ಆ್ಯಪ್ನಗರ

'ಮಸಾಲೆ ಕಿಂಗ್'‌ ಧರ್ಮಪಾಲ ಗುಲಾಟಿಗಿತ್ತು ಬ್ಯಾಡಗಿ ನಂಟು, ಮೆಣಸಿನಕಾಯಿ ಮಾರುಕಟ್ಟೆಗೆ ಹಲವು ಬಾರಿ ಭೇಟಿ

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಧರ್ಮಪಾಲ ಗುಲಾಟಿ ಹಲವು ಬಾರಿ ಭೇಟಿ ನೀಡಿದ್ದರು. ಮೆಣಸಿನಕಾಯಿ ವರ್ತಕ ಹಾಗೂ ಮಾಜಿ ಶಾಸಕ ಸುರೇಶ ಗೌಡ ಪಾಟೀಲ ಅವರಿಗೆ ಗುಲಾಟಿ ಅತ್ಯಂತ ಆತ್ಮೀಯರಾಗಿದ್ದರು. ಬ್ಯಾಡಗಿಯಲ್ಲಿ ಅವರು ಶಾಲೆಯನ್ನೂ ತೆರೆದಿದ್ದರು.

Vijaya Karnataka 3 Dec 2020, 10:50 pm
ಬ್ಯಾಡಗಿ (ಹಾವೇರಿ): ಗುರುವಾರ ನಿಧನರಾದ ದಿಲ್ಲಿಯ ಎಂಡಿಎಚ್‌ ಮಸಾಲೆ ಕಂಪನಿ ಮುಖ್ಯಸ್ಥ, ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತ ಮಹಾಶಯ ಧರ್ಮಪಾಲ ಗುಲಾಟಿ ಅವರಿಗೂ ಬ್ಯಾಡಗಿಗೂ ಬಿಡಿಸಲಾರದ ನಂಟು.
Vijaya Karnataka Web Dharampal Gulati in Byadagi
ಬ್ಯಾಡಗಿ ಮಾಜಿ ಶಾಸಕ ಸುರೇಶಗೌಡ ಪಾಟೀಲ ಕುಟುಂಬದೊಂದಿಗೆ ಮಹಾಶಯ ಧರ್ಮಪಾಲ ಗಲಾಟಿ


ಬ್ಯಾಡಗಿ ಮೆಣಸಿನಕಾಯಿ ಕಂಪನ್ನು ಜಗತ್ತಿನಾದ್ಯಂತ ಪಸರಿಸಿದ ಪ್ರಮುಖರಲ್ಲಿ ಮಹಾಶಯ ಧರ್ಮಪಾಲ ಗುಲಾಟಿ ಒಬ್ಬರಾಗಿದ್ದಾರೆ. 90 ಇಳಿವಯಸ್ಸಿನಲ್ಲಿಯೂ ನವ ತರುಣರಂತೆ ಇದ್ದ ಗುಲಾಟಿ, ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಹಲವು ಬಾರಿ ಭೇಟಿ ನೀಡಿದ್ದರು. ಇಲ್ಲಿನ ಮೆಣಸಿನಕಾಯಿ ಗಣ್ಯ ವರ್ತಕ ಹಾಗೂ ಮಾಜಿ ಶಾಸಕ ಸುರೇಶ ಗೌಡ ಪಾಟೀಲ ಅವರಿಗೆ ಅತ್ಯಂತ ಆತ್ಮೀಯರಾಗಿದ್ದರು. ತಮ್ಮ ಮಗನ ಮದುವೆ ಸೇರಿದಂತೆ ಹಲವು ಬಾರಿ ಮನೆಗೆ ಭೇಟಿ ನೀಡಿ ಕಾಲ ಕಳೆದದ್ದನ್ನು ಸುರೇಶ ಗೌಡ ನೆನಪಿಸಿಕೊಳ್ಳುತ್ತಾರೆ.

ವಿದ್ಯಾಮಂದಿರ ಸ್ಥಾಪನೆ

ಧರ್ಮಪಾಲರು ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ತುಂಬು ತೆಗೆಯುವ ಸಾವಿರಾರು ಮಹಿಳೆಯರು ಹಾಗೂ ಹಮಾಲಿ ಕಾರ್ಮಿಕರು ಕಾರ್ಯನಿರ್ವಹಿಸುವುದನ್ನು ಕಣ್ಣಾರೆ ನೋಡಿದ್ದರು. ಪಟ್ಟಣದ ಬನ್ನಿಹಟ್ಟಿ ರಸ್ತೆಯಲ್ಲಿ 2003ರಲ್ಲಿ ಮಹಾಶಯ ಧರ್ಮಪಾಲ ವಿದ್ಯಾಮಂದಿರ ಎಂಬ ಹೆಸರಿನ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕಾರ್ಮಿಕರ ಮಕ್ಕಳ ಉಚಿತ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ.

ಪಿತೃಸಮಾನರಾಗಿದ್ದ ಮಹಾಶಯ ಧರ್ಮಪಾಲ ಗುಲಾಟಿ ಅವರ ಜತೆ 25 ವರ್ಷಗಳ ಒಡನಾಟ. ಅವರ ವಿನಯ, ಆದರ್ಶಗಳು ನಮಗೆ ಮಾದರಿ. ಅವರ ಅಗಲಿಕೆ ನಮ್ಮ ಇಡೀ ಕುಂಟುಂಬ ಮತ್ತು ಮಸಾಲೆ ಕ್ಷೇತ್ರ ಹಾಗೂ ಮೆಣಸಿನಕಾಯಿ ಮಾರುಕಟ್ಟೆಗೆ ತುಂಬಲಾರದ ನಷ್ಟ ಎಂದು ಮಾಜಿ ಶಾಸಕ ಹಾಗೂ ಮೆಣಸಿನಕಾಯಿ ವರ್ತಕರೂ ಆಗಿರುವ ಸುರೇಶಗೌಡ ಪಾಟೀಲ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ