ಆ್ಯಪ್ನಗರ

ದೊಡ್ಡ ಮೊತ್ತದ ನೋಟು ನಿಷೇಧದ ಬಳಿಕ 2,000 ರೂ. ನೋಟಿನ ಅವಶ್ಯಕತೆಯಿತ್ತೆ?: ಉದಯ್‌ ಕೋಟಕ್‌

'500 ಮತ್ತು 1,000 ರೂ. ಮುಖ ಬೆಲೆಯ ನೋಟುಗಳನ್ನು ಅಪಮೌಲ್ಯೀಕರಣಗೊಳಿಸುತ್ತೀರಿ ಎಂದಾದರೆ 2,000 ರೂ. ಮುಖ ಬೆಲೆಯ ನೋಟನ್ನು ಏಕೆ ಬಿಡುಗಡೆ ಗೊಳಿಸಿದ್ದೀರಿ?' ಎಂದು ಉದಯ್‌ ಪ್ರಶ್ನಿಸಿದ್ದಾರೆ.

THE ECONOMIC TIMES 10 Dec 2018, 3:00 pm
ಮುಂಬಯಿ: 2,000 ರೂ. ಮುಖಬೆಲೆಯ ನೋಟನ್ನು ಬಿಡುಗಡೆ ಮಾಡದೆ ಇರುತ್ತಿದ್ದರೆ, 500/1000 ರೂ. ಮುಖಬೆಲೆಯ ನೋಟುಗಳ ನಿಷೇಧ ನಿಜಕ್ಕೂ ಉತ್ತಮ ನಡೆಯಾಗಿರುತ್ತಿತ್ತು ಎಂದು ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಉಪಾಧ್ಯಕ್ಷ ಉದಯ್‌ ಕೋಟಕ್‌ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
Vijaya Karnataka Web Uday Kotak


ಸಣ್ಣ ವ್ಯಾಪಾರಿಗಳೂ ಇಂದಿಗೂ ಕಷ್ಟ ಪಡುತ್ತಿದ್ದಾರೆ. ಹಾಗಾಗಿ ನೋಟು ನಿಷೇಧದ ಯಶಸ್ಸಿನ ಬಗ್ಗೆ ಚರ್ಚೆ ವ್ಯರ್ಥ ಎಂದಿದ್ದಾರೆ. ನೋಟು ನಿಷೇಧಗೊಂಡು 2 ವರ್ಷದ ಬಳಿಕ ಹೀಗೊಂದು ಅಭಿಪ್ರಾಯ ವ್ಯಕ್ತವಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಒಂದು ವೇಳೆ ಚೆನ್ನಾಗಿ ಪ್ಲಾನ್‌ ಮಾಡಿದಿದ್ದರೆ ನೋಟು ನಿಷೇಧ ಅತ್ಯಂತ ಪರಿಣಾಮಕಾರಿಯಾಗಿರುತ್ತಿತ್ತು ಎಂದು ಉದಯ್‌ ಕೋಟಕ್‌ ತಿಳಿಸಿದ್ದಾರೆ.

'500 ಮತ್ತು 1,000 ರೂ. ಮುಖ ಬೆಲೆಯ ನೋಟುಗಳನ್ನು ಅಪಮೌಲ್ಯೀಕರಣಗೊಳಿಸುತ್ತೀರಿ ಎಂದಾದರೆ 2,000 ರೂ. ಮುಖ ಬೆಲೆಯ ನೋಟನ್ನು ಏಕೆ ಬಿಡುಗಡೆ ಗೊಳಿಸಿದ್ದೀರಿ?' ಎಂದು ಉದಯ್‌ ಪ್ರಶ್ನಿಸಿದ್ದಾರೆ.

ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯನ್‌ ಅವರ ಪುಸ್ತಕ ಬಿಡುಗಡೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಉದಯ್‌ ನೋಟು ನಿಷೇಧ ಕ್ರಮವನ್ನು ಅನುಷ್ಠಾನಕ್ಕೆ ತರುವಲ್ಲಿ ಕೇಂದ್ರ ಸರಕಾರ ವಿಫಲವಾಗಿರುವುದನ್ನು ಒತ್ತಿ ಹೇಳಿದ್ದಾರೆ.

2016ರ ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅಚ್ಚರಿ ಎಂಬಂತೆ 500/1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರು. ಕಪ್ಪು ಹಣ ಮತ್ತು ನಕಲಿ ನೋಟುಗಳಿಗೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದಾಗಿ ಮೋದಿ ಸರಕಾರ ಸಮರ್ಥನೆ ನೀಡಿತ್ತು. ಆದರೆ ನಿಷೇಧಗೊಂಡ ನೋಟುಗಳ ಪೈಕಿ ಶೇ.99.3ರಷ್ಟು ನೋಟುಗಳು ಬ್ಯಾಂಕ್‌ಗೆ ಹಿಂದಿರುಗಿದ್ದವು. ಸುಮಾರು 15.8 ಶತಕೋಟಿ ರೂ.ನಷ್ಟು ಹಣ ವಾಪಾಸಾಗಿದ್ದು ಮೋದಿ ಸರಕಾರದ ನೋಟು ನಿಷೇಧದ ಕ್ರಮವನ್ನು ಪ್ರಶ್ನಾರ್ಥಕವಾಗಿ ನೋಡುವಂತೆ ಮಾಡಿತ್ತು. ಬೆಟ್ಟ ಅಗೆದು ಇಲಿ ಹಿಡಿದ ಕೇಂದ್ರ ಸರಕಾರ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ