿಕ್‌, ಕೃಷಿ, ಆಹಾರ ಸಂಸ್ಕರಣೆ, ಹ್ಯಾಂಡ್‌ ಬ್ಯಾಗ್ಸ್‌, ಪಾದರಕ್ಷೆ, ಆಟೊಮೊಬೈಲ್‌ ಬಿಡಿಭಾಗಗಳು, ರೆಡಿಮೇಡ್‌ ಗಾರ್ಮೆಂಟ್ಸ್‌, ಲಾಜಿಸ್ಟಿಕ್ಸ್‌, ಎಂಜಿನಿಯರಿಂಗ್‌, ರಾಸಾಯನಿಕ ಉತ್ಪಾದನೆ, ಏರೋಸ್ಪೇಸ್‌, ಎಥೆನಾಲ್‌ ಉತ್ಪಾದನೆ, ಖಾದ್ಯ ತೈಲ, ಏರ್‌ ಕಂಡೀಶನಿಂಗ್‌, ಕೇಬಲ್ಸ್‌ ಇತ್ಯಾದಿ ವಲಯಗಳಲ್ಲಿ ಹೂಡಿಕೆಯಾಗಲಿದೆ.
11 ಲಕ್ಷ ಕೋಟಿ ರೂ. ಮೌಲ್ಯದ ಮೊಬೈಲ್‌ ಉತ್ಪಾದನೆಗೆ ಕಂಪನಿಗಳಿಂದ ಪ್ರಸ್ತಾಪ

ಹೂಡಿಕೆ ಎಲ್ಲಿ?

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಧಾರವಾಡ, ಯಾದಗಿರಿ, ಚಾಮರಾಜನಗರ, ಹಾಸನ, ಮಂಡ್ಯ, ಮಂಗಳೂರು, ಬಳ್ಳಾರಿ, ಬೆಳಗಾವಿ ಇತ್ಯಾದಿ ಕಡೆಗಳಲ್ಲಿ ಹೂಡಿಕೆಯಾಗಲಿದೆ.
ಪ್ರಮುಖ ಹೂಡಿಕೆ ಯೋಜನೆಗಳು
ಜೆಎಸ್‌ಡಬ್ಲುತ್ರ್ಯ ಮೆಟಾಲಿಕ್ಸ್‌, ಬಳ್ಳಾರಿ 13,026 ಕೋಟಿ
ಸೆರುಲಿಯನ್‌ ಸಲ್ಯೂಷನ್ಸ್‌, ದಾವಣಗೆರೆ 1,347 ಕೋಟಿ
ಸಿಮನ್ಸ್‌ ಹೆಲ್ತ್‌ ಕೇರ್‌, ಬೆಂಗಳೂರು 1,085 ಕೋಟಿ
ಜೆಎಸ್‌ಡಬ್ಲುತ್ರ್ಯ ಟೆಕ್ನೊ ಬಳ್ಳಾರಿ 892 ಕೋಟಿ
ವನ್ಯಾ ಸ್ಟೀಲ್ಸ್‌, ಕೊಪ್ಪಳ 761 ಕೋಟಿ
ಎಪ್ಸಿಲಾನ್‌ ಕಾರ್ಬನ್‌, ಬಳ್ಳಾರಿ 900 ಕೋಟಿ
ಟಿಸಿಎಸ್‌ ಎಸ್‌ಇಝಡ್‌ ಮಂಗಳೂರು 495 ಕೋಟಿ
ಇಂಡಿಯಾ ಸ್ಯಾಟ್‌ಕಾಂ, ಬೆಂಗಳೂರು 419 ಕೋಟಿ
ಕೊರೊನಾ ಹಿನ್ನೆಲೆ, ಆರ್ಥಿಕ ಸಮಸ್ಯೆಯಿಂದ ಚಿನ್ನದ ಸಾಲಕ್ಕೆ ಹೆಚ್ಚಿದ ಬೇಡಿಕೆ

ಕೈಗಾರಿಕಾ ಸುಧಾರಣೆ ಪ್ರಕ್ರಿಯೆಗಳ ಸಕಾರಾತ್ಮಕ ಫಲಿತಾಂಶ ಕಂಡು ಬರುತ್ತಿದೆ. ಉದ್ಯೋಗಮಿತ್ರದಲ್ಲಿ ಹೂಡಿಕೆದಾರರ ವಿಚಾರಣೆಯಲ್ಲಿ ಹೆಚ್ಚಳವಾಗಿದೆ.
-ಜಗದೀಶ್‌ ಶೆಟ್ಟರ್‌, ಕೈಗಾರಿಕಾ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ